ರಾಮನಗರ: ಕೇವಲ 500 ರೂಪಾಯಿಗೆ ಯುವಕನೊಬ್ಬನ ಕೊಲೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಕನಕಪುರ-ಚನ್ನಪಟ್ಟಣ ಮಾರ್ಗ ಮಧ್ಯೆ ಸಾತನೂರು ಕ್ರಾಸ್ ಹತ್ತಿರ ಯುವಕನೊಬ್ಬನ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಲಾಗಿತ್ತು. ಪೊಲೀಸರು ಮೇಲ್ನೊಟಕ್ಕೆ ಇದು ದ್ವೇಷದ ಕೊಲೆ ಎಂದು ಶಂಕಿಸಿ, ತನಿಖೆ ಕೈಗೊಂಡಿದ್ದರು. ಸದ್ಯ ಇದರ ಅಸಲಿ ಕಾರಣ ಗೊತ್ತಾಗಿದ್ದು, ಕೊಲೆಗಾರನ ಮನಸ್ಥಿತಿ ಕಂಡು ಪೊಲೀಸರೇ ದಂಗಾಗಿದ್ದಾರೆ.
ಬಿಹಾರ ಮೂಲದ ಮೂವತ್ತು ವರ್ಷದ ಸಂಜಿತ್ ಕುಮಾರ್ ಠಾಕೂರ್ ( 30) ಹತ್ಯೆಯಾಗಿರುವ ಯುವಕ ಇಲ್ಲಿ ಆರೋಪಿಯು ಕೇವಲ 500 ರೂಪಾಯಿಗೆ ಹತ್ಯೆ ಮಾಡಿದ್ದಾನೆ. ಸಂಜಿತ್ ಕೆಲವು ದಿನಗಳಿಂದ ಕೆಲಸ ಅರಸಿ ರಾಮನಗರಕ್ಕೆ ಬಂದಿದ್ದ. ಆತನ ಗೆಳೆಯರು ಚನ್ನಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದರಿಂದ ಊತನೂ ಮಾಡುತ್ತಿದ್ದ. ಆದರೆ, ಮನೆ ಬಾಡಿಗೆ ಪಡೆಯುವಷ್ಟು ಹಣ ಇಲ್ಲದ ಕಾರಣ ಆತ ಫುಟ್ ಪಾತ್ ಮೇಲೆ ಮಲಗುತ್ತಿದ್ದ. ಕಳೆದ ತಿಂಗಳು 6ನೇ ತಾರೀಖು ರಾತ್ರಿ ಎಂದಿನಂತೆ ಬಾರ್ ಗೆ ಹೋಗಿ ಮದ್ಯ ಸೇವಿಸಿ ಮರುವ ಸಂದರ್ಭದಲ್ಲಿ ಅಲ್ಲಿ ಸ್ವಾಮಿ ಎಂಬಾತ ಮಾತನಾಡಿಸಿದ್ದಾನೆ.
ಆಗ ಇಬ್ಬರ ಮಧ್ಯೆ ಸ್ನೇಹವಾಗಿದೆ. ಸಂಜಿತ್ ಆಗ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಮಲಗಲು ಜಾಗವಿಲ್ಲ. ನಿನ್ನ ಮನೆಯಲ್ಲಿ ಏನಾದರೂ ಮಲಗಬಹುದಾ ಎಂದು ಕೇಳಿದ್ದಾನೆ. ಆಗ ಸ್ವಾಮಿ, ಮದ್ಯ ಕುಡಿಸಿದರೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಆನಂತರ ಸಾತನೂರು ಕ್ರಾಸ್ ಬಳಿ ಕರೆದುಕೊಂಡು ಹೋಗಿ, ಮಲಗಲು ಹೇಳಿದ್ದಾನೆ. ಆಗ ಸಂಜಿತ್ ಮಲಗುತ್ತಿದ್ದಂತೆ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆತನ ಜೇಬಿನಲ್ಲಿದ್ದ 5 ರೂಪಾಯಿ ತೆಗೆದುಕೊಂಡು ಪರಾರಿಯಾಗಿದ್ದಾನೆ. ಬಾರ್ ಶಾಪ್ ನ ಸಿಸಿಟಿವಿಯಲ್ಲಿ ಆರೋಪಿ ಸ್ವಾಮಿ ಸಂಜಿತ್ ನನ್ನು ಕರೆದುಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.