ಭಾರೀ ಪ್ರವಾಹದಿಂದ ಉಂಟಾದ ದುರಂತದ ನಡುವೆ ಬಿಜೆಪಿ ಆಯೋಜಿಸಿದ್ದ ಸಂಸದರ ಔತಣಕೂಟವನ್ನು ತುರ್ತು ಆಗಿ ರದ್ದು ಮಾಡಲಾಗಿದೆ.
ನಿನ್ನೆ ರಾತ್ರಿ ನಡೆಯಬೇಕಿದ್ದ ಸಂಸದರ ಔತಣಕೂಟ ರದ್ದು ಮಾಡಲಾಗಿದೆ. ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಈ ಕೂಟ ಏರ್ಪಡಿಸಲಾಗಿತ್ತು.
ಪಂಜಾಬ್, ಜಮ್ಮು ಕಾಶ್ಮೀರ ಸೇರಿದಂತೆ ಹಲವೆಡೆ ಪ್ರವಾಹ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ದುಃಖದ ಘಟನೆಯ ಹಿನ್ನೆಲೆಯಲ್ಲಿ ಔತಣಕೂಟವನ್ನು ರದ್ದು ಮಾಡಲಾಗಿದೆ.
ಸೆಪ್ಟೆಂಬರ್ 8ರಂದು ಪ್ರಧಾನಿ ನಿವಾಸದಲ್ಲಿ ನಡೆಯಬೇಕಿದ್ದ NDA ಸಂಸದರ ಭೋಜನವನ್ನೂ ಸಹ ರದ್ದುಪಡಿಸಲಾಗಿದೆ.
ಪ್ರವಾಹದ ದುರಂತದ ಹಿನ್ನೆಲೆಯಲ್ಲಿ, ಸಂತಾಪ ಸೂಚಕವಾಗಿ BJP ಈ ನಿರ್ಧಾರ ತೆಗೆದುಕೊಂಡಿದೆ.






