IPL | ಏನ್ ಮಾಡೋಕೆ ಆಗುತ್ತೆ… RCB ನಸೀಬು ಸರಿಯಿಲ್ಲ..
ಕ್ಯಾಚಸ್ ವಿನ್ ಮ್ಯಾಚಸ್ ಅನ್ನೋದು ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚಾಲ್ತಿಯಲ್ಲಿರುವ ಮಾತು. ಇದು ನಿಜ ಕೂಡ ಹೌದು..! ಯಾವುದೇ ಪಂದ್ಯ ಗೆಲ್ಲಬೇಕಾದ್ರೆ ಕ್ಯಾಚ್ ಗಳನ್ನ ಹಿಡಿಯೋದು ಮುಖ್ಯವಾಗುತ್ತದೆ.
ಅದೆಷ್ಟೋ ಪಂದ್ಯಗಳಲ್ಲಿ ಫೀಲ್ಡರ್ ಗಳ ಮಿಸ್ ಫೀಲ್ಡಿಂಗ್ ನಿಂದಾಗಿ ತಂಡಗಳು ಮ್ಯಾಚ್ ಗಳನ್ನು ಸೋತಿವೆ. 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ನ ಕ್ವಾಲಿಫೈಯರ್ ನಲ್ಲಿ ಪಂದ್ಯದಲ್ಲೂ ಇದು ಮರುಕಳಿಸಿದೆ.
ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ ನ 11 ಓವರ್ ಹರ್ಷಲ್ ಪಟೇಲ್ ಬೌಲಿಂಗ್ ಮಾಡಿದ್ರು. ಆಗ ಬಟ್ಲರ್ ಶಾಟ್ ಹೊಡೆಯಲು ಪ್ರಯತ್ನಿಸಿದರು.
ಆದ್ರೆ ಚೆಂಡು ಬ್ಯಾಟ್ ಗೆ ಎಡ್ಜ್ ಆಗಿ ಕೀಪರ್ ದಿನೇಶ್ ಕಾರ್ತಿಕ್ ಕಡೆ ಹೋಯ್ತು. ಕಾರ್ತಿಕ್ ಕ್ಯಾಚ್ ಮಿಸ್ ಮಾಡಿದ್ರು. ಇಲ್ಲಿಗೆ ಮ್ಯಾಚ್ ರಾಜಸ್ಥಾನ್ ಕೈ ಸೇರಿತು.

ಆ ಸಮಯದಲ್ಲಿ ಬಟ್ಲರ್ 66 ರನ್ ಗಳಿಸಿದ್ದರು. ಇಲ್ಲಿಂದ ಬಟ್ಲರ್ ಸೆಂಚೂರಿ ದಾಖಲಿಸಿ ಮ್ಯಾಚ್ ವಿನ್ ಮಾಡಿಸಿದ್ರು. ಒಂದು ವೇಳೆ ದಿನೇಶ್ ಕಾರ್ತಿಕ್ ಆ ಕ್ಯಾಚ್ ಹಿಡಿದಿದ್ದರೇ ಪಂದ್ಯದ ರಿಸಲ್ಟ್ ಬೇರೆಯದ್ದೇ ಆಗಿರುತ್ತಿತ್ತು.
ಇನ್ನು ದಿನೇಶ್ ಕಾರ್ತಿಕ್ ಕ್ಯಾಚ್ ಮಿಸ್ ಮಾಡಿದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗುತ್ತಿದೆ. ಕೆಲವು ನೆಟ್ಟಿಗರು, ನಮ್ಮ ತಂಡದ ಗ್ರಹಚಾರವೇ ಚೆನ್ನಾಗಿಲ್ಲ.
ಯಾರನ್ನೂ ನಿಂದಿಸುವ ಪ್ರಮಯವೇ ಇಲ್ಲ. ಸೋಲು ಅನುಭಸಬೇಕು ಎಂದು ಬರೆದಿತ್ತು, ಅದರಂತೆ ಸೋತಿದ್ದೇವೆ ಎನ್ನುತ್ತಿದ್ದಾರೆ.
ಇನ್ನು ಕ್ವಾಲಿಫೈಯರ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಗುಜರಾತ್ ವಿರುದ್ಧ ಸೆಣಸುತ್ತಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಎರಡೂ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗುತ್ತಿದ್ದು, ಪಂದ್ಯ ಸಾಕಷ್ಟು ರಸವತ್ತಾಗಿರಲಿದೆ.








