ಯಾದಗಿರಿ: ಕರ್ನಾಟಕದಲ್ಲಿ ಮುಂದಿನ ಬಾರಿ ನಾನೇ ಸಿಎಂ ಆಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಯಾದಗಿರಿ ನಗರದಲ್ಲಿ ನಡೆದ ಶಿವಾಜಿ ಮಹಾರಾಜರ ಜಯಂತಿ ವೇಳೆ ಮಾತನಾಡಿದ ಅವರು, ಸದ್ಯ ನಡೆಯುತ್ತಿರುವುದು ಮೋದಿ ಚುನಾವಣೆ. ಯಡಿಯೂರಪ್ಪ, ವಿಜಯೇಂದ್ರಗೆ ಇದು ಸಂಬಂಧ ಪಡುವುದಿಲ್ಲ. ರಾಜ್ಯದಲ್ಲಿ ವಿಜಯೇಂದ್ರನನ್ನು ನೋಡಿ ಯಾರೂ ವೋಟ್ ಹಾಕುವುದಿಲ್ಲ. ಏಕೆಂದರೆ ಇದು ಮೋದಿ ಚುನಾವಣೆ, ವಿಜಯೇಂದ್ರನನ್ನ ತೆಗೆದುಕೊಂಡು ಏನು ಮಾಡೋದು. ವಿಜಯೇಂದ್ರ ಪಾರ್ಟಿ ಅಧ್ಯಕ್ಷ ಆಗಿರಲಿ, ಸುಡುಗಾಡಾದ್ರೂ ಆಗಿರಲಿ. ರಾಜ್ಯದಲ್ಲಿ ಈ ಸಲ ಬಿಜೆಪಿ 28 ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಯಾವಾಗಲೂ ಬಿಜೆಪಿಗೆ 120 ಸ್ಥಾನ ಬಂದಿಲ್ಲ. ಅವರಿಗೆ ತೂಕ ಇದ್ದಿದ್ದರೆ 130 ಸ್ಥಾನ ಗೆಲ್ಲಬೇಕಿತ್ತು ಎಂದು ತಮ್ಮ ಪಕ್ಷದ ನಾಯಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ಇದೆ. ಅವರ ಮಗನನ್ನು ಇವರು ಗೆಲ್ಲಿಸೋದು. ಇವರ ಮಗನನ್ನು ಅವರು ಗೆಲ್ಲಿಸೋದು. ಸದನದಲ್ಲೇ ಡಿಕೆ ಶಿವಕುಮಾರ್ಗೆ ಹೋಗೋ ಅದೆಲ್ಲ ನಡೆಯಲ್ಲ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ.