ಮಿಸ್ಡ್ ಕಾಲ್ ನಿಂದ ಪ್ರೇಮಾಂಕುರ : ಯುವತಿಗೆ ಸಿಕ್ಕ `ವಿಶೇಷಚೇತನ’
ಸುಪಾಲ್ : ಮಿಸ್ಡ್ ಕಾಲ್ ನಿಂದ ಪ್ರೇಮಾಂಕುರವಾಗಿ ಯುವಕನಿಗಾಗಿ ಯುವತಿ ರಾಂಚಿಯಿಂದ ಬಿಹಾರ್ ಗೆ ಬಂದು ಮದುವೆ ವಿಶೇಷ ಘಟನೆ ಬಿಹಾರದಲ್ಲಿ ನಡೆದಿದೆ.
ಜಾಖರ್ಂಡ್ ನ ರಾಂಚಿಯಲ್ಲಿ ವಾಸವಾಗಿದ್ದ ಯುವತಿ ಗೌರಿ ಹಾಗೂ ಬಿಹಾರದ ಸುಪಾಲ್ ನಿವಾಸಿ ವಿಶೇಷ ಚೇತನ ಯುವಕ ಮುಖೇಶ್ ಎಂಬೋರ ಮಧ್ಯೆ ಮಿಸ್ ಕಾಲ್ ಮೂಲಕ ಪ್ರೇಮಾಂಕುರವಾಗಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಒಂದು ದಿನ ರಾಂಚಿಯ ಗೌರಿ ತಪ್ಪಾಗಿ ಫೋನ್ ನಂಬರ್ ಗೆ ಫೋನ್ ಮಾಡಿದ್ದು, ಅದು ಬಿಹಾರದ ಸುಪಾಲ್ ನಲ್ಲಿ ವಾಸವಾಗಿದ್ದ ಮುಖೇಶ್ ಅವರದ್ದಾಗಿತ್ತು. ಇದಾದ ಬಳಿಕ ಇಬ್ಬರ ನಡುವೆ ಸಂಭಾಷಣೆ ಶುರುವಾಗಿ ಪರಸ್ಪರ ಸ್ನೇಹಿತರಾಗಿದ್ದಾರೆ. ಬಳಿಕ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಲು ಶುರು ಮಾಡಿದ್ದಾರೆ.
ಈ ವೇಳೆ ಗೌರಿ ಮದುವೆ ಪ್ರಸ್ತಾಪ ಮಾಡಿದ್ದು, ಇದಕ್ಕೆ ಮುಖೇಶ್ ತಾನೋರ್ವ ದಿವ್ಯಾಂಗ ವ್ಯಕ್ತಿಯಾಗಿದ್ದು ನಿನಗೆ ಒಳ್ಳೆಯ ಹುಡುಗ ಸಿಗಲಿ ಎಂದು ಮದುವೆಯನ್ನು ನಿರಾಕರಿಸಿದ್ದನಂತೆ. ಆದರೆ ಯುವತಿ, ಯುವಕನ ಮಾತು ಕೇಳದೇ ಸಹೋದರನನ್ನು ಕರೆದುಕೊಂಡು ರಾಂಚಿಯಿಂದ ಬಿಹಾರದ ಸುಪಾಲ್ ಗೆ ಬಂದೇ ಬಿಟ್ಟಿದ್ದಾಳೆ. ಇಲ್ಲಿಗೆ ಬಂದ ಮೇಲೆ ಕೋರ್ಟ್ ನಲ್ಲಿ ಇಬ್ಬರು ಮದುವೆ ಮಾಡಿಕೊಂಡಿದ್ದಾರೆ.