IPl 2022 : ಧೋನಿ ಬ್ಯಾಟಿಂಗ್ ಬಗ್ಗೆ ಗವಾಸ್ಕರ್ ಟೀಕೆ
ಐಪಿಎಲ್ 2022 ರಲ್ಲಿ ಸಿಎಸ್ಕೆ ಇನ್ನೂ ಬೋಣಿ ಮಾಡಿಲ್ಲ. ಮೂರು ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಕಂಡಿರುವ ಸಿಎಸ್ ಕೆ ಒತ್ತಡಕ್ಕೆ ಸಿಲುಕಿದೆ.
ಭಾನುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ 54 ರನ್ಗಳಿಂದ ಸೋತಿದೆ.
ಹ್ಯಾಟ್ರಿಕ್ ಸೋಲು ಕಂಡಿರುವ ಸಿಎಸ್ ಕೆ ಮುಂದಿನ ಪಂದ್ಯವನ್ನು ಗೆದ್ದು ಈ ಋತುವಿನಲ್ಲಿ ಮೊದಲ ಗೆಲುವು ದಾಖಲಿಸುತ್ತಾ ಕಾದು ನೋಡಬೇಕು.
ಈ ನಡುವೆ ಪಂಜಾಬ್ ವಿರುದ್ಧ ಚೆನ್ನೈ ತಂಡದ ಸೋಲಿಗೆ ಧೋನಿಯ ಬ್ಯಾಟಿಂಗ್ ಕಾರಣ ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
‘‘36 ರನ್ಗಳಿಗೆ ಸಿಎಸ್ಕೆ ಐದು ನಿರ್ಣಾಯಕ ವಿಕೆಟ್ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ, ಶಿವಂ ದುಬೆ ಮತ್ತು ಎಂಎಸ್ ಧೋನಿ ತಮ್ಮ ಇನ್ನಿಂಗ್ಸ್ನೊಂದಿಗೆ ಸಿಎಸ್ಕೆಗೆ ಚೇತರಿಕೆ ನೀಡಲು ಪ್ರಯತ್ನಿಸಿದರು.
ಇವರಿಬ್ಬರ ನಡುವೆ ಅರ್ಧಶತಕದ ಜೊತೆಯಾಟ ದಾಖಲಾಗಿದ್ದರಿಂದ ಮತ್ತೆ ಚೆನ್ನೈ ಗೆಲುವಿನ ಆಸೆ ಹುಟ್ಟಿಕೊಂಡಿತ್ತು. ಶಿವಂ ದುಬೆ ಸ್ವಲ್ಪ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುತ್ತಿದ್ರೆ, ಧೋನಿ ದುಬೆಗೆ ಸಹಕಾರ ನೀಡಿದ್ದು ಮೊದಲು ಸರಿ ಅನಿಸಿತು.
ಆದ್ರೆ ಧೋನಿ ಪೂರ್ತಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ರು. ಇದು ಧೋನಿ ಮಾಡಿದ ತಪ್ಪು. ನಾಯಕತ್ವದಿಂದ ಕೆಳಗಿಳಿದ ಬಳಿಕ ಅಬ್ಬರದ ಬ್ಯಾಟಿಂಗ್ ನಡೆಸಿದ ಧೋನಿ, ಪಂಜಾಬ್ ವಿರುದ್ಧದಲ್ಲಿ ಆ ಪ್ರದರ್ಶನ ನೀಡಲಿಲ್ಲ.
ದುಬೆ ಜತೆ ಉತ್ತಮ ಜೊತೆಯಾಟವನ್ನು ಸ್ಥಾಪಿಸಿದ ಧೋನಿ ಆ ಬಳಿಕ ದೊಡ್ಡ ಹೊಡೆತಗಳನ್ನು ಆಡಿದ್ದರೆ ಚೆನ್ನಾಗಿತ್ತು ಎಂದು ಗವಾಸ್ಕರ್ ಪ್ರತಿಪಾದಿಸಿದ್ದಾರೆ.
ipl-2022-sunil-gavaskar- criticize ms-dhoni batting