Hubballi | ಕೆರೆಗೆ ಜಿಗಿದು ಬಟ್ಟೆ ವ್ಯಾಪಾರಿ ಆತ್ಮಹತ್ಯೆ
ಹುಬ್ಬಳ್ಳಿ | ಉಣಕಲ್ ಕೆರೆಗೆ ಜಿಗಿದು ಬಟ್ಟೆ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಮೃತನ ಶವ ಪತ್ತೆಯಾಗಿದೆ.
ಹುಬ್ಬಳ್ಳಿ ನಗರ ಖ್ಯಾತ ಬಟ್ಟೆ ವ್ಯಾಪಾರಿಕೇಶ್ವಾಪುರದ ನಿವಾಸಿ 39 ವರ್ಷದ ಸುನೀಲ ದೋಂಗಡೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.
ಇವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಲಗಾರರ ಕಾಟ ಎಂದು ಹೇಳಲಾಗುತ್ತಿದೆ.
ಮೃತನ ಸಹೋದರರ ಸಹ ನಿನ್ನೆ ತಾನೇ ಸಾವನ್ನಪ್ಪಿದ್ದ.
ಈ ಕುರಿತು ಸುನಿಲ್ ಸಾಯಿಯುವ ಮುನ್ನ ವಿಡಿಯೋ ಒಂದನ್ನು ಸಹ ಮಾಡಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿದು ವಿದ್ಯಾನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.