KCR ವಿರುದ್ಧ ಪ್ರತಿಭಟನೆ – ಕಾರು ಸಮೇತ ಆಂಧ್ರ ಸಿಎಂ ಸಹೋದರಿ ಶರ್ಮಿಳಾ ಅರೆಸ್ಟ್
ತೆಲಂಗಾಣದ ಸಿ ಎಂ ಕೆಸಿಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ಮತ್ತು ವೈಎಸ್ಆರ್ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರನ್ನ ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ.
Interesting visual! As #YSSharmila locked herself in the car outside the camp office of CM #KCR, clueless cops had to tow the car with the #YSRTelanganaParty chief inside. She was shifted to SR Nagar PS. #Hyderabad #Telangana https://t.co/HzBixppVoC pic.twitter.com/Fm2T4rgFZW
— Ashish (@KP_Aashish) November 29, 2022
ಜಖಂಗೊಂಡಿದ್ದ ವಾಹನದೊಂದಿಗೆ ಬೃಹತ್ ಬೆಂಗಾವಲು ಪಡೆಯೊಂದಿಗೆ ಪ್ರಗತಿ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.
ಶರ್ಮಿಳಾ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಕಾರಿನಿಂದ ಇಳಿಯಲು ನಿರಾಕರಿಸಿ ಡೋರ್ ಲಾಕ್ ಮಾಡಿಕೊಂಡು ಕಾರಿನೊಳಗೇ ಕೂತಿದ್ದರಿಂದ ಸೋಮಾಜಿಗುಡ ಪ್ರದೇಶದ ಬಳಿ ವಾಹನ ಸಂಚಾರ ಸ್ಥಗಿತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಕ್ರೇನ್ ಸಹಾಯದಿಂದ ಶರ್ಮಿಳಾ ಅವರು ಕಾರಿನೊಳಗೆ ಕೂತಂತೆಯೇ ಠಾಣೆಗೆ ಸ್ಥಳಾಂತರಿಸಿದ್ದಾರೆ.
ಶರ್ಮಿಳ ಬಂಧನದ ನಂತರ ಎಸ್ಸಾರ್ನಗರ ಪೊಲೀಸ್ ಠಾಣೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಪೊಲೀಸರು ಕ್ರೇನ್ ಸಹಾಯದಿಂದ ಕಾರನ್ನು ಠಾಣೆಗೆ ಸ್ಥಳಾಂತರಿಸಿದರು. ಅಲ್ಲಿ ಬಲವಂತವಾಗಿ ಕಾರಿನ ಬಾಗಿಲನ್ನ ತೆಗೆದು ನಂತರ, ಶರ್ಮಿಳಾರನ್ನ ಬಂಧಿಸಿದ್ದಾರೆ. ಮತ್ತೊಂದೆಡೆ, ವೈಎಸ್ಆರ್ಟಿಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆಗೆ ಆಗಮಿಸಿದ್ದರಿಂದ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
Hyderabad Police tows away YSR Telangana Party leader Sharmila Reddy’s car as she sits inside it