Invest Karnataka 2022-ಇಂದಿನಿಂದ ಬೆಂಗಳೂರಿನಲ್ಲಿ ನ. 4ರವರೆಗೆ ಇನ್ವೆಸ್ಟ್ ಕರ್ನಾಟಕ-2022 ವತಿಯಿಂದ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಬುಧವಾರ ಬೆಳಿಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ.
At 10:30 AM, will be inaugurating #InvestKarnataka2022, a Global Investors Meet which will showcase the rich potential Karnataka offers. Karnataka’s strides in diverse sectors including the StartUp world have captured global attention. #BuildForTheWorld https://t.co/0fXLumm7M5
— Narendra Modi (@narendramodi) November 2, 2022
ಈ ಸಮಾವೇಶದಲ್ಲಿ ಅಂದಾಜು ಹೂಡಿಕೆಗೆ 7 ಲಕ್ಷ ಕೋಟಿ ರೂ. ಹರಿದು ಬರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. 3 ಲಕ್ಷ ಉದ್ಯೋಗಗಳು ಖಾಸಗಿ ವಲಯದಲ್ಲಿ ಸೃಷ್ಟಿಯಾಗುವ ಆಕಾಂಕ್ಷೇ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ಕರ್ನಾಟಕದ ರಾಜ್ಯಪಾಲರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ, ಪ್ರಲ್ಹಾದ್ ಜೋಶಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ, ಸಚಿವರಾದ ಪಿಯೂಶ್ ಗೋಯೆಲ್, ರಾಜೀವ್ ಚಂದ್ರಶೇಖರ್, ಎ. ನಾರಾಯಣಸ್ವಾಮಿ ಹಾಗೂ ಖ್ಯಾತ ಉದ್ಯಮಿಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದರೆ.
ಮಾನ್ಯ ಪ್ರಧಾನಿ ಶ್ರೀ @narendramodi ಅವರು ಉದ್ಘಾಟಿಸಲಿರುವ ಇಂದಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ ₹7 ಲಕ್ಷ ಕೋಟಿ ಹೂಡಿಕೆಯಾಗಲಿದ್ದು, ಅಂದಾಜು 3 ಲಕ್ಷ ಉದ್ಯೋಗ ಸೃಷ್ಟಿಯಾಗುವ ನೀರಿಕ್ಷೆಯಿದೆ. ಈ ಸಮಾವೇಶವು ರಾಜ್ಯದ ಭವಿಷ್ಯದ ಆರ್ಥಿಕತೆಗೆ ದಿಕ್ಸೂಚಿಯಾಗಲಿದೆ.#InvestKarnataka2022 pic.twitter.com/BYnkbP6F3T
— Basavaraj S Bommai (@BSBommai) November 2, 2022
ನವೆಂಬರ್ 4ರಂದು ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪದಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾಗಿಯಾಗಲ್ಲಿದ್ದಾರೆ.
ಕರ್ನಾಟಕ ರಾಜ್ಯವು ಬಂಡವಾಳ ಹೂಡಿಕೆದಾರರಿಗೆ ಉತ್ತಮ ಸ್ಥಳವಾಗಿದ್ದು. ಈ ಸಮಾವೇಶದಲ್ಲಿ , ಜೆಎಸ್ಡಬ್ಲ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್, ವಿಪ್ರೋ ಅಧ್ಯಕ್ಷ ರಿಶಾದ್ ಪ್ರೇಮ್ಜಿ, ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರಮಂಗಳಂ ಬಿರ್ಲಾ, ಕಿರ್ಲೋಸ್ಕರ್ ಮೋಟಾರ್ಸ್ನ ವಿಕ್ರಮ ಕಿರ್ಲೋಸ್ಕರ್, ಅದಾನಿ ಪೋರ್ಟ್ಸ್ ಸಿಇಒ ಕರಣ್ ಅದಾನಿ ಭಾರತಿ ಎಂಟರ್ಪ್ರೈಸಸ್ನ ಉಪಾಧ್ಯಕ್ಷ ರಾಜನ್ ಮಿತ್ತಲ್, ಸ್ಟೆರಲೈಟ್ ಪವರ್ನ ಸಿಇಒ ಮತ್ತು ಎಂಡಿ ಪ್ರತೀಕ್ ಅಗರವಾಲ್ ಮತ್ತು ಸ್ಟಾರ್ಬಕ್ಸ್ ಸಹಸಂಸ್ಥಾಪಕ ಜೆವ್ ಸಿಗೆಲ್ ಮತ್ತಿತರ ಉದ್ಯಮಿಗಳು ಭಾಗಿಯಾಗಲ್ಲಿದ್ದಾರೆ.
#BuildForTheWorld #Karnataka is a global #innovation and #startup hub with more than 400+ global R&D centers in the state!
Learn more about #InvestKarnataka2022 – https://t.co/GHQqFnoCbo#InvestinKarnataka pic.twitter.com/MiiQOdx056
— Invest in Karnataka (@investkarnataka) November 1, 2022
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ಸಮಾವೇಶದ ಬಗ್ಗೆ ಮಾಹಿತಿ ನೀಡಿದ್ದಾರೆ, ಹಲವು ಕ್ಷೇತ್ರಗಳಲ್ಲಿ ಕರ್ಣಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ರಾಜ್ಯಕ್ಕೆ ಬಂಡವಾಳ ಹುಡಿಕೆಯು ಹೆಚ್ಚಿನ ಪ್ರಮಾಣದಲ್ಲಿ ಹರಿದುಬರಬಹುದೆಂದು ಸಾಧ್ಯತೆ ಇದೆ .
ಕರ್ನಾಟಕದಲ್ಲಿ 400 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿದ್ದು, 5,000ಕ್ಕೂ ಹೆಚ್ಚು ಸ್ಟಾರ್ಟಪ್ಗಳಿವೆ. ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಆರಂಭಿಸಲಾಗಿದ್ದು, ಇದರಲ್ಲಿ 20 ಕಂಪೆನಿಗಳು ಈಗಾಗಲೇ ಹೂಡಿಕೆ ಮಾಡಿವೆ. ಇದರಿಂದ ಈ ಭಾಗದ 1 ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ. ಇದೇ ರೀತಿ ಕಲ್ಯಾಣ ಕರ್ನಾಟಕದಲ್ಲೂ ಒಂದು ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪಿಸುವುದು ಸರ್ಕಾರದ ಚಿಂತನೆನಡೆಸಿದೆ. ಹಾಗೂ ಉದ್ಯಮ ಕ್ಲಸ್ಟರ್ ಅನ್ನು ವಿಭಾಗಕ್ಕೊಂದು ಪ್ರಾರಂಭಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಸರಕಾರವು ರಾಜ್ಯದ ಉದ್ದಗಲಕ್ಕೂ ಉದ್ಯಮ ಚಟುವಟಿಕೆ ವಿಸ್ತರಿಸಲು ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕೆಲಸವನ್ನು ನಡೆಸಿದೆ. ಮುಂಬೈ -ಬೆಂಗಳೂರು ಹೆದ್ದಾರಿ ಕಾಮಗಾರಿ ಚುರುಕುಗೊಳಿಸಿದೆ, ಗೋವಾ – ಹೈದರಾಬಾದ್ ಹೆದ್ದಾರಿ ಉತ್ತರ ಕರ್ನಾಟಕದ ಮೂಲಕ ಹಾದು ಹೋಗಲಿದ್ದು . ಕಾರವಾರ, ಮಂಗಳೂರು ಬಂದರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನೂತನವಾಗಿ ಶಿವಮೊಗ್ಗ, ಹಾಸನ ಮತ್ತು ವಿಜಯಪುರದಲ್ಲಿ ವಿಮಾನ ನಿಲ್ದಾಣಗಳು ಆರಂಭವಾಗುತ್ತಿವೆ , ಹಾಗೂ 18 ತಿಂಗಳಲ್ಲಿ 5 ವಿಮಾನ ನಿಲ್ದಾಣಗಳು ಕಾರ್ಯಾರಂಭಿಸಲಿವೆ ಎಂದು ನಿರಾಣಿ ತಿಳಿಸಿದ್ದಾ .