ಹೈ ಸ್ಕೂಲ್ ಲವ್ : ಮನೆ ಬಿಟ್ಟು ಹೋಗಿದ್ದ ಬಾಲಕಿ ಮತ್ತೆ ಸಿಕ್ಕಿದ್ದು ಶವವಾಗಿ!
ಟೀನೇಜ್ ನಲ್ಲಿ ಹದಿ ಹರೆಯದ ಚಂಚಲ ಮನಸ್ಸು. ಯಾರೂ ಏನೇ ಹೇಳಿದ್ರು ತಮಗೇನು ಅನ್ನಿಸುತ್ತೇ ಅದೇ ಸರಿ ಬುದ್ದಿ ಹೇಳೋರೆಲ್ಲಾ ಶತ್ರುಗಳು ಅನ್ನೋ ಫೀಲಿಂಗ್. ಏನೋ ಹೊಸತನದ ಎಕ್ಸ್ಐಟ್ ಮೆಂಟ್ ಇರುತ್ತೆ. ಇವು ಹೆಚ್ಚಾಗಿ ಹೈ ಸ್ಕೂಲ್ ಮಕ್ಕಳಲ್ಲೇ ಕಂಡುಬರುತ್ತೆ. ಆ ವಯಸ್ಸಲ್ಲಿ ಏನು ಮಾಡಬೇಕು ಏನು ಮಾಡಬಾರದೂ ಗೊತ್ತಿರೋದಿಲ್ಲ. ಆದ್ರೆ ಕೆಲವರು ಈ ನಾಜೂಕಾದ ವಯಸ್ಸಿನಲ್ಲೇ ಪ್ರೀತಿ ಪ್ರೇಮ ಎಂಬ ಸುಳಿಗೆ ಸಿಕ್ಕು, ಜೀವನವನ್ನೇ ನಾಶ ಮಾಡಿಕೊಳ್ತಾರೆ. ಇದಕ್ಕೆ ಪೂರಕವೆಂಬಂತೆ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.
16 ವರ್ಷದ ಮಕ್ಕಳ ಪ್ರೀತಿ ದುರಂತ ಅಂತ್ಯವನ್ನೇ ಕಂಡಿದೆ. 10ನೇ ತರಗತಿಯ ಬಾಲಕನಿಗೆ 9ನೇ ತರಗತಿಯ ಬಾಲಕಿಯ ಮೇಲೆ ಲವ್ ಆಗಿದೆ. ಇದು ಮನೆಯವರಿಗೆ ಗೊತ್ತಾಗಿದೆ. ಸಾಕಷ್ಟು ಬುದ್ದಿವಾದ ಹೇಳಿ ಇವನ್ನೆಲ್ಲಾ ಬಿಟ್ಟು ಓದಿ ಎಂದು ಬುದ್ದಿವಾದ ಹೇಳಿದ್ದಾರೆ. ಆದರೆ ಬಾಲಕ ಮಾತ್ರ ಬಾಲಕಿಯನ್ನ ಮದುವೆಯಾಗುವಂತೆ ಪಿಡಿಸಿದ್ದಾನೆ. ಆತನಿಗಾಗಿ ಬಾಲಕಿ ರಾತ್ರೋ ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಮುಂಜಾನೆ ಆಕೆ ಪತ್ತೆಯಾಗಿದ್ದ ನೇಣುಬಿಗಿದ ಬಿಗಿದ ಸ್ಥಿತಿಯಲ್ಲಿ. ಹುಚ್ಚು ಪ್ರೀತಿ ನಂಬಿ ಆಕೆ ಉಜ್ವಲ ಭವಿಷ್ಯವನ್ನೇ ಹಾಳುಮಾಡಿಕೊಂಡಿದ್ದಾಳೆ.
ಕಮಲ್ ನಾಥ್ ಸರ್ಕಾರ ಉರುಳಿಸಿದ್ದು ಮೋದಿ : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅಚ್ಚರಿ ಹೇಳಿಕೆ
ಇನ್ನೂ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ರೀತಿಯಲ್ಲಿ ಕಂಡುಬಂದಿದೆ. ಇಬ್ಬರೂ ಪ್ರೇಮಿಗಳು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಬಾಲಕ ಹೇಗೋ ಬದುಕುಳಿದಿದ್ದಾನೆ. ಆತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಬಾಲಕಿ ಸಾವನಪ್ಪಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಅದೇನೆ ಇರಲಿ ಓದು ಬರೆದು ಭವಿಷ್ಯಕ್ಕಾಗಿ ಕನಸು ಕಾಣುವ ವಯಸ್ಸಿನಲ್ಲಿ ಪ್ರೀತಿ ಪ್ರೇಮವೆಂಬ ಹುಚ್ಚಾಟಕ್ಕೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಹಾಳುಮಾಡಿಕೊಂಡಿದ್ರೆ, ಮಕ್ಕಳ ದುಡುಕುತನದಿಂದ ಎರೆಡು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಹಿಂದು ಯುವತಿ ಅಪಹರಣ.. ಬಲವಂತದ ಮತಾಂತರ… ಆರೋಪಿ ಅಂದರ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel