ಅಂದು ಕಡು ಕತ್ತಲೆ ಕಡು ಕತ್ತಲೆ ಗೌಚು… ದೂರದಲ್ಲಿ ಗಿಚಿಗಿಚಿ ಸದ್ದು.. ಮನೆಯಲ್ಲಿ ಕರೆಂಟ್ ಇಲ್ಲ ನಿದ್ದೆ ಬೇರೆ ಬರುತ್ತಿರಲಿಲ್ಲ.. ಗಂಟೆ ೧೨ ಆಗಿತ್ತು ಚಿಕ್ಕವರು ನಾವಿನ್ನೂ ಆಟದ ವಯಸ್ಸು ಬೇಸಿಗೆ ರಜೆ ಅಂತ ನಾನು ತನ್ನ ತಮ್ಮ ಚಿಕ್ಕಮ್ಮನ ಮಕ್ಕಳೆಲ್ಲಾ ಅರ್ಧ ಡಜನ್ ಇದ್ವಿ..
ನಾವೆಲ್ಲಾ ನಮ್ಮ ಅಜ್ಜಿ ಮನೆ ಸೇರಿದ್ವು.. ಬೆಂಗಳೂರು ಸಿಟಿಯಲ್ಲೇ ಹೊಂದುಕೊಂಡಿದ್ದ ನಮಗೆ ಆ ಹಳ್ಳಿ ಇಷ್ಟವೂ ಹೌದು ಕಷ್ಟವೂ ಹೌದು.. ಭವವೂ … ಕುತೂಹಲವೂ.. ನಮಗೆ ೧೨ ಆದ್ರೂ ನಿದ್ದೆ ಬರುತ್ತಿಲ್ಲ..ಹಳ್ಳಿ ಇದ್ದಿದ್ದೆ ೧೨ ಮನೆಗಳು ಅದು ಅಲ್ಲೊಂದು ಇಲ್ಲೊಂದು.. ಸುತ್ತಲೂ ಬೇರೆ ಏನೇನೂ ಇಲ್ಲ.. ನಮ್ಮ ಅಜ್ಜಿ ಮನೆ ಸಮೀಪದಲ್ಲೆ ಸ್ಮಷಾಣ ಬೇರೆ..
ನಾವೆಲ್ಲಾ ಸುತ್ತ ಕೂತೋರೆ ” ಅಜ್ಜಿ ಅಜ್ಜಿ ಕಥೆ ಹೇಳು ಅಜ್ಜಿ ಪ್ಲೀಸ್ ” ಅಂದ್ವಿ.. ನಮ್ಮಜ್ಜಿಗೂ ಬೇರೆ ಕಥೆ ಸಿಗಲಿಲ್ಲ.. ಅವರ ನಿಜವಾದ ಅನುಭವನ್ನೇ ಹೇಳಿಬಿಟ್ರು..
ಕಥೆ ಮುಗಿದ ಮೇಲೆ ನಮ್ಮ ಅವಸ್ಥೆ ಕೇಳೋರಿಲ್ಲ ಒಬ್ಬರ ಕೈ ಒಬ್ರು ಬಿಡೋಕು ಸಿಕ್ಕಾಪಟ್ಟೆ ಭಯವಾಗಿತ್ತು.. ಅದ್ರಲ್ಲು ಅಮಾವಾಸ್ಯೆ ಬೇರೆ.. ನಾಯಿಗಳೂ ಒಂದೇಸಮ ಕೂಗುತ್ತಲೇ ಇದ್ದವು ಬೇರೆ..
ಅಜ್ಜಿ ಹೇಳಿದ ಕಥೆ..
ಸುಮಾರು ೨೧ ವರ್ಷದವರಿದ್ದರಂತೆ ಅಜ್ಜಿ ಆಗ … ಅವರು ಆಗ ೬ ತಿಂಗಳ ಬಸರಿ ಮನೆಯಲ್ಲೇ ಕೆಲಸ ಮಾಡಿಕೊಂಡು ಇದ್ದರು..
ತಾತ ಆಗ ಲಾರಿ ಡ್ರೈವರ್ ಕುಡುತದ ಚಟ ಬೇರೆ ಇತ್ತು.. ಹೀಗಾಗಿ ಯಾವಾಗ ಕುಡಿದು ಎಲ್ಲಿ ಬಿದ್ದಿರುತ್ತಿದ್ರೋ ಅವರಿಗೂ ಗೊತ್ತಾಗ್ತಾ ಇರಲಿಲ್ಲ..
ಅಜ್ಜಿ ಮನೆಯಲ್ಲಿ ಅಂದು ಒಬ್ರೆ ಇದ್ದರು ಅವರ ಅತ್ತೆ ಮಾವ ಹೀಗೆ ಬೇರೆ ಯಾವುದೋ ಊರಿಗೆ ದೇವಸ್ಥಾನಕ್ಕೆ ಹೋಗಿ ಅಲ್ಲೇ ಸಂಬಂಧಿಕರ ಮನೆಯಲ್ಲಿ ಉಳಿದಿದ್ದರು..
ಅಂದು ಅಮಾವಾಸ್ಯೆ ಬೇರೆ.. ಅಜ್ಜಿ ಪಕ್ಕದ ಮನೆಯವರಿಂದ ಬಿಸಿ ಬಿಸಿ ಮುದ್ದೆ ಹಾಗೂ ಉಪ್ ಸಾರು ಈಸಿಕೊಂಡು ತಾವು ತಿಂದು ತಾತನಿಗೆ ಇಟ್ಟು ಕಾಯ್ತಾಯಿದ್ದರೂ.. ಗಂಟೆ ೧೨ ಆದ್ರೂ ತಾತ ಪತ್ತೆ ಇಲ್ಲ.. ಅಜ್ಜಿಗೆ ಆತಂಕ ಹೆಚ್ಚಾಗ ತೊಡಗಿತು.. ಆದ್ರೆ ಒಬ್ರೇ ಅಷ್ಟ ರಾತ್ರಿಮಾಡೋದಾದ್ರೂ ಏನು.. ಹುಡುಕೋದದರೂ ಹೇಗೆ.. ಯಾರ ಸಹಾಯ ಪಡೆಯೋದು.. ಇದೇ ಯೋಚನೆಯಲ್ಲೇ ದೇವರ ಫೋಟೋ ಎದ್ರಿಗೆ ಕೂತು ದೇವರನ್ನೇ ನೆನೆಸಿಕೊಂಡು ಕುಳಿತಿದ್ದರಂತೆ.. ತಕ್ಷಣ ಯಾರೋ ಬಂದು ಜೋರ್ ಜೋರಾಗಿ ಬಾಗಿಲು ಬಡಿದ ಶಬ್ಧ “ದಬದಬದಬದಬ” ಅಂತ ಅಜ್ಜಿಗೆ ಸಖತ್ ಭಯವಾಗಿದೆ.. ಕೈಗಳು ನಡುಗಿತ್ತು.. ಬೆವರುತ್ತಲೇ … ಯಾ…ಯಾ… ಯಾರು ಎಂದವರಿಗೆ ಆಕಡೆಯಿಂದ ಅಕ್ಕ ನಾನು ಪುಟ್ಟ ಎಂಬ ಧ್ವನಿ ಕೇಳಿದೆ.. ಸ್ವಲ್ಪ ಸಮಾಧಾನ ವಾಗ್ತಾ ಹೋಗಿ ಬಾಗಿಲು ತೆಗೆದವರಿಗೆ ಪುಟ್ಟನ ಗಾಬರಿಯ ಮುಖ ನೋಡಿ ಆತಂಕವಾಗಿದೆ..
ಅಜ್ಜಿ ಕೇಳಿದ್ದಾರೆ ಪುಟ್ಟ ಏನಾಯ್ತು ಯಾಕ್ ಇಷ್ಟ್ ಬೆವರ್ತಿದ್ಯಾ ಗಾಬರಿಯಾಗಿದ್ಯಾ ಏನಾಯ್ತು..? ನೀನು ಎಲ್ಲಾದ್ರೂ ನಮ್ ಯಜಮಾನ್ರನ್ನ ನೋಡ್ದಾ ಅಂದವರಿಗೆ ಆಕಡೆಯಿಂದ ಬಂದಿದ್ದು ಆಘಾತಕಾರಿ ಉತ್ತರ.. ಅಕ್ಕೋ ಅಣ್ಣನ ಮೇಲೆ ಯಾವುದೊ ಕಾರ್ ಹತ್ತಿಸಿಬಿಟ್ಟಿದೆ ಕಣಕ್ಕ ಏನಾಗಿದೆ.. ಅಣ್ಣ ನರಳಾಡುತ್ತಿದ್ದಾನೆ..
ಅಷ್ಟೆ ಇದನ್ನ ಕೇಳ್ತಿದ್ದಂತೆಗೆ ಅಜ್ಜಿಗೆ ಜೀವವೇ ಹೋದಂತೆ ಆಗಿದೆ.. ಒಂದೇ ಸಮನೇ ಜೋರು ಜೋರುಗಿ ಗೋಳಾಡುತ್ತಾ ಕಿರುಚಾಡುತ್ತಾ ಗರ್ಭಿಣಿ ಅನ್ನೋದನ್ನ ಮರೆತು ಪುಟ್ಟನ ಜೊತೆಗೆ ಆ ಜಾಗಕ್ಕೆ ಓಡಿ ಓಡಿ ಹೋಗಿದ್ದಾರೆ.. ಇದನ್ನ ಯಾರೋ ಕಿಟಕಿಯಲ್ಲಿ ಗಮನಿಸಿ ಹೇಗೋ ಅಲ್ಲೆ ಅಕ್ಕ ಪಕ್ಕದಲ್ಲೇ ಇದ್ದ ಒಂದೆರೆಡು ಮನೆಗಳಿಗೆ ವಿಶಯ ಮುಟ್ಟಿಸಿದ್ದಾರೆ.. ಸ್ವಲ್ಪ ಮಂದಿ ಎಚ್ಚರಗೊಂಡು ಅರೇ ಲಕ್ಷ್ಮಿ ಯಾಕೆ ಒಬ್ಬೊಬ್ನಳೇ ಹೀಗೆ ಗೋಳಾಡಿಕೊಂಡು ಓಡೋಗ್ತಿದ್ದಾಳೆ.. ಅದ್ರಲ್ಲೂ ಈಸ್ಥಿತಿಯಲ್ಲೇ ಏನೋ ಆಗಿದೆ ಅಂತ ಒಂದ್ ೧೦ ಜನರ ಗುಂಪು ನಮ್ ಅಜ್ಜಿ ಅಲ್ಲಿಂದ ಹೋದ ೧೦ ನಿಮಿಷದ ನಂತರ ಅದೆ ರಸ್ತೆಯಲ್ಲೇ ಓಡಿದ್ದಾರೆ..
ಅಜ್ಜಿ ಕಿರುಚುತ್ತಾ ಅಳುತ್ತಳೇ ಒಢಿ ಓಡಿ ಹೋಗ್ತಿದ್ದಾರೆ.. ಹಿಂದೆ ಪುಟ್ಟ ಬರುತ್ತಜದ್ದಾನೆ ಅಂತಲೇ ಅಂದುಕೊಂಡಿ ಅವರು ಓಡಿ ಓಡಿ ಪುಟ್ಟ ಹೇಳಿದ್ದ ಜಾಗಕ್ಕೆ ಹೋಗಿದ್ದಾರೆ.. ಆದ್ರೆ ಅಲ್ಲಿ ಪುಟ್ಟ ಹೇಏಳಿದ ರೀತಿ ಎನೂ ಆಗೇ ಇರಲಿಲ್ಲ.. ಅಜ್ಜಿಗೆ ಗಾಬರಿಯಾಗಿ ಅಳುತ್ತಲೇ ಪುಟ್ಟ ಎಲ್ಲಿ ಯಾರೀ ಇಲ್ಲ ಅಂತ ಹಿಂದೆ ತಿರುಗಿ ನೋಡಿದ್ರೆ ದೂರ ದೂರದ ವರೆಗೂ ಒಂದು ನರಪಿಳ್ಳೆ ಇಲ್ಲ.. ಸುತ್ತಲೂ ಕತ್ತಲೂ ಅಜ್ಜಿ ಕೈಲಿ ದೀಪದ ಲ್ಯಾಟಿನ್ ನ ಬೆಳಕು ಬಿಟ್ರೆ ಬೇರೆ ಏನೂ ಇರಲಿಲ್ಲ.. ಭಯದಲ್ಲಿ ನಡುಗುತ್ತಾ ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದ್ರೆ ಅವರು ನಿಂತಿದ್ದು ಸ್ಮಶಾಣದ ಹೆಬ್ಬಾಗಿಲ ಬಳಿ.. ಅಜ್ಜಿಗೆ ನಡುಕಶುರುವಾಗಿದೆ.. ಮಾತು ಬಾರದೇ ಗಂಟಲು ಒಣಗಿದೆ.. ಸುತ್ತಲೂ ಯಾರೂ ಇಲ್ಲ.. ಸ್ಮಷಾಣ ಮೌನ..
ಹಿಂದೆ ಮುಂದೆ ಹೆಜ್ಜೆ ಇಡೋಕೆ ಭಯ.. ಪುಟ್ಟ ಎಲ್ಲೋದ ಅನ್ನೋ ಗೊಂದಲ ,, ಗಂಡ ಎಲ್ಲಿ ಏನಾಯ್ತು ಅನ್ನೋ ದಿಗಿಲ.. ಇದೆಲ್ಲದ್ರ ನಡುವೆ ಎಲ್ಲೋ ಸ್ವಲ್ಪ ದೂರದಿಂದ ಒಬ್ಬ ಹೆಂಗಸು ಅಜ್ಜಿ ಕಡೆಗೆ ಓಡಿ ಬರುತ್ತಿರೋದನ್ನ ಅಜ್ಜಿ ಗಮನಿಸಿದ್ರು
. ಆ ಹೆಂಗಸು ಕಣ್ಣಗಳಲ್ಲಿ ಆಕ್ರೋಶ ಹೊತ್ತು ಅಜ್ಜಿ ಕಡೆಗೆ ಕಿರುಚುತ್ತಾ ಓಡಿ ಬರುತ್ಯಿದ್ರು.. ಅಜ್ಜಿ ಇದನ್ನ ನೋಡಿ ಸಿಕ್ಜಾಪಟ್ಟೆ ಹೆದರಿ ಅಲ್ಲಿಂದ ದಾರಿ ಎಲ್ಲಿಲ್ಲಿ ಕಾಣುತ್ತೋ ಅಲ್ಲೆಲ್ಲಾ ಓಡಿದ್ದಾರೆ.. ಅಜ್ಜಿ ಹಿಂದೆ ಆ ಹೆಂಗಸು ಕೂಡ ಭಯಾನಕವಾಗಿ ಓಡೋಡಿ ಬಂದಿದ್ದಾರೆ.. ಹೀಗೆ ಹೋಗ್ತಾ ಹೋಗ್ತಾ ಅಜ್ಜಿ ಅದ್ಹೇಗೋ ತಮ್ಮ ಊರ ಹೆಬ್ಬಾಗಿಲಿಗೆ ಓಡೋಡಿ ಬಂದಿದ್ಧಾರೆ.. ಇತ್ತ ಆ ಹೆಂಗಸು ಅಜ್ಜಿ ಹಿಂದೆಯೇ ಇನ್ನೂ ಓಡೋಡಿ ಬರುತ್ತಿದ್ದಳು.. ಊರ ಬಾಗಿಲಲ್ಲಿ ಕಾಳಿ ಮಂದಿರವಿತ್ತು ಅಜ್ಜಿ ಊರು ದಾಟಬೇಕು ಅಷ್ಟ್ರಲ್ಲೇ ಯಾರೋ ಅಜ್ಜಿಯನ್ನ ಹಿಡಿದು ಹಿಂದೆ ಎಳೆದಿದ್ದಾರೆ.. ಅಜ್ಜಿ ಜೋರಾಗಿ ಕಾಳಿ ಕಾಳಿ ಕಾಪಾಡಮ್ಮ ಅಂತ ಗೋಳಾಡಿದ್ದಾರೆ.. ಆ ಹಿಂಗಸು ಹೇ ನಿಲ್ಲಿಸು ಅವಳ ಹೆಸರು ಹೇಳೋದ್ನ ನಿಲ್ಲಿಸು ಅಂತ ಕಿರುಚುವ ಶಬ್ಧ ಕೇಳಿದೆ.. ಅತ್ತ ನೋಡಿದ್ರೆ ಯಾರೋ ಲಾರಿ ಓಡಿಸಿಕೊಂಡು ಬಂದಿದ್ಧಾರೆ.. ಅದು ಮತ್ಯಾರು ಅಲ್ಲ ತಾತ.. ತಾತನಿಗೆ ಏನೂ ಆಗಿರಲಿಲ್.. ಅದೇ ಸಮಯಕ್ಕೆ ಆಹೆಂಗಸು ಅಜ್ಜಿಯನ್ನ ಲಾರಿ ಮುಂದೆ ತಳ್ಳಿಬಿಟ್ಟಂತೆ ಆಗಿದೆ.. ಆದ್ರೆ ಲಾರಿಯನ್ನ ತಾತನಿಂದ ನಿಯತ್ರಣಕ್ಕೆ ತರಲು ಸಾದ್ಯವಾಗಿರಲಿಲ್. ಅದೇ ಸಮಯಕ್ಕೆ ಅಜ್ಜಿಯನ್ನ ಹುಡುಕಿ ಹೊರಟಿದ್ದು ಗುಂಪು ಊರ ಹೆಬ್ಬಾಗಿಲು ತಲುಪಿತ್ತು ಅಜ್ಜಿ ಲಾರಿಗೆ ಸಿಕ್ರೂ ಅಂದುಕೊಳ್ಳೋ ಅಷ್ಟ್ರಲ್ಲೇ ಯಾರೋ ಅಜ್ಜಿಯನ್ನ ತಕ್ಷಣ ರಸ್ತೆಯಿಂದ ಮತ್ತೊಂದು ಬದಿಗೆ ಹಾರಿಸಿದಂತಾಗಿದೆ..
ಅಜ್ಜಿ ಕಣ್ಮುಚ್ವಿ ಬಿಡೋದ್ರೊಳಗೆ ರಸ್ತೆಯಆ ಬದಿಯಲ್ಲಿದ್ರು.. ತಾತ ಲಾರಿ ನಿಲ್ಲಿಸಿ ಅಜ್ಜಿ ಬಳಿ ಓಡೋಡಿ ಹೋಗಿ ಅವರನ್ನ ಸಮಾಧನ ಮಾಡಿ ದೇವಸ್ಥಾನದ ಮುಂದೆ ತಂದು ಕೂರಿಸಿ ಸುಧಾರಿಸಿಕೊಳಗಳಲು ಬಿಟ್ಟಿದ್ದಾರೆ..
ಸ್ವಲ್ಪ ಸಮಯದ ನಂತರ ಎಲ್ಲರೂ ಅಜ್ಜಿನ ಬಳಿ ಏನಾಯ್ತಿ ಎಂದು ಕೇಳಿದಾಗ ಅಜ್ಜಿ ಹೇಳಿದ್ದನ್ನ ಕೇಳಿ ತಾತ ಹಾಗೂ ಉಳಿದವರೆಲ್ಲಾ ಭಯಭೀತರಾಗಿದ್ದಾರೆ.. ನಿನ್ ಕಾಪಢಿದ್ದು ಆ ತಾಯೇ ಎಂದು ಹೇಳಿದ್ರು.. ಆಗ ಮತ್ತೊಂದು ವಿಚಿತ್ರ ಅನ್ನಿಸ್ತು.. ಅಜ್ಜಿ ಪುಟ್ಟ ಬಂದ ಅಂತ ಹೇಳಿದಾಗ ಶಾಕ್ ಆಗಿತ್ತು.. ಯಾಕಂದ್ರೆ ಅಜ್ಜಿ.. ಒಬ್ಬೊಬ್ಬಳೇ ಹುಚ್ಚಿಯಂತೆ ಅಳುತ್ತಾ ಓಡಿ ಹೋಗಿದ್ದು ಅವರ ಹಿಂದೆ ಯಾರೂ ಇರಲಿಲ್ಲವಂತೆ.. ಅದನ್ನ ಕಣ್ಣಾರೆ ನೋಡಿದ್ದ ತಿಪ್ಪೇಶ ಅಜ್ಜಿ ಹಾಗೂ ಎಲ್ರಿಗೂ ತಿಳಿಸಿದ್ದ ಮತೊಂದು ಪುಟ್ಟ ಹಿಂದಿನ ದಿನವೇ ಆಕ್ಸಿಡೆಂಟ್ ನಲ್ಲಿ ಸತ್ತಿದ್ದ ಆತ ಬೇರೆ ಊರಿನವನಾಗಿದ್ದ .. ಅದಕ್ಕೆ ಅಷ್ಟಾಗಿ ಅವನ ಸಾವಿನ ಸುದ್ದಿ ಗೊತ್ತಾಗಿರಲಿಲ್ಲ.. ಅಜ್ಜಿ ಬಸರಿಯಾಗಿದ್ದಕ್ಕೆ ಅವರಿಂದ ಮುಚ್ಚಿಟ್ಟಿದ್ರು.. ಇದ್ರಿಂದ ಅಜ್ಜಿ ಮತ್ತಷ್ಟು ಭಯಭೀತರಾದ್ರು.. ಆ ಹೆಂಗಸು ಯಾರು ಅಂದ್ರೆ ಆ ಹೆಂಗಸು ಅದೇ ಊರಿನಲ್ಲಿ ಒಂದು ತಿಂಗಳ ಹಿಂದೆ ನೇಣು ಬಿಗಿದು ಕೊಂಡಿದ್ದ ಬಸರಿ ಹೆಂಗಸು..
ಇದೆಲ್ಲಾ ಕೇಳಿ ಅಲ್ಲಿನ ಜನ ಭಯಭೀತರಾಗಿ ಕಡೆಗೆ ಅಜ್ಜಿಗೆ ಸಮಾಧಾನ ಮಾಡಿ ಮನೆಗೆ ತಾತನ ಜೊತೆಗೆ ಕಳುಹಿಸಿಕೊಟ್ಟೊದ್ದರು..
ಆದ್ರೆ ಅಂದು ಅಜ್ಜಿ ಬದುಕುಲಿಯುವ ಲಕ್ಷಣವೇ ಇರಲಿಲ್ಲ.. ಆದರೆ ಆ ಮಹಾಮಾತೆ ಕಾಳಿಯೇ ಅಜ್ಜಿಯನ್ನ ಕಾಪಾಡಿದ್ಲಾ.?.
ಆ ಪುಟ್ಟ ಅಜ್ಜಿ ಬಳಿ ಬಂದಿದ್ದು ನಿಜಾನಾ ಅಜ್ಜಿಯ ಭ್ರಮೆನಾ
ಆ ಹೆಂಗಸು ಬಂದಿದ್ದು ನಿಜಾನಾ ಇಲ್ಲಾ ಭ್ರಮೆನಾ… ಇದೆಲ್ಲಾ ಖುದ್ದು ಅಜ್ಜಿಗೂ ಗೊತ್ತಿಲ್ಲ.. ಆದ್ರೂ ಅಜ್ಜಿ ಕಥೆ ಕೇಳಿ ನಾವಂತೂ ಸಿಕ್ಕಾಪಟ್ಟೆ ಹೆದರಿದ್ವಿ….