ಪುಟ್ಟಪರ್ತಿ ಸಾಯಿಬಾಬಾ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಗುರುಗಳಲ್ಲಿ ಒಬ್ಬರು. ಆಂಧ್ರ ಪ್ರದೇಶದ ಪುಟ್ಟಪರ್ತಿ ಎಂಬ ಗ್ರಾಮ ಇವರ ಜನ್ಮಸ್ಥಳ. ಇವರು ಶಿರಡಿ ಸಾಯಿಬಾಬಾ ಅವರ ಮತ್ತೊಂದು ಅವತಾರ ಎಂದು ತಮ್ಮನ್ನು ತಾವು ಘೋಷಿಸಿಕೊಂಡಿದ್ದರು. ಈ ಲೇಖನದಲ್ಲಿ ಪುಟ್ಟಪರ್ತಿ ಸಾಯಿಬಾಬಾರವರ ಜೀವನ, ಅವರ ಸೇವಾ ಕಾರ್ಯಗಳು, ವಿವಾದಗಳು, ಹಾಗೂ ಅವರು ದೇವರ ಅವತಾರನಾಗಿದ್ದಾರೇ ಎಂಬ ಪ್ರಶ್ನೆಗಳ ಬಗ್ಗೆ ಚರ್ಚೆ ಮಾಡೋಣ.
ಜನನ ಮತ್ತು ಬಾಲ್ಯ
ಸಾಯಿಬಾಬಾರವರ ನಿಜವಾದ ಹೆಸರು ಸತ್ಯನಾರಾಯಣ ರಾಜು. 1926ರಲ್ಲಿ ಅವರು ಆಂಧ್ರ ಪ್ರದೇಶದ ಗೊಲ್ಲಪಲ್ಲಿ (ಈಗ ಪುಟ್ಟಪರ್ತಿ) ಗ್ರಾಮದಲ್ಲಿ ಜನಿಸಿದರು. ಅವರ ಪೋಷಕರು ವೆಂಕಮ್ಮ ರಾಜು ಮತ್ತು ಈಶ್ವರಮ್ಮ. ಇವರ ಜನನದ ವೇಳೆ ತಾಯಿ ಈಶ್ವರಮ್ಮನಿಗಾದ ಒಂದು ವಿಶೇಷ ಅನುಭವದ ಬಗ್ಗೆ ಹಲವಾರು ಕತೆಗಳು ಇವೆ. ಅದರಲ್ಲಿ ಮಗು ಹುಟ್ಟಿದಾಗ ಪಕ್ಕದಲ್ಲಿ ನಾಗರಹಾವು ಕಾಣಿಸಿಕೊಂಡಿತ್ತೆಂಬ ಕಥೆಯೂ ಪ್ರಸಿದ್ಧವಾಗಿದೆ.
ಸತ್ಯನಾರಾಯಣ ರಾಜು ಅವರು ಚಿಕ್ಕ ವಯಸ್ಸಿನಿಂದಲೇ ಕಾವ್ಯ, ನಾಟಕ, ಮತ್ತು ಸಂಗೀತದ ಮೇಲೆ ಆಸಕ್ತಿ ತೋರಿದ್ದರು. ಬಾಲ್ಯದಲ್ಲಿ ಅವರಿಗೆ ಒಂದು ಚೇಳು ಕಚ್ಚಿದ ನಂತರ ಅವರ ವರ್ತನೆ ಬಹಳಷ್ಟು ಬದಲಾಗಿತು. 1940ರಲ್ಲಿ ಅವರು ಶಿರಡಿ ಸಾಯಿಬಾಬಾ ಅವರ ಅವತಾರವೆಂದು ಘೋಷಣೆ ಮಾಡಿದರು.
ಧಾರ್ಮಿಕ ಜೀವನದ ಪ್ರಾರಂಭ
1940ರಲ್ಲಿ ತಮ್ಮನ್ನು ಶಿರಡಿ ಬಾಬಾರ ಅವತಾರ ಎಂದು ಘೋಷಿಸಿಕೊಂಡ ನಂತರ, ಸಾಯಿಬಾಬಾ ಭಕ್ತರೊಂದಿಗೆ ಭಜನೆಗಳನ್ನು ಪ್ರಾರಂಭಿಸಿದರು. ಅವರ ಕಾರ್ಯ ಮತ್ತು ಶಕ್ತಿ ಕುರಿತು ವಿಶೇಷ ಕಥೆಗಳು ಜನರಲ್ಲಿ ಭಕ್ತಿ ಹುಟ್ಟಿಸಿತು. 1950ರಲ್ಲಿ “ಪ್ರಶಾಂತಿ ನಿಲಯಂ” ಎಂಬ ಧಾರ್ಮಿಕ ಕೇಂದ್ರವನ್ನು ಪುಟ್ಟಪರ್ತಿಯಲ್ಲಿ ಸ್ಥಾಪಿಸಿದರು. ಈ ಆಶ್ರಮವು ಸಾವಿರಾರು ಭಕ್ತರಿಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಕೇಂದ್ರಬಿಂದುವಾಯಿತು.
ಸತ್ಯಸಾಯಿ ಬಾಬಾ ಅವರು ದರ್ಶನದ ವೇಳೆ ಭಕ್ತರ ನಡುವೆ ನಡೆದು ಅವರ ಮನವಿ, ನಮಸ್ಕಾರಗಳನ್ನು ಸ್ವೀಕರಿಸುತ್ತಿದ್ದರು ಮತ್ತು ಅವರು ವಿಭೂತಿ ಮತ್ತು ಚಿಕ್ಕ ವಸ್ತುಗಳನ್ನು ಪ್ರತ್ಯಕ್ಷ ಮಾಡುವಂತಹ ಪವಾಡಗಳಿಂದ ಪ್ರಸಿದ್ಧರಾಗಿದ್ದರು.
ವಿಭೂತಿ ಸೃಷ್ಟಿ:
ಬಾಬಾ ಅವರು ಭಕ್ತರಿಗೆ ವಿಶಿಷ್ಟವಾಗಿ ತಮ್ಮ ಕೈಯಿಂದ ವಿಭೂತಿಯನ್ನು (ಪವಿತ್ರ ಬೂದಿ) ಸೃಷ್ಟಿಸಿ ಹಂಚುತ್ತಿದ್ದರು.
ವಿಭೂತಿಯನ್ನು ಸೃಷ್ಟಿಸುವ ಪ್ರಕ್ರಿಯೆ ಭಕ್ತರಲ್ಲಿ ಅಪಾರ ಭಕ್ತಿ ಮತ್ತು ಕೌತುಕವನ್ನು ಉಂಟುಮಾಡುತ್ತಿತ್ತು.
ಭಕ್ತರು ಈ ವಿಭೂತಿಯನ್ನು ಶ್ರದ್ಧೆಯಿಂದ ಪ್ರಾರ್ಥನೆ ಮತ್ತು ಆರೋಗ್ಯದ ಸಂಕೇತವಾಗಿ ಸ್ವೀಕರಿಸುತ್ತಿದ್ದರು.
ಈ ಪ್ರಕ್ರಿಯೆ ಬಾಬಾ ಅವರ ಆಧ್ಯಾತ್ಮಿಕ ಶಕ್ತಿಯ ಒಂದು ಸಂಕೇತವಾಗಿ ಗುರುತಿಸಲಾಗುತ್ತಿತ್ತು.
ಮಿಸ್ಟರಿ:
ಈ ವಿಭೂತಿಯನ್ನು ತಮ್ಮ ಕೈಯಿಂದ ಹೇಗೆ ಸೃಷ್ಟಿಸುತ್ತಿದ್ದರು ಎಂಬುದು ಎಂದಿಗೂ ವೈಜ್ಞಾನಿಕವಾಗಿ ವಿವರಿಸಲ್ಪಡಲಿಲ್ಲ.
ಬಾಬಾ ಅವರ ಆಧ್ಯಾತ್ಮಿಕ ಶಕ್ತಿಯ ಮಿಸ್ಟರಿ ಎಂದು ಭಕ್ತರು ಅದನ್ನು ನೋಡುತ್ತಿದ್ದರು.
ಕೆಲವರು ಅದನ್ನು ದೈವಿಕ ಶಕ್ತಿ ಎಂದು ನಂಬಿದರು, ಇನ್ನು ಕೆಲವರು ಅದನ್ನು ಅನುಮಾನದ ದೃಷ್ಟಿಯಿಂದ ಪ್ರಶ್ನಿಸಿದರು.
ಈ ವಿಶೇಷತೆ ಬಾಬಾ ಅವರ ಬದುಕಿನ ಒಂದು ಮಹತ್ವದ ಭಾಗವಾಗಿತ್ತು, ಹಾಗೂ ಭಕ್ತರ ನಂಬಿಕೆ ಮತ್ತು ಭಕ್ತಿ ಹೆಚ್ಚಿಸಲು ಪ್ರಮುಖ ಕಾರಣವಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಸೇವಾ ಕಾರ್ಯಗಳು
ಸಾಯಿಬಾಬಾರವರ ಹೆಸರಿನಲ್ಲಿ ಅನೇಕ ಸೇವಾ ಸಂಸ್ಥೆಗಳು ಸ್ಥಾಪಿಸಲ್ಪಟ್ಟಿವೆ. ಅವರು ಆಸ್ಪತ್ರೆಗಳು, ಶಾಲೆಗಳು, ಮತ್ತು ಮಹಿಳಾ ಅಭಿವೃದ್ದಿ ಕೇಂದ್ರಗಳನ್ನು ನಿರ್ಮಿಸಿದರು. 2001ರಲ್ಲಿ ಪುಟ್ಟಪರ್ತಿಯಲ್ಲಿ “ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್” ಸ್ಥಾಪನೆಯಾಯಿತು. ಅವರು ಕೈಗೊಂಡ ನೀರಿನ ಯೋಜನೆಗಳು ಸಾವಿರಾರು ಜನರಿಗೆ ಹಿತಕಾರಿಯಾಯಿತು.
ಮುಖ್ಯ ಅಂಶಗಳು:
1. ಶಿರಡಿ ಸಾಯಿಬಾಬಾ ಅವರ ಅವತಾರ:
ಸತ್ಯಸಾಯಿ ಬಾಬಾ ಅವರು ತಮ್ಮನ್ನು ಶಿರಡಿ ಸಾಯಿಬಾಬಾ ಅವರ ಫಕೀರ ಅವತಾರವೆಂದು ಘೋಷಿಸಿಕೊಂಡರು.
2. ಆಧ್ಯಾತ್ಮಿಕ ಪ್ರಯಾಣದ ಆರಂಭ:
1940ರ ಅಕ್ಟೋಬರ್ 20ರಂದು ಊರಿನ ಗಡಿ ದಾಟಿ ತೋಟದ ಮರದ ಕೆಳಗೆ ಕುಳಿತು, ಪ್ರಜೆಗಳ ಜೊತೆ ಭಜನೆಗಳನ್ನು ಪ್ರಾರಂಭಿಸಿದರು.
3. ಪಾದಯಾತ್ರೆ ಮತ್ತು ಭಕ್ತರ ಬೆಂಬಲ:
1944ರಲ್ಲಿ ಅವರ ಅನುಯಾಯಿಗಳು ಪುಟ್ಟಪರ್ತಿಯಲ್ಲಿ ದೇವಾಲಯವನ್ನು ಕಟ್ಟಿಸಿದರು.
ಅದೇ ಪ್ರಶಾಂತಿ ನಿಲಯಮ್: 1950ರಲ್ಲಿ ಈ ದೇವಾಲಯವನ್ನು ದೊಡ್ಡದಾಗಿ ವಿಸ್ತರಿಸಿ ಪ್ರಶಾಂತಿ ನಿಲಯವನ್ನಾಗಿ ಬದಲಾಯಿಸಲಾಯಿತು.
4. ಆಶ್ರಮ ಮತ್ತು ಆರೋಗ್ಯ ಸೇವೆ:
1954ರಲ್ಲಿ ಪುಟ್ಟಪರ್ತಿಯಲ್ಲಿ ಬಾಬ್ ಜಿನ್ ಗ್ರೀನ್ ಆಸ್ಪತ್ರೆ ಸ್ಥಾಪಿಸಲಾಯಿತು.
5. ಪತ್ರಿಕೆ ಮತ್ತು ಪ್ರಚಾರ:
1958ರಲ್ಲಿ “ಸನಾತನ ಸಾರಥಿ” ಎಂಬ ಮಾಸಪತ್ರಿಕೆ ಪ್ರಕಟಿಸಲಾಯಿತು.
6. ಹೃದಯಾಘಾತ ಮತ್ತು ಶಿವ ಶಕ್ತಿ ಅವತಾರ:
1963ರಲ್ಲಿ ನಾಲ್ಕು ಬಾರಿ ಹೃದಯಾಘಾತವಾದ ಬಳಿಕ, ತಮ್ಮನ್ನು ಶಿವ ಶಕ್ತಿ ಅವತಾರವೆಂದು ಘೋಷಿಸಿದರು.
7. ವಿದೇಶ ಪ್ರವಾಸಗಳು:
1968ರಲ್ಲಿ ಉಗಾಂಡ ಮತ್ತು ನೈರೋಬಿ ದೇಶಗಳಿಗೆ ಭೇಟಿ ನೀಡಿದರು, ಈ ಮೂಲಕ ಅವರ ಉಪದೇಶಗಳು ವಿಶ್ವಾದ್ಯಂತ ವ್ಯಾಪಿಸಿದವು.
8. ಪುಟ್ಟಪರ್ತಿಯ ಅಭಿವೃದ್ಧಿ:
ಒಮ್ಮೆ ಚಿಕ್ಕ ಗ್ರಾಮವಾಗಿದ್ದ ಪುಟ್ಟಪರ್ತಿ, ಇಂದು ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಂದಾಗಿ ಪ್ರಗತಿಶೀಲ ಕೇಂದ್ರವಾಗಿ ಬೆಳೆದಿದೆ.
ವಿವಾದಗಳು ಮತ್ತು ಆರೋಪಗಳು
ಸಾಯಿಬಾಬಾ ಅವರು ತಮ್ಮನ್ನ ತಾವು ದೇವರೆಂದು ಹೇಳಿಕೊಂಡು ಮೋಸ ಮಾಡುತ್ತಿದ್ದಾರೆ ಎಂದು ಹಲವರು ಆರೋಪಗಳನ್ನು ಮಾಡಿದ್ದರು. ಅವರು ವಿಭೂತಿ ಮತ್ತು ಬಂಗಾರದ ವಸ್ತುಗಳನ್ನು ತಮ್ಮ ಕೈಯಿಂದ ಸೃಷ್ಟಿಸುತ್ತಿದ್ದರು ಎಂಬ ಮಿಷ್ಟಿಕ್ ಕಥೆಗಳನ್ನು ಹಲವು ಶಾಸ್ತ್ರಜ್ಞರು, ವಿಜ್ಞಾನಿಗಳು ಪರಿಶೀಲನೆ ಮಾಡಲು ಪ್ರಯತ್ನಿಸಿದರು.
1976 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಭೌತಿಕ ಶಾಸ್ತ್ರಜ್ಞ ಡಾಕ್ಟರ್ ಎಚ್ ನರಸಿಂಹಯ್ಯ ಅವರು ಸತ್ಯಸಾಯಿ ಬಾಬಾ ಅವರ ಮಹಿಮೆಗಳ ಪರಿಶೋಧನೆಗಾಗಿ ಒಂದು ಸಮಿತಿಯನ್ನು ಸ್ಥಾಪಿಸಿದರು. ಈ ಸಮಿತಿಯು ಬಾಬಾ ಅವರ ಮಹಿಮೆಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಲು ಕೋರಿ, ಪ್ರಯೋಗಾತ್ಮಕವಾಗಿ ಅವನ್ನು ಪ್ರದರ್ಶಿಸಲು ಬಾಬಾರವರನ್ನು ಒತ್ತಾಯಿಸಿತು. ಆದರೆ, ಸತ್ಯಸಾಯಿ ಬಾಬಾ ಆ ವಿನಂತಿಗೆ ಒಪ್ಪಿಕೊಳ್ಳಲಿಲ್ಲ, ಮತ್ತು ಸಮಿತಿಯ ಪ್ರಯತ್ನಗಳು ಸ್ಥಗಿತಗೊಂಡು 1977ರಲ್ಲಿ ಅದನ್ನು ರದ್ದು ಮಾಡಲಾಯಿತು.
ಮಹಿಮೆಗಳ ಮೇಲಿನ ವಿವಾದಗಳು:
1992ರಲ್ಲಿ, ಕೆನಡಾದ ಡಿಎಲ್ ಬೆರ್ಶನ್ ಅವರ ಅಧ್ಯಯನವು ಸತ್ಯಸಾಯಿ ಬಾಬಾ ಅವರಿಗೆ ಯಾವುದೇ ಅತಿಂದ್ರಿಯ ಶಕ್ತಿಗಳು ಇಲ್ಲ ಎಂದು ತೋರಿಸಿತು.
1994ರಲ್ಲಿ ಅಲೆಕ್ಸಾಂಡರ್ ನಾಗಿಲ್ ಈ ವಿಷಯವನ್ನು ತನ್ನ ಪುಸ್ತಕದಲ್ಲಿ ಪ್ರಕಟಿಸಿದರು.
2000ರ ಡಿಸೆಂಬರ್ನಲ್ಲಿ ಇಂಡಿಯಾ ಟುಡೇ ಪತ್ರಿಕೆಯಲ್ಲಿ ಮೇಜಿಷಿಯನ್ ಪಿಸಿ ಸೊರ್ ಕರ್ ಜೂನಿಯರ್ ಬಾಬಾರವರ ಮೇಲೆ ಆರೋಪಗಳನ್ನು ಮಾಡಿದರು. ಅವರು ಬಂಗಾರದ ವಸ್ತುಗಳನ್ನು ಸೃಷ್ಟಿಸುತ್ತಿದ್ದರೆಂದು ಹೇಳುತ್ತಿದ್ದರು, ಮತ್ತು ಗೋಲ್ಡ್ ಕಂಟ್ರೋಲ್ ಕಾನೂನನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿದರು.
ಗೋಲ್ಡ್ ಕಂಟ್ರೋಲ್ ಕಾನೂನು ಮತ್ತು ಕೋರ್ಟ್ ಕೇಸ್:
1986 ರಲ್ಲಿ, ಸತ್ಯಸಾಯಿ ಬಾಬಾ ಮೇಲೆ ಗೋಲ್ಡ್ ಕಂಟ್ರೋಲ್ ಕಾನೂನನ್ನು ಉಲ್ಲಂಘಿಸಿದ ಆರೋಪ ಕೇಳಿಬಂತು.
ಈ ಕೇಸ್ ಅನಂತರ ಕ್ಲೋಸ್ ಮಾಡಲಾಯಿತು.
1971ರಲ್ಲಿ ಸತ್ಯಸಾಯಿ ಬಾಬಾ ವಾಲ್ಟರ್ ಕೋವನ್ ಎಂಬ ವ್ಯಕ್ತಿಯನ್ನು ಜೀವಿತಗೊಳಿಸಿದ ಎನ್ನುವ ಒಂದು ಕಥೆ ಇದೆ.
ಆದರೆ, ಬ್ರಿಟಿಷ್ ಜರ್ನಲಿಸ್ಟ್ ನಿಕ್ ಬ್ರೌನ್ 1998ರಲ್ಲಿ ತನ್ನ The Spiritual Tourist ಎಂಬ ಪುಸ್ತಕದಲ್ಲಿ ಅದು ನಂಬಲು ಯೋಗ್ಯವಲ್ಲ ಎಂದು ಹೇಳಿದ್ದಾರೆ.
2007 ರಲ್ಲಿ, ಬಾಬಾ ಚಂದ್ರನ ಮೇಲೆ ವಿಶ್ವ ರೂಪವನ್ನು ತೋರಿಸುವುದಾಗಿ ಹೇಳಿದ್ದು, ಲಕ್ಷಾಂತರ ಭಕ್ತರು ಪುಟ್ಟಪರ್ತಿಗೆ ಬಂದು ಅದನ್ನು ನೋಡಲು ನಿರೀಕ್ಷಿಸಿದರು. ಆದರೆ, ಆ ಸಮಯದಲ್ಲಿ ಯಾವುದೇ ಘಟನೆಯೂ ನಡೆಯಲಿಲ್ಲ.
ಬಾಬಾ ಈ ಕಾರ್ಯಕ್ರಮದ, ನಂತರ ಅಲ್ಲಿಂದ ಪುಟ್ಟಪರ್ತಿಗೆ ಮರಳಿ ಹೋದರೆಂದು ವರದಿ ಮಾಡಲಾಗಿತ್ತು.
ಈ ಎಲ್ಲಾ ಘಟನೆಗಳು ಮತ್ತು ವಿವಾದಗಳು ಸತ್ಯಸಾಯಿ ಬಾಬಾ ಅವರ ಪವಾಡ ಮತ್ತು ಮಹಿಮೆಗಳ ಬಗ್ಗೆ ವಿಶ್ವದ ಗಮನವನ್ನು ಸೆಳೆದಿತ್ತು, ಆದರೆ ಅವುಗಳನ್ನು ವೈಜ್ಞಾನಿಕವಾಗಿ ಅಥವಾ ಸಾಬೀತು ಮಾಡಿ ತೋರಿಸಲು ಯಾವುದೇ ದೃಷ್ಟಾಂತಗಳು ದೊರಕಲಿಲ್ಲ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಆದರೆ ಹಲವು ಪ್ರಸಿದ್ಧ ವ್ಯಕ್ತಿಗಳು, ಪ್ರಧಾನಿ, ರಾಷ್ಟ್ರಪತಿಗಳು, ಸಿನಿಮಾ ತಾರೆಗಳು, ಮತ್ತು ಕ್ರೀಡಾ ತಾರೆಗಳು ಸಾಯಿಬಾಬಾರವರ ಭಕ್ತರಾಗಿದ್ದರು.
ಅಂತ್ಯ ಮತ್ತು ದಾರ್ಶನಿಕ ಆಶಯ
2011 ಏಪ್ರಿಲ್ 24ರಂದು ಸಾಯಿಬಾಬಾರವರು ತಮ್ಮ 85ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಅವರ ಮರಣದ ನಂತರವೂ ಅವರ ಆಶ್ರಮ ಮತ್ತು ಸೇವಾ ಕೇಂದ್ರಗಳು ಭಕ್ತರು ನಡೆಸಿದ ಸೇವಾ ಕಾರ್ಯಗಳಿಂದ ಮುಂದುವರಿಯುತ್ತಿವೆ.
ನಿಜಕ್ಕೂ ದೇವರ ಅವತಾರವೇ?
ಸಾಯಿಬಾಬಾರವರು ತಮ್ಮನ್ನು ದೇವರ ಅವತಾರವೆಂದು ಘೋಷಿಸಿಕೊಂಡಿದ್ದರು. ಆದರೆ ಅವರು ಉಪನ್ಯಾಸಗಳು, ಹಿತಕಾರ್ಯಗಳು, ಮತ್ತು ಮಾನವೀಯ ಸೇವೆಗಳ ಮೂಲಕ ಅಪಾರ ಭಕ್ತರನ್ನು ಸೆಳೆದಿದ್ದರು. ದೇವರ ಅವತಾರವೇ ಅಥವಾ ಆಧುನಿಕ ಯೋಗಿಯೇ ಎಂಬ ನಿರ್ಧಾರವನ್ನು ಪ್ರತಿ ವ್ಯಕ್ತಿಯ ನಂಬಿಕೆಗೆ ಬಿಟ್ಟದ್ದು.
ಈ ವಿಷಯದ ಮೇಲೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ ತಿಳಿಸಿ.








