ದೇಶದ ಹಲವೆಡೆ ಭಾರಿ ಮಳೆ – ಪ್ರವಾಹ, ಭೂಕುಸಿತಕ್ಕೆ ಜನಜೀವನ ಅಸ್ತವ್ಯಸ್ತ
ಧಾರಾಕಾರ ಮಳೆ ಮತ್ತು ಹಠಾತ್ ಪ್ರವಾಹಗಳು ದೇಶದ ಹಲವಾರು ಭಾಗಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿವೆ, ದೇಶದ ಹಲವೆಡೆ ನಡೆದ ಪ್ರತ್ಯೇಕ ಘಟನೆಗಳಲ್ಲಿ ಜೀವ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಿದೆ.
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಅವಶೇಷಗಳಡಿಯಲ್ಲಿ ಇಬ್ಬರು ಜೀವಂತ ಸಮಾಧಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಅನ್ನಿ ತಹಸಿಲ್ನ ದೆಯುತಿ ಪಂಚಾಯತ್ ಬಳಿ ಮೇಘಸ್ಫೋಟ ಸಂಭವಿ ಹತ್ತು ಅಂಗಡಿಗಳು ಮತ್ತು ಮೂರು ವಾಹನಗಳು ಕೊಚ್ಚಿಹೋಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶಕ ಸುದೇಶ್ ಮೊಖ್ತಾ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮಧ್ಯಪ್ರದೇಶದ ಇಂದೋರ್ ಮತ್ತು ಬೇತುಲ್ ಜಿಲ್ಲೆಯ ನದಿ ಮತ್ತು ಕಾಲುವೆಗಳಲ್ಲಿ ಬಾಲಕಿ ಸೇರಿದಂತೆ ಕನಿಷ್ಠ ಏಳು ಜನರು ಕೊಚ್ಚಿ ಹೋಗಿದ್ದಾರೆ. ಇಂದೋರ್ನಲ್ಲಿ, ಚಂದನ್ ನಗರ ಪ್ರದೇಶದಲ್ಲಿ 23 ವರ್ಷದ ಜಾಫರ್ ಖಾನ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ, 26 ವರ್ಷದ ಮಹಿಳೆಯೊಬ್ಬಳು ನೀರಿನಲ್ಲಿ ಬಿದ್ದಿದ್ದ ತನ್ನ ಮಗನನ್ನ ಉಳಿಸಲು ಹೋಗಿ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳಿಯರು ಮಗನನ್ನ ಬದುಕಿಸಿದ್ದಾರೆ. ಆದರೆ ಆಕೆಯ ದೇಹ ಪತ್ತೆಯಾಗಿಲ್ಲ.
ಉತ್ತರಾಖಂಡದಲ್ಲಿ ಕಳೆದ 24 ಗಂಟೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗರ್ವಾಲ್ ಬೆಟ್ಟಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ. ಉತ್ತರಕಾಶಿ ಜಿಲ್ಲೆಯ ಪುರೋಲಾ ಪ್ರದೇಶದ ಕುಮೋಲಾ ರಸ್ತೆಯಲ್ಲಿ ನಸುಕಿನ 2 ಗಂಟೆ ಸುಮಾರಿಗೆ ಎರಡು ಆಭರಣ ಮಳಿಗೆಗಳು ಸೇರಿದಂತೆ ಎಂಟು ಅಂಗಡಿಗಳು ಕೊಚ್ಚಿ ಹೋಗಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಎಟಿಎಂ ಕೂಡ ಧ್ವಂಸಗೊಂಡಿದೆ. ಬುಧವಾರ ಸಂಜೆಯೇ ಎಟಿಎಂನಲ್ಲಿ 24 ಲಕ್ಷ ಹಣ ಜಮೆಯಾಗಿತ್ತು ಎಂದು ಶಾಖಾ ವ್ಯವಸ್ಥಾಪಕ ಚಂಚಲ್ ಜೋಶಿ ತಿಳಿಸಿದ್ದಾರೆ.
heavy-rain-landslides-and-flash-floods-strike-mp-himachal-uttarakhand
ಇದನ್ನೂ ಓದಿ : ತುಂಗಭದ್ರಾ ಡ್ಯಾಂನಿಂದ ನೀರು ರಿಲೀಸ್ : ಹಲವು ಸೇತುವೆಗಳು ಜಲಾವೃತ