ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಮಹಾಭಾರತದ ಪಾಂಡವರಿಗೂ ರಾಹುಲ್ ಟೆವಾಟಿಯಾ ಗೂ ಇರೋ ನಂಟಾದ್ರೂ ಏನು ?

admin by admin
September 29, 2020
in IPL 2020, Newsbeat, Sports, ಐಪಿಎಲ್ 2020, ಕ್ರೀಡೆ
Share on FacebookShare on TwitterShare on WhatsappShare on Telegram

ಮಹಾಭಾರತದ ಪಾಂಡವರಿಗೂ ರಾಹುಲ್ ಟೆವಾಟಿಯಾ ಗೂ ಇರೋ ನಂಟಾದ್ರೂ ಏನು ?

# kings 11 punjab #ipl #ipl 2020 #rahul tewatia # hariyana # ರಾಹುಲ್ ಟೆವಾಟಿಯಾ… ಯಾರು ಯಾರು ಅಂತ ಕೇಳುತ್ತಿದ್ರು. ಅಷ್ಟಕ್ಕೂ ರಾಹುಲ್ ಟೆವಾಟಿಯಾ ಯಾರು ಅಂತನೇ ಬಹುತೇಕರಿಗೆ ಗೊತ್ತಿಲ್ಲ. ಆದ್ರೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಸಿಡಿಸಿದ್ದ ಏಳು ಸಿಕ್ಸರ್ (ಒಂದೇ ಓವರ್ ನಲ್ಲಿ ಐದು ಸಿಕ್ಸರ್) ಅವರ ಬದುಕಿನ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದೆ. ರಾತ್ರೋ ರಾತ್ರಿ ಹೀರೋ ಆದ ರಾಹುಲ್ ಟೆವಾಟಿಯಾ ತನ್ನ ಪ್ರತಿಭೆಯನ್ನು ಇಡೀ ಜಗತ್ತಿಗೆ ಪರಿಚಯಿಸಿಬಿಟ್ಟಿದ್ದಾರೆ.
ಹೌದು, ಈ ಪಂದ್ಯಕ್ಕೂ ಮುನ್ನ ರಾಹುಲ್ ಟೆವಾಟಿಯಾ ಅವರು ಒಬ್ಬ ಮಾಮೂಲಿ ಕ್ರಿಕೆಟಿಗ. ಹರಿಯಾಣ ತಂಡದ ಪರ ಆಡುತ್ತಿದ್ದ ರಾಹುಲ್ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿರಲಿಲ್ಲ. ಹಾಗೇ ಹೆಚ್ಚು ಅವಕಾಶವೂ ಸಿಕ್ಕಿರಲಿಲ್ಲ. ಟೆವಾಟಿಯಾ ಅವರು ಅವಕಾಶಕ್ಕಾಗಿ ಕಾಯುತ್ತಿದ್ದರು. ಟೀಕೆಗೆ ಗುರಿಯಾಗಬೇಕಿದ್ದ ರಾಹುಲ್ ಕೇವಲ 12 ಎಸೆತಗಳಲ್ಲಿ ಎಲ್ಲರ ಕಣ್ಣಿಗೆ ಹೀರೋ ಆಗಿ ಬೆಳೆದುಬಿಟ್ರು.
ಕಿಂಗ್ಸ್ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ರಾಹುಲ್ ಅವರ ಇನ್ ಸ್ಟಾಗ್ರಾಮ್ ನಲ್ಲಿ 22 ಸಾವಿರ ಫಾಲೋವರ್ಸ್ ಇದ್ರು. ಇದೀಗ 75 ಸಾವಿರ ಫಾಲೋವರ್ಸ್ ಆಗಿದ್ದಾರೆ. ಒಂದು ಪಂದ್ಯ, 12 ಎಸೆತಗಳು, ಏಳು ಸಿಕ್ಸರ್ ಗಳು ರಾಹುಲ್ ಟೆವಾಟಿಯಾ ಅವರು ರನ್ ಗಳಿಸಲು ಒದ್ದಾಟ ನಡೆಸಿರುವುದನ್ನು ಮರೆಯುವಂತೆ ಮಾಡಿತ್ತು. ಈ ಏಳು ಸಿಕ್ಸರ್ ಸಿಡಿಸುವುದಕ್ಕಿಂತ ಮುನ್ನ 18 ಎಸೆತಗಳಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದರು ಅನ್ನೋದನ್ನು ಕೂಡ ಮರೆಯುವ ಹಾಗಿಲ್ಲ.

Related posts

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

December 5, 2025
ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

December 5, 2025

ಮಹಾಭಾರತದ ಪಾಂಡವರಿಗೂ ರಾಹುಲ್ ಟೆವಾಟಿಯಾ ಗೂ ಇರೋ ನಂಟಾದ್ರೂ ಏನು ?
ಅದೇನೇ ಇರಲಿ, ರಾಹುಲ್ ಟೆವಾಟಿಯಾ ಮತ್ತು ಮಹಾಭಾರತದ ಪಾಂಡವರಿಗೆ ಇರೋ ನಂಟಾದ್ರೂ ಏನು ? ಹೌದು, ಒಂದು ರೀತಿಯ ನಂಟಿದೆ. ಮಹಾಭಾರತದ ಒಂದು ಪೌರಾಣಿಕ ಕಥೆ . ಹಾಗಾಗಿ ರಾಹುಲ್ ಟೆವಾಟಿಯಾ ಅವರು ಪಾಂಡವರ ವಂಶಸ್ಥರಂತೂ ಅಲ್ಲ. ಅಷ್ಟಕ್ಕೂ ಹರಿಯಾಣಕ್ಕೂ ಪಾಂಡವರಿಗೂ ಏನು ಸಂಬಂಧ ಅನ್ನೋ ಪ್ರಶ್ನೆ ಕೂಡ ಮೂಡಬಹುದು. ನಿಜ, ಕೌರವರ ವಿರುದ್ಧ ಪಾಂಡವರು ಯುದ್ಧ ತಪ್ಪಿಸಲು ಕೊನೆಯ ಅಸ್ತ್ರವಾಗಿ ಐದು ಗ್ರಾಮಗಳನ್ನು ನೀಡುವಂತೆ ಕೇಳಿಕೊಂಡಿದ್ದರು. ಆ ಐದು ಗ್ರಾಮಗಳಲ್ಲಿ ಹರಿಯಾಣದ ಸಿಹಿ ಗ್ರಾಮ ಕೂಡ ಒಂದು. ಇದು ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿರುವ ಗ್ರಾಮವಾಗಿದೆ. ಅಷ್ಟೇ ಅಲ್ಲ 16ನೇ ಶತಮಾನದ ಭಕ್ತಿ ಸುಧೆ ಗಾಯಕ ಸಂತ ಸುರದಾಸ್ ಅವರ ಗ್ರಾಮ ಕೂಡ ಹೌದು.
#rahul tewatia #ipl 2020 #ipl #hariyana #pandavas #santa surdasಇದೀಗ ಪಾಂಡವರು, ಭಕ್ತಿ ಸುಧೆ ಗಾಯಕ ಸಂತ ಸುರದಾಸ್ ಅವರು ಹುಟ್ಟಿರುವ ಗ್ರಾಮದ ಯುವಕ ರಾಹುಲ್ ಟೆವಾಟಿಯಾ ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿದ್ದಾರೆ. ಆದ್ರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.
ಇನ್ನು ರಾಹುಲ್ ಟೆವಾಟಿಯಾ ಆಟವನ್ನು ನೋಡಿದ್ದ ಮೇಲೆ ಸಿಹಿ ಗ್ರಾಮದ ಜನತೆ ಸಂಭ್ರಮದಿಂದ ತೇಲಾಡುತ್ತಿದ್ದಾರೆ. ನೀವು 18 ಎಸೆತಗಳನ್ನು ಕಾಯಲು ಸಿದ್ಧರಿರಲಿಲ್ಲ. ಆದ್ರೆ ಆತ 18 ವರ್ಷಗಳಿಂದ ಕಾಯುತ್ತಿದ್ದಾನೆ. ನಮಗೆ ಗೊತ್ತಿತ್ತು. ಆತ ವಿಕೆಟ್ ಕೈಚೆಲ್ಲಿಕೊಳ್ಳುವುದಿಲ್ಲ ಅಂತ. ನಮ್ಮ ನಿರೀಕ್ಷೆಗಳನ್ನು ಆತ ಹುಸಿಗೊಳಿಸಲಿಲ್ಲ. ಒಂದು ವೇಳೆ ಆತ ವಿಫಲನಾಗಿರುತ್ತಿದ್ರೆ, ಇನ್ನುಳಿದ 12 ಪಂದ್ಯಗಳಲ್ಲಿ ಹೊರಗುಳಿಯಬೇಕಾಗಿತ್ತು. ಆದ್ರೆ ನನಗೆ ಆತನ ಮೇಲೆ ನಂಬಿಕೆ ಇತ್ತು. ಆತ ಯಶಶ್ವಿಯಾಗ್ತಾನೆ ಅಂತ ಹೇಳ್ತಾರೆ ರಾಹುಲ್ ಟೆವಾಟಿಯಾ ಅವರ ಚಿಕ್ಕಪ್ಪ ಧರಾಂಬಿರ್.
ಹಾಗೇ ನೋಡಿದ್ರೆ, ರಾಹುಲ್ ಟೆವಾಟಿಯಾ ಅವರಿಗೆ ಕ್ರಿಕೆಟ್ ಮೊದಲ ಆಯ್ಕೆಯಾಗಿರಲಿಲ್ಲ. ರಾಹುಲ್ ಅವರ ಅಜ್ಜ ಪೈಲ್ವಾನ್ ಆಗಿದ್ದರು. ಅವರ ಚಿಕ್ಕಪ್ಪ ರಾಷ್ಟ್ರೀಯ ಹಾಕಿ ಆಟಗಾರ. ಹಾಕಿ ಸಿಹಿ ಗ್ರಾಮದ ಪ್ರಮುಖ ಕ್ರೀಡೆಯಾಗಿತ್ತು. ಆದ್ರೆ ಟೆವಾಟಿಯಾ ಅವರಿಗೆ ಕ್ರಿಕೆಟ್ ಮೇಲೆ ಅಪಾರ ಆಸಕ್ತಿ ಇತ್ತು. ಹೀಗಾಗಿ ರಾಹುಲ್ ಟೆವಾಟಿಯಾ ಅವರ ತಂದೆ ಕೃಷ್ಣಪಾಲ್ ಅವರು ವಿಜಯ್ ಯಾದವ್ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದ್ರು. ನಂತರ ಹರಿಯಾಣ ವಿವಿಧ ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ್ದರು. ಹಾಗೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಶಿಬಿರಕ್ಕೂ ಸೇರಿಕೊಂಡ್ರು. ಆದ್ರೆ ಹರಿಯಾಣ ತಂಡದಲ್ಲಿ ರಾಹುಲ್ ಟೆವಾಟಿಯಾಗೆ ಸರಿಯಾದ ಅವಕಾಶ ಸಿಗಲಿಲ್ಲ. ಇದೀಗ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ.

Tags: #poet Surdas#rahul tewatia#Sihi villagehariyanaIPLIPL 2020Kings XI PunjabMahabharatapandavasrajasthan royals
ShareTweetSendShare
Join us on:

Related Posts

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!

by admin
December 5, 2025
0

ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ...! ಅಡಕೆ ಕೃಷಿ ನಮ್ಮ ಜೀವಾಳ..ಇಡೀ ಕರಾವಳಿ, ಮಲೆನಾಡು ಕೃಷಿಕರ ಬದುಕನ್ನು ಹಸನಾಗಿಸಿರೋದು ಇದೇ ಅಡಕೆ ಬೆಳೆ. ಹೌದು.. ಹಚ್ಚ ಹಸಿರಿನಿಂದ ಕಂಗೊಳಿಸುವ...

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

ರಾಜ್ಯ ಕಾಂಗ್ರೆಸ್‌ನಲ್ಲಿ ಶೇ. 63% ಭ್ರಷ್ಟಾಚಾರ ಇದೆ: ಆರ್. ಅಶೋಕ್

by Shwetha
December 5, 2025
0

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಎಂದು ಸುಳ್ಳು ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ತೊಟ್ಟಿಯಲ್ಲಿ ಮುಳುಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ...

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

ರೂಪಾಯಿ ಮೌಲ್ಯ ಕುಸಿತ: ‘ನಮ್ಮ ರೂಪಾಯಿಗೆ ಜಗತ್ತಿನಲ್ಲಿ ಬೆಲೆಯೇ ಇಲ್ಲ’ — ಖರ್ಗೆ

by Shwetha
December 5, 2025
0

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿದಿರುವ ಹಿನ್ನೆಲೆ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿ ಕಾರಿದ್ದಾರೆ. ರೂಪಾಯಿ...

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಸಂಚಾರ್ ಸಾಥಿ ಆಪ್ ಕಡ್ಡಾಯವಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

by Shwetha
December 5, 2025
0

ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಸೈಬರ್​ ಭದ್ರತಾ ಆಪ್ ಅನ್ನು ಕಡ್ಡಾಯವಾಗಿ ಪೂರ್ವ ಅಳವಡಿಕೆ ಮಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಈ...

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಎನ್‌ಪಿಎಸ್ ರದ್ದು, ಹಳೆ ಪಿಂಚಣಿ ಮರುಜಾರಿ ವರದಿ ಸಿದ್ಧ; ಶೀಘ್ರದಲ್ಲೇ ಅಂತಿಮ ನಿರ್ಧಾರ

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಎನ್‌ಪಿಎಸ್ ರದ್ದು, ಹಳೆ ಪಿಂಚಣಿ ಮರುಜಾರಿ ವರದಿ ಸಿದ್ಧ; ಶೀಘ್ರದಲ್ಲೇ ಅಂತಿಮ ನಿರ್ಧಾರ

by Shwetha
December 5, 2025
0

ಬೆಂಗಳೂರು: ಕರ್ನಾಟಕದ ಲಕ್ಷಾಂತರ ಸರ್ಕಾರಿ ನೌಕರರ ಪಾಲಿಗೆ ಅತ್ಯಂತ ಮಹತ್ವದ ಮತ್ತು ಬಹುದಿನದ ನಿರೀಕ್ಷೆಯೊಂದು ಅಂತಿಮ ಹಂತಕ್ಕೆ ತಲುಪಿದೆ. ನೌಕರರ ಬದುಕಿನ ಸಂಧ್ಯಾಕಾಲದ ಆರ್ಥಿಕ ಭದ್ರತೆಯ ಪ್ರಶ್ನೆಯಾಗಿರುವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram