ಮುಳಬಾಗಿಲಿನ ಶ್ರೀ ಆಂಜನೇಯ ದೇವಾಲಯ ನಾಡಿನ ಬಹು ಜನಪ್ರಿಯ ದೇವಾಲಯಗಳಲ್ಲಿ ಒಂದು. ಸುಮಾರು 300 ಅಡಿ ಉದ್ದ ಮತ್ತು 200 ಅಡಿ ಅಗಲದ ಪ್ರಾಕಾರದೊಳಗಿನ ಆಂಜನೇಯ ದೇವಾಲಯವು ಪಶ್ಚಿಮಾಭಿಮುಖವಾಗಿದ್ದು ಗರ್ಭಗೃಹ, ಸುಖನಾಸಿ, ನವರಂಗ ಮತ್ತು ವಿಶಾಲವಾದ ಮುಖಮಂಟಪವನ್ನು ಹೊಂದಿದೆ. ಈ ದೇವಾಲಯದ ಗರ್ಭಗುಡಿಯಲ್ಲಿನ ಆಂಜನೇಯ ಸುಮಾರು 10 ಅಡಿ ಎತ್ತರವಿದ್ದು ವಿಜಯನಗರ ಪೂರ್ವ ರಚನೆಯಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ ಅರ್ಜುನನು ಈ ಆಂಜನೇಯನನ್ನು ಪ್ರತಿಷ್ಠಾಪಿಸಿದ್ದಾನೆ. ವೈಖಾಸನ ಮಹರ್ಷಿಗಳು ಈ ದೇವರನ್ನು ಪ್ರತಿಷ್ಠಾಪಿಸಿದರೆಂದು ಹೇಳುವ ಸ್ಥಳೀಯ ಮೂಲಗಳೂ ಇವೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಆಂಜನೇಯನ ದೇವಾಲಯ ವಿಜಯನಗರ ಪೂರ್ವದಲ್ಲೇ ಇತ್ತಾದರೂ ಇದರ ಬಹು ಭಾಗಗಳು ನಿರ್ಮಾಣವಾಗಿದ್ದು ವಿಜಯನಗರ ಕಾಲದಲ್ಲಿ. ಈ ದೇವಾಲಯದ ಶ್ರೀರಾಮದೇವರ ಗುಡಿಯ ಪಶ್ಚಿಮ ಹೊರಭಿತ್ತಿಯಲ್ಲಿ ಕ್ರಿ.ಶ .1521 ರ ಶಾಸನವಿದೆ. ವಿಜಯನಗರ ಸಾಮ್ರಾಜ್ಯದ ಸಾಮ್ರಾಟನಾದ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಆತನ ಸಾಮಂತ ಸಿಂದಣ ಒಡೆಯನು ಮುಳವಾಯಿ ಮೂಡಣಪರಿಶೆಯ ಹನುಮಂತ ದೇವರ ಗುಡಿಯ ದಕ್ಷಿಣ ಭಾಗದಲ್ಲಿ ರಾಮನಾಥದೇವರು, ಸೀತಾ ಪರಮೇಶ್ವರಿ, ಲಕ್ಷ್ಮಣ ದೇವರುಗಳನ್ನು ಪ್ರತಿಷ್ಠಾಪಿಸಿದನೆಂದೂ ಮತ್ತು ಕೆಲವು ಗುಡಿಗಳನ್ನು ಮತ್ತು ಗೋಪುರ ಮಂಟಪಗಳನ್ನು ಕಟ್ಟಿಸಿದನೆಂದೂ ಈ ಶಾಸನ ಸಾರುತ್ತದೆ. ಆಂಜನೇಯ ದೇವರ ನೈವೇದ್ಯ, ಅಂಗರಂಗಭೋಗಕ್ಕೆ ಪಟ್ಟಣ ಸಮೀಪದ ತಾತಗಟ ಗ್ರಾಮವನ್ನು ಕೊಟ್ಟ ವಿಷಯವೂ ಈ ಶಾಸನದಲ್ಲಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಜ್ಯೋತಿಷ್ಯಶಾಸ್ತ್ರತಜ್ಞರು 8548998564
ಪಶ್ಚಿಮ ದಿಕ್ಕಿನಲ್ಲಿ ಎತ್ತರವಾದ ಗೋಪುರವಿದೆ. ಪೂರ್ವದಿಕ್ಕಿನ ದ್ವಾರದ ಮೇಲೆ ಸಿಮೆಂಟಿನಲ್ಲಿ ನಿರ್ಮಿಸಲಾಗಿದೆ. ಕ್ರಿ.ಶ .1974 ರಲ್ಲಿ ಸುಮಾರು 20 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿರುವ ಆಂಜನೇಯ ದೇವಾಲಯದಲ್ಲಿ ಗರ್ಭಗೃಹ, ಶಕುನಾಸಿ, ವಿಶಾಲವಾದ ಮುಖಮಂಟಪವಿದ. ಮುಖಮಂಟಪಕ್ಕೆ ಹೊಂದಿಕೊಂಡಂತೆ ಶ್ರೀರಾಮನ ಗುಡಿಯೂ ಇದೆ. ಇದನ್ನು ವಿಜಯನಗರ ಕಾಲದಲ್ಲಿ ಕಟ್ಟಲಾಗಿದೆ ಹಾಗೆಯೇ ಆಂಜನೇಯ ದೇವಾಲಯದ ನವರಂಗದಲ್ಲಿ ರಾಜ ತೋದರ್ಮಲ್ಲ ಮತ್ತು ಆತನ ಪತ್ನಿಯ ಶಿಲ್ಪವಿದೆ. ಆಂಜನೇಯ ದೇವಾಲಯಕ್ಕೆ ಇವರ ಸೇವಾರ್ಥವಿದೆ ಎಂದು ಹೇಳಲಾಗುತ್ತಿದೆಯಾದರೂ ಲಿಖಿತ ಆಧಾರಗಳೇನೂ ಇಲ್ಲ. ರಾಜಾ ತೋದರ್ ಮಲ್ಲನು ಮೊಗಲ್ ಸಾಮ್ರಾಟ ಆಕ್ಬರನ ಕಂದಾಯ ಮಂತ್ರಿಯಾಗಿದ್ದನು. ಆತ ತನ್ನ ದಕ್ಷಿಣ ಭಾರತದ ತೀರ್ಥಯಾತ್ರೆಯ ಕಾಲದಲ್ಲಿ ಮುಳಬಾಗಿಲಿನ ಆಂಜನೇಯ ದೇವಾಲಯಕ್ಕೂ ಬಂದಿದ್ದನೆಂದು ಹೇಳಲಾಗಿದ.
ಗರ್ಭಗೃಹದ ಮೇಲೆ ಚತುಷ್ಕೋನಾಕಾರದ ದ್ರಾವಿಡ ಶೈಲಿಯ ಶಿಖರವಿದೆ ಸೀತಾರಾಮ ಲಕ್ಷ್ಮಣರ ಉತ್ಸವ ಮೂರ್ತಿಗಳು ಗುಡಿಯಲ್ಲಿವೆ. ಮಂಡಿಕಲ್ಲು ರಂಗರಾಜು ರಚಿಸಿದ ಸುಂದರ ವರ್ಣಚಿತ್ರಗಳು ಈ ದೇವಾಲಯದ ಕಲ್ಯಾಣಮಂಟಪದ ಕಂಭಗೋಡೆ, ಛಾವಣಿಗಳಲ್ಲಿವೆ. ಅರ್ಧಮಂಟಪದ ಮುಂಭಾಗದಲ್ಲಿರುವ ನವರಂಗದಲ್ಲಿ ನಾಲ್ಕು ಚತುಷ್ಕೋನಾಕಾರದ ದೊಡ್ಡ ಕಂಭಗಳಿದ್ದು ಸೊಗಸಾದ ಉಬ್ಬುಶಿಲ್ಪಗಳನ್ನು ಹೊಂದಿವೆ . ಪ್ರತಿದಿನವೂ ಕೇದಿಗೆ ಹೂವಿನ ಅಲಂಕಾರ ಮಾಡುವ ಸಂಪ್ರಾದಾಯ ಈ ದೇವಾಲಯದಲ್ಲಿದೆ.
ಈ ದೇವಾಲಯದ ಪ್ರಾಕಾರದಲ್ಲಿ ಶ್ರೀ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಶ್ರೀ ಗೋವಿಂದರಾಜಸ್ವಾಮಿ ದೇವಾಲಯ ಹಾಗೂ ಶ್ರೀ ವರದರಾಜಸ್ವಾಮಿ ದೇವಾಲಯಗಳು ಇರುತ್ತವೆ.
ಬಾಗಿಲು ತೆರೆಯುವ ಸಮಯ
07:00 AM IST – 01:00 PM IST
03:00 PM IST – 07:00 PM IST
ಬಾಗಿಲು ಮುಚ್ಚುವ ಸಮಯ
07:30 PM IST – 06:30 AM IST








