ರಷ್ಯಾ ನಡೆಸಿದ ಮತದಾನ ಪ್ರಕ್ರಿಯೆಯಿಂದ ದೂರ ಉಳಿದ ಭಾರತ
ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ರಷ್ಯಾ ಸಲ್ಲಿಸಿದ ಕರಡು ನಿರ್ಣಯದ ಮತದಾನದಕ್ಕೆ ಭಾರತ ಗೈರುಹಾಜರಾಗಿದೆ. ಈ ಮೂಲಕ ರಷ್ಯಾದ ಪರವಾಗಿ ಭಾರತ ಮತ ಹಾಕಲಿಲ್ಲ.
15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬುಧವಾರ ರಷ್ಯಾ ಉಕ್ರೇನ್ನಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ಕರಡು ನಿರ್ಣಯ ಕೈಗೊಂಡಿತು. ಈ ಮತದಾನ ಪ್ರಕ್ರಿಯೆಗೆ ಇಬ್ಬರು ಸದಸ್ಯರು (ರಷ್ಯಾ ಮತ್ತು ಚೀನಾ) ರಷ್ಯಾದ ಕರಡು ನಿರ್ಣಯದ ಪರವಾಗಿ ಮತ ಚಲಾಯಿಸಿದರು. 13 ಇತರ ರಾಷ್ಟ್ರಗಳು ಮತದಾನದಿಂದ ದೂರವಿದ್ದವು. ಈ ಮೂಲಕ ಉಕ್ರೇನ್ನಲ್ಲಿನ ಮಾನವೀಯ ಪರಿಸ್ಥಿತಿಯ ಕುರಿತಾದ ನಿರ್ಣಯವನ್ನು ಅಂಗೀಕರಿಸಲು ವಿಫಲವಾಯಿತು.
ಅಲ್ಲದೇ ರಷ್ಯಾ ಕೈಗೊಂಡ ಕರಡು ನಿರ್ಣಯದ ಮೇಲಿನ ಮತದಾನದಲ್ಲಿ ಭಾರತ ಗೈರು ಹಾಜರಾಗಿದೆ. ರಷ್ಯಾ ಮತ್ತು ಚೀನಾ ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಭಾರತ ಸೇರಿದಂತೆ 13 ದೇಶಗಳು ಗೈರುಹಾಜರಾಗಿದ್ದವು ಎಂದು ತಿಳಿದುಬಂದಿದೆ.
ರಷ್ಯಾದ ಕರಡು ನಿರ್ಣಯವು ನಾಗರಿಕ ಸಾವು- ನೋವುಗಳ ವರದಿಗಳು, ಉಕ್ರೇನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತಿದೆ. ಅಷ್ಟೇ ಅಲ್ಲದೆ, ಉಕ್ರೇನ್ನಲ್ಲಿ ಯುದ್ಧದ ಭೀತಿಯಿಂದ ಸ್ಥಳಾಂತರಗೊಂಡ ವ್ಯಕ್ತಿಗಳು ಮತ್ತು ನಿರಾಶ್ರಿತರ ಸಂಖ್ಯೆ ಸಹ ಹೆಚ್ಚುತ್ತಿದೆ. ಮಾತುಕತೆಯ ಕದನ ವಿರಾಮಕ್ಕೆ ಕರೆ ನೀಡಬೇಕೆಂದು ಒತ್ತಾಯಿಸುತ್ತದೆ.