ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

RCB vs MI | ಸೋತವರ ಕಾಳಗದಲ್ಲಿ ಗೆಲ್ಲೋರು ಯಾರು

Mahesh M Dhandu by Mahesh M Dhandu
September 26, 2021
in IPL 2021, Newsbeat, ಐಪಿಎಲ್ 2021
ipl-2021
Share on FacebookShare on TwitterShare on WhatsappShare on Telegram

ಎರಡೂ ತಂಡಗಳು ಯುಎಇ ಆವೃತ್ತಿಯ ಟೂರ್ನಿಯಲ್ಲಿ ತಲಾ ಎರಡೆರಡು ಪಂದ್ಯಗಳನ್ನು ಆಡಿವೆ. ಆದರೆ ಎರಡರಲ್ಲೂ ಸೋತಿದೆ. ಬ್ಯಾಟಿಂಗ್​​ ಅಂದುಕೊಂಡಷ್ಟು ಕ್ಲಿಕ್​​ ಆಗಿಲ್ಲ.

ಬೌಲಿಂಗ್​​​ ಪಂದ್ಯ ಗೆಲ್ಲಿಸಿಕೊಡುವ ಪ್ರದರ್ಶನ ನೀಡಿಲ್ಲ. ತಂಡದಲ್ಲಿ ಬದಲಾವಣೆ ಮಾಡಿದರೂ ಫಲಿತಾಂಶದಲ್ಲಿ ವ್ಯತ್ಯಾಸ ಆಗಿಲ್ಲ. ಈ ಮಧ್ಯೆ ಪಾಯಿಂಟ್​ ಟೇಬಲ್​​ನಲ್ಲಿ ಏರು ಪೇರು ಆಗ್ತಾ ಇರೋದ್ರಿಂದ ಪ್ಲೇ-ಆಫ್​​ ಸ್ಥಾನವೂ ಗಟ್ಟಿಯಾಗಿಲ್ಲ.

Related posts

ಬೆಳೆಯುವ ನಾಯಕರನ್ನು ಮುಗಿಸಲು ದೊಡ್ಡ ಸಂಚು ನಡೆಯುತ್ತಿದೆ: ವಿರೋಧಿಗಳಿಗೆ ಜಮೀರ್ ಎಚ್ಚರಿಕೆ

ಬೆಳೆಯುವ ನಾಯಕರನ್ನು ಮುಗಿಸಲು ದೊಡ್ಡ ಸಂಚು ನಡೆಯುತ್ತಿದೆ: ವಿರೋಧಿಗಳಿಗೆ ಜಮೀರ್ ಎಚ್ಚರಿಕೆ

August 9, 2026
ರಾಹುಲ್ ಗಾಂಧಿ ಅಭಿಯಾನಕ್ಕೆ ಯುವಜನರ ಬೆಂಬಲವಿಲ್ಲ:ಜೆನ್ ಝೀ ನಾಡಿಮಿಡಿತ ಅರಿಯುವಲ್ಲಿ ಕಾಂಗ್ರೆಸ್ ಸೋತಿದೆ- ಶಶಿ ತರೂರ್

ರಾಹುಲ್ ಗಾಂಧಿ ಅಭಿಯಾನಕ್ಕೆ ಯುವಜನರ ಬೆಂಬಲವಿಲ್ಲ:ಜೆನ್ ಝೀ ನಾಡಿಮಿಡಿತ ಅರಿಯುವಲ್ಲಿ ಕಾಂಗ್ರೆಸ್ ಸೋತಿದೆ- ಶಶಿ ತರೂರ್

August 9, 2026

ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಯಲ್ಲಿ ಇಟ್ಟುಕೊಂಡೇ ಮುಂಬೈ ಇಂಡಿಯನ್ಸ್​​ ಮತ್ತು  ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಕಣಕ್ಕಿಳಿಯುತ್ತಿದೆ.

ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ಕಣಕ್ಕಿಳಿಯುವ ಮೊದಲು ಎರಡೂ ತಂಡಗಳು ಗೆಲುವಿನ ಒತ್ತಡದಲ್ಲಿದೆ. ಒಂದು ವೇಳೆ ರಾಯಲ್​​ ಚಾಲೆಂಜರ್ಸ್​ ಈ ಪಂದ್ಯವನ್ನು ಸೋತರೆ ಅಂಕಪಟ್ಟಿಯಲ್ಲಿ ಮತ್ತಷ್ಟು ಕೆಳಗೆ ಇಳಿಯುತ್ತದೆ.

ಮುಂಬೈ ಇಂಡಿಯನ್ಸ್​​ ಸೋತರೆ ಮುಂದಿನ ನಾಲ್ಕು ಪಂದ್ಯಗಳ ಪೈಕಿ ನಾಲ್ಕನ್ನೂ ಗೆಲ್ಲಬೇಕಾಗುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಹಲವು ಲೆಕ್ಕಾಚಾರಗಳು ಅಡಗಿವೆ.

ಕಾಂಬಿನೇಷನ್​ ವಿಚಾರಕ್ಕೆ ಬಂದರೆ ಆರ್​​ಸಿಬಿಯ ಬ್ಯಾಟಿಂಗ್​​ ಫ್ಲಾಪ್​ ಆಗಿದೆ. ವಿರಾಟ್​, ದೇವದತ್​​​ ಪಡಿಕಲ್​ ಚೆನ್ನೈ ವಿರುದ್ಧ ರನ್​​ಗಳಿಸಿದ್ದಾರೆ.

ಇವರಿಬ್ಬರನ್ನು ಬಿಟ್ರೆ ಎಬಿಡಿ, ಮ್ಯಾಕ್ಸ್​ವೆಲ್​​ ಮತ್ತು ಕೆಳ ಸರದಿ ರನ್​ ಬರ ಅನುಭವಿಸಿದೆ. ಟಿಮ್​​ ಡೇವಿಡ್​​ ಮತ್ತು ಹಸರಂಗ ರೋಲ್​​ ಏನು ಅನ್ನುವುದು ಕೂಡ ಅರ್ಥವಾಗುತ್ತಿಲ್ಲ. ಬೌಲಿಂಗ್​​ನಲ್ಲೂ ಆರ್​​ಸಿಬಿ ಎಡವಿದ್ದು ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.

ಮುಂಬೈ ತಲೆನೋವು ಕೂಡ ಕಡಿಮೆ ಇಲ್ಲ. ಬ್ಯಾಟಿಂಗ್​​ನಲ್ಲಿ ಸೂರ್ಯ ಕುಮಾರ್​ ಯಾದವ್​​, ಇಶಾನ್​​ ಕಿಶಾನ್​​, ಕಿರಾನ್​ ಪೊಲ್ಲಾರ್ಡ್​ ಕೈ ಹಿಡಿದಿಲ್ಲ.

RCB vs MI saaksha tv

ಹಾರ್ದಿಕ್​ ಪಾಂಡ್ಯ ಆಡ್ತಾರೋ ಇಲ್ವೋ ಅನ್ನೋದು ಕೂಡ ಚರ್ಚೆಯಲ್ಲಿದೆ. ಬೌಲಿಂಗ್​​ ವಿಚಾರಕ್ಕೆ ಬಂದ್ರೆ ಇಲ್ಲೂ ಅಷ್ಟೇ, ಸ್ಥಿರ ಪ್ರದರ್ಶನ ಬಂದಿಲ್ಲ. ಬುಮ್ರಾ, ಬೋಲ್ಡ್​​ ಮತ್ತು ರಾಹುಲ್​​ ಚಹರ್​ ಅನಿವಾರ್ಯ ಅನ್ನುವಾಗ ಕೈ ಕೊಟ್ಟಿದ್ದಾರೆ.

ದುಬೈ  ಅಂತರಾಷ್ಟ್ರೀಯ ಮೈದಾನದ ಪಿಚ್​ ಕೂಡ ಎರಡೂ ತಂಡಗಳಿಗೆ ಸವಾಲಾಗಿದೆ.  ಕೊಂಚ ಸ್ಲೋ ಪಿಚ್​​ ಇರುವುದರಿಂದ ರನ್​​ಮಳೆ ಕಷ್ಟಸಾಧ್ಯ. ಆದರೂ ಗೆಲುವಿಗಾಗಿ ಎರಡೂ ತಂಡಗಳು ವಿಭಿನ್ನ ಪ್ಲಾನ್​​ ಮಾಡಲೇಬೇಕಿದೆ.

ಸಂಭಾವ್ಯ XI

ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ, 2. ದೇವದತ್ ಪಡಿಕಲ್, 3.ಕೆ.ಎಸ್. ಭರತ್, 4.ಗ್ಲೆನ್ ಮ್ಯಾಕ್ಸ್ವೆಲ್, 5. ಎ.ಬಿ.ಡಿವಿಲಿಯರ್ಸ್, 6. ಮೊಹಮ್ಮದ್ ಅಜರುದ್ದೀನ್, 7.ಕೈಲ್ ಜೇಮಿಸನ್, 8. ವಹಿಂಡು ಹಸರಂಗ/ಟಿಮ್ ಡೇವಿಡ್, 9. ಹರ್ಷಲ್ ಪಟೇಲ್, 10. ಮೊಹಮ್ಮದ್ ಸಿರಾಜ್, 11.ಯಜುವೇಂದ್ರ ಚಹಲ್

ಮುಂಬೈ ಇಂಡಿಯನ್ಸ್​​​

ರೋಹಿತ್​​ ಶರ್ಮಾ, 2. ಕ್ವಿಂಟಾನ್​​ ಡಿ ಕಾಕ್​​, 3. ಸೂರ್ಯಕುಮಾರ್​​ ಯಾದವ್​​, 4. ಇಶಾನ್​​ ಕಿಶನ್​​, 5. ಕಿರಾನ್​​ ಪೊಲ್ಲಾರ್ಡ್​, 6. ಹಾರ್ದಿಕ್​​ ಪಾಂಡ್ಯ, 7. ಕೃನಾಲ್​​ ಪಾಂಡ್ಯ, 8.ರಾಹುಲ್​​ ಚಹರ್​​, 9. ಟ್ರೆಂಡ್​​ ಬೋಲ್ಟ್​​, 10. ಜಸ್​ಪ್ರಿತ್​​ ಬುಮ್ರಾ, 11. ನಾಥನ್​​ ಕೌಲ್ಟರ್​​ ನಿಲ್​​

Tags: #Saaksha TVipl 2021miRCB
ShareTweetSendShare
Join us on:

Related Posts

ಬೆಳೆಯುವ ನಾಯಕರನ್ನು ಮುಗಿಸಲು ದೊಡ್ಡ ಸಂಚು ನಡೆಯುತ್ತಿದೆ: ವಿರೋಧಿಗಳಿಗೆ ಜಮೀರ್ ಎಚ್ಚರಿಕೆ

ಬೆಳೆಯುವ ನಾಯಕರನ್ನು ಮುಗಿಸಲು ದೊಡ್ಡ ಸಂಚು ನಡೆಯುತ್ತಿದೆ: ವಿರೋಧಿಗಳಿಗೆ ಜಮೀರ್ ಎಚ್ಚರಿಕೆ

by Shwetha
August 9, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್‌ರಚನೆಯ ಚರ್ಚೆಗಳು ಬಿರುಸಾಗಿರುವ ಬೆನ್ನಲ್ಲೇ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ರಾಜಕೀಯವಾಗಿ ಎತ್ತರಕ್ಕೆ ಬೆಳೆಯುವ...

ರಾಹುಲ್ ಗಾಂಧಿ ಅಭಿಯಾನಕ್ಕೆ ಯುವಜನರ ಬೆಂಬಲವಿಲ್ಲ:ಜೆನ್ ಝೀ ನಾಡಿಮಿಡಿತ ಅರಿಯುವಲ್ಲಿ ಕಾಂಗ್ರೆಸ್ ಸೋತಿದೆ- ಶಶಿ ತರೂರ್

ರಾಹುಲ್ ಗಾಂಧಿ ಅಭಿಯಾನಕ್ಕೆ ಯುವಜನರ ಬೆಂಬಲವಿಲ್ಲ:ಜೆನ್ ಝೀ ನಾಡಿಮಿಡಿತ ಅರಿಯುವಲ್ಲಿ ಕಾಂಗ್ರೆಸ್ ಸೋತಿದೆ- ಶಶಿ ತರೂರ್

by Shwetha
August 9, 2026
0

ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷೆಯ ಛಾತ್ರೋನ್ ಕಿ ಗೂಂಜ್ ಅಭಿಯಾನವು ಯುವಜನರ ಮೇಲೆ ನಿರೀಕ್ಷಿತ ಪ್ರಭಾವ ಬೀರಲು ವಿಫಲವಾಗಿದೆ ಎಂದು ಹಿರಿಯ ಸಂಸದ...

ನಾನು ಬಾಬಾ ಬಾಗೇಶ್ವರ್ ಅಲ್ಲ ಆದರೆ ನಿಮ್ಮ ಮನಸ್ಸಿನ ಮಾತು ಗೊತ್ತು: ಮೋದಿ ಮಾತಿಗೆ GenZ ವಿದ್ಯಾರ್ಥಿಗಳು ಫಿದಾ

ನಾನು ಬಾಬಾ ಬಾಗೇಶ್ವರ್ ಅಲ್ಲ ಆದರೆ ನಿಮ್ಮ ಮನಸ್ಸಿನ ಮಾತು ಗೊತ್ತು: ಮೋದಿ ಮಾತಿಗೆ GenZ ವಿದ್ಯಾರ್ಥಿಗಳು ಫಿದಾ

by Shwetha
August 9, 2026
0

ನವದೆಹಲಿ: ದೆಹಲಿಯ ಐಐಟಿ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿಶಿಷ್ಟ ಶೈಲಿಯ ಭಾಷಣದ ಮೂಲಕ ಯುವ ಜನತೆಯ ಮನ ಗೆದ್ದಿದ್ದಾರೆ. ಸದಾ...

ನಾವು ಯಾರು ನಮ್ಮ ಸಂಸ್ಕೃತಿ ಯಾವುದು ಅಂತ ತಾಯಿ ತಿಳಿಸ್ತಾರೆ- ಯತೀಂದ್ರ ಮೊದಲು ತಮ್ಮ ತಾಯಿ ಬಳಿ ಧರ್ಮದ ಬಗ್ಗೆ ಕೇಳಲಿ: ಯತೀಂದ್ರಗೆ ಶೋಭಾ ಟಾಂಗ್

ನಾವು ಯಾರು ನಮ್ಮ ಸಂಸ್ಕೃತಿ ಯಾವುದು ಅಂತ ತಾಯಿ ತಿಳಿಸ್ತಾರೆ- ಯತೀಂದ್ರ ಮೊದಲು ತಮ್ಮ ತಾಯಿ ಬಳಿ ಧರ್ಮದ ಬಗ್ಗೆ ಕೇಳಲಿ: ಯತೀಂದ್ರಗೆ ಶೋಭಾ ಟಾಂಗ್

by Shwetha
August 9, 2026
0

ಬೆಂಗಳೂರು: ಭಾರತ ಹಿಂದೂ ರಾಷ್ಟ್ರ ಆಗಬಾರದು ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಅವರು ಈ ದೇಶದ...

ಇಂಟರ್ನೆಟ್ ಹೀರೋಗಳಾಗಬೇಡಿ ಪೊಲೀಸರಿಗೆ ಮಾಹಿತಿ ನೀಡಿ: ಅಕ್ರಮ ವಲಸಿಗರ ವೀಡಿಯೊ ಹರಿಬಿಡುವವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

ಇಂಟರ್ನೆಟ್ ಹೀರೋಗಳಾಗಬೇಡಿ ಪೊಲೀಸರಿಗೆ ಮಾಹಿತಿ ನೀಡಿ: ಅಕ್ರಮ ವಲಸಿಗರ ವೀಡಿಯೊ ಹರಿಬಿಡುವವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

by Shwetha
August 9, 2026
0

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಕ್ರಮ ವಲಸಿಗರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ತನಿಖೆ ನಡೆಸಿ ವೀಡಿಯೊ ಹಂಚಿಕೊಳ್ಳುವವರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram