ಸಿನಿಮಾದಂತೆಯೇ ಇಲ್ಲಿ ನಟನೆ ನಡೆಯಲ್ಲ : ಸುಮಲತಾಗೆ ಅನ್ನದಾನಿ ಟಾಂಗ್
ಮಂಡ್ಯ : ಜಿಲ್ಲೆಯ ಜೆಡಿಎಸ್ ಶಾಸಕರ ಹಾಗೂ ಸಂಸದೆ ಸುಮಲತಾ ಅವರ ನಡುವಿನ ಜಟಾಪಟಿ ತಾರಕ್ಕೇರಿದ್ದು, ಇದೀಗ ಶಾಸಕ ಅನ್ನದಾನಿ ಸಂಸದೆ ಸುಮಲತಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ ಆರ್ ಎಸ್ ಬಿರುಕು ಎಂದು ಹೇಳಿ ಆತಂಕ ಮೂಡಿಸಿ, ಈಗ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಿದ್ದಾರೆ.
ಯಾವುದೇ ಅಕ್ರಮ ಗಣಿಗಾರಿಕೆಯನ್ನೂ ನಮ್ಮ ಕ್ಷೇತ್ರಗಳಲ್ಲಿ ನಡೆಸುತ್ತಿಲ್ಲ, ಸುಮಲತಾ ಅವರ ಇಂತಹ ನಾಟಕಗಳು ಬಹಳ ದಿನ ನಡೆಯಲ್ಲ.
ಕೆ ಆರ್ ಎಸ್ ಡ್ಯಾಮೇಜ್ ಆಗಿದೆ ಎಂದು ಎಲ್ಲರಲೂ ಆತಂಕ ಸೃಷ್ಟಿ ಮಾಡಿದರು. ಬೇಜವಾಬ್ದಾರಿ ಹೇಳಿಕೆ ನೀಡಿದರು. ಸುಮಲತಾ ಅವರು ಬಿ.ಇ. ಓದಿದ್ದೀರಾ? ಅಥವಾ ಇಂಜಿನಿಯರ್ರಾ ಎಂದು ಪಶ್ನಿಸಿದರು.
ಇನ್ನು ನಮ್ಮ ಕಣ್ಣುಗಳಿಗೆ ಕಾಣದ ಬಿರುಕು ಇವರ ಕಣ್ಣಿಗೆ ಕಂಡಿದೆ.ಬಿರುಕು ಬಿಟ್ಟಿದ್ದರೆ ನಾವು ಹೇಳುತ್ತಿರಲಿಲ್ಲವೇ..? ಕೆ ಆರ್ ಎಸ್ ಬಗ್ಗೆ, ಈ ಭಾಗದ ಜನರ ಬಗ್ಗೆ ನಮಗೆ ಕಾಳಜಿ ಇಲ್ಲವೇ..?
ಸಿನಿಮಾದಲ್ಲಿ ನಟಿಸಿದಂತೆ ರಾಜಕಾರಣ ಸುಲಭ ಎಂದುಕೊಂಡಿದ್ದಾರೆ. ಸಿನಿಮಾದಂತೆಯೇ ಇಲ್ಲಿಯೂ ನಟನೆ ನಡೆಯಲ್ಲ. ಸಿನಿಮಾ ತೋರಿಸಿ ಚುನಾವಣೆ ಗೆದ್ದಿದ್ದು ಅವರು ಹೊರತು ನಾವಲ್ಲ.
ಇಂತಹ ಆಕ್ಟಿಂಗ್ ಇನ್ನ ಬಹಳ ದಿನ ನಡೆಯಲ್ಲ. ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಮೊದಲು ಅದನ್ನು ಬಗೆಹರಿಸಲು ಗಮನ ಕೊಡಿ ಎಂದು ಗುಡುಗಿದರು.