ADVERTISEMENT
Tuesday, September 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಹಾಕಿರುವ ಬೇಡಿಯನ್ನು ಒಮ್ಮೆ ಸಡಿಲಿಸಿ ನೋಡಿ ಇಡೀ ಕರ್ನಾಟಕವನ್ನೇ ಸ್ವಚ್ಛ ಮಾಡ್ತೀವಿ: ಭ್ರಷ್ಟರಿಗೆ ಉಪ ಲೋಕಾಯುಕ್ತ ನ್ಯಾ ವೀರಪ್ಪ ಖಡಕ್ ವಾರ್ನಿಂಗ್

Shwetha by Shwetha
September 13, 2026
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ನಾಗಮಂಗಲ: ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಮತ್ತು ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರು ಸಿಡಿದೆದ್ದಿದ್ದಾರೆ. ನಾಗಮಂಗಲದಲ್ಲಿ ನಡೆದ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಶಾಹಿ ಮತ್ತು ರಾಜಕೀಯ ವ್ಯವಸ್ಥೆಗೆ ನೇರ ಎಚ್ಚರಿಕೆ ನೀಡಿದ್ದಾರೆ.

ನಮಗೆ ಹಾಕಿರುವ ಬೇಡಿಯನ್ನು ಒಮ್ಮೆ ಬಿಚ್ಚಿ ನೋಡಿ, ಈ ಇಡೀ ಕರ್ನಾಟಕವನ್ನೇ ಭ್ರಷ್ಟಾಚಾರ ಮುಕ್ತಗೊಳಿಸಿ ಸ್ವಚ್ಛ ಮಾಡುತ್ತೇವೆ ಎಂದು ನ್ಯಾ ವೀರಪ್ಪ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಲೋಕಾಯುಕ್ತ ಸಂಸ್ಥೆಯನ್ನು ಬಲಹೀನ ಮಾಡಲು ವ್ಯವಸ್ಥಿತ ಸಂಚುಗಳು ನಡೆಯುತ್ತಿವೆ. ಆದರೆ ಅಕ್ರಮಗಳನ್ನು ಕಂಡಾಗ ನನ್ನ ರಕ್ತ ಕುದಿಯುತ್ತದೆ, ಇಂತಹ ಅನ್ಯಾಯಗಳನ್ನು ನೋಡಿ ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Related posts

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

September 13, 2026
ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

September 13, 2026

ರಾಜ್ಯದ ವಿವಿಧ ಇಲಾಖೆಗಳ ಪರಿಸ್ಥಿತಿಯನ್ನು ಕಂಡು ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಇಂದು ಒಂದೊಂದು ಸರ್ಕಾರಿ ಇಲಾಖೆಗಳು ಜಿದ್ದಿಗೆ ಬಿದ್ದಂತೆ ಭ್ರಷ್ಟಾಚಾರದಲ್ಲಿ ಪೈಪೋಟಿ ನಡೆಸುತ್ತಿವೆ. ಉನ್ನತ ಮಟ್ಟದಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದ್ದು, ಇದಕ್ಕೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ ರಾಜ್ಯವನ್ನು ಭ್ರಷ್ಟ ಮುಕ್ತಗೊಳಿಸುವುದು ಕಷ್ಟದ ಕೆಲಸವಲ್ಲ ಎಂದು ಅಭಿಪ್ರಾಯಪಟ್ಟರು.

ಬಡವರು ಮತ್ತು ರೈತರ ರಕ್ತ ಹೀರುತ್ತಿರುವ ಭ್ರಷ್ಟ ಅಧಿಕಾರಿಗಳ ಚಳಿ ಬಿಡಿಸಲು ತಾವು ನೇರವಾಗಿ ತಾಲೂಕು ಮಟ್ಟಕ್ಕೆ ಇಳಿದಿರುವುದಾಗಿ ಅವರು ತಿಳಿಸಿದರು. ಅಧಿಕಾರಿಗಳಿಗೆ ಕಾನೂನಿನ ಅರಿವಿದ್ದರೂ ಸಹ ಏನೂ ತಿಳಿಯದವರಂತೆ ನಟಿಸುತ್ತಾ ಸಾರ್ವಜನಿಕರನ್ನು ಸತಾಯಿಸುತ್ತಿದ್ದಾರೆ. ರೈತರಿಂದ ಹಣ ಕಿತ್ತು ಬದುಕುವ ಇಂತಹ ಅಧಿಕಾರಿಗಳಿಗೆ ಚಾಟಿ ಬೀಸಿ ಕೆಲಸ ಮಾಡಿಸುವ ಕೆಲಸವನ್ನು ಲೋಕಾಯುಕ್ತ ಸಂಸ್ಥೆ ನಿರಂತರವಾಗಿ ಮಾಡಲಿದೆ ಎಂದು ಅವರು ಎಚ್ಚರಿಸಿದರು.

ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಸಾಮಾನ್ಯ ಜನರು ಇನ್ನೂ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಎಂಬುದು ವಿಷಾದನೀಯ ಸಂಗತಿ. ಪ್ರಾಮಾಣಿಕ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತದೆ. ಆದರೆ ಭ್ರಷ್ಟರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬ ಸಂದೇಶವನ್ನು ನ್ಯಾ ವೀರಪ್ಪ ಅವರು ರವಾನಿಸಿದ್ದಾರೆ. ನ್ಯಾಯಮೂರ್ತಿಗಳ ಈ ಸ್ಫೋಟಕ ಹೇಳಿಕೆಗಳು ಈಗ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ShareTweetSendShare
Join us on:

Related Posts

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

2,000 ಕೋಟಿ ವ್ಯವಹಾರ ಮಾಡೋರ ಹತ್ರ 2 ಕೋಟಿ ಇರೋದು ದೊಡ್ಡ ವಿಷಯವೇ? ಸತೀಶ್ ಜಾರಕಿಹೊಳಿ ಪರ ರಾಜಣ್ಣ ಬ್ಯಾಟಿಂಗ್

by Shwetha
September 13, 2026
0

ತುಮಕೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ಸರಣಿ ದಾಳಿಯ ವಿರುದ್ಧ ಸಹಕಾರ...

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

ಚಾರಿತ್ರ್ಯ ವಧೆ ಮಾಡುವುದೇ ಇಡಿ ಕೆಲಸವೇ? ಇಡಿ ವಿರುದ್ಧ ಅಬ್ಬರಿಸಿದ ವಿಜಯ್ ಮಲ್ಯ: ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿ ಲಂಡನ್‌ನಿಂದಲೇ ಗುಡುಗಿದ ಉದ್ಯಮಿ

by Shwetha
September 13, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯ ಪ್ರಕರಣ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ನೆಲೆಸಿರುವ...

ಸ್ವರ್ಗದಲ್ಲಿ 72 ಕನ್ಯೆಯರು ಸಿಗಬಹುದು, ವಿಧಿ-ವಿಧಾನದಂತೆ ಮುಸ್ಲಿಮರಾಗಿ ಬಸವರಾಜ ರಾಯರೆಡ್ಡಿ ಇಸ್ಲಾಂ ಶ್ರೇಷ್ಠ ಹೇಳಿಕೆಗೆ ಪ್ರತಾಪ್‌ ಸಿಂಹ ತಿರುಗೇಟು!

ಇನ್ಸ್‌ಪೆಕ್ಟರ್‌ ನಡೆ ರೋಡ್‌ಸೈಡ್‌ ತರ್ಲೆ ಇದ್ದಂತಿದೆ, ಪೊಲೀಸರಿಗೆ ವೀರಾವೇಷ ಶೋಭಿಸುವುದಿಲ್ಲ: ಗಣೇಶ ಸಮಿತಿಗಳಿಗೆ ಅವಾಜ್ ಹಾಕಿದ ಇನ್ಸ್‌ಪೆಕ್ಟರ್ ವಿರುದ್ಧ ಪ್ರತಾಪ ಸಿಂಹ ಆಕ್ರೋಶ

by Shwetha
September 13, 2026
0

ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯ ವಿಚಾರವಾಗಿ ಮಸೀದಿ ಮುಂದೆ ಹೋಗದಂತೆ ಎಚ್ಚರಿಕೆ ನೀಡಿದ್ದ ಇನ್ಸ್‌ಪೆಕ್ಟರ್ ಧನಂಜಯ್ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ ಸಿಂಹ ತೀವ್ರ...

ಬ್ರಿಟಿಷರ ಸೇವೆ ಮಾಡಿದವರಿಂದ ನಾವು ದೇಶಭಕ್ತಿ ಕಲಿಯಬೇಕಿಲ್ಲ,ನೇತಾಜಿ ಸೈನ್ಯ ಕಟ್ಟುತ್ತಿದ್ದರೆ ಇವರು ಬ್ರಿಟಿಷರಿಗೆ ಸಾಥ್ ನೀಡುತ್ತಿದ್ದರು:ಇತಿಹಾಸ ಕೆದಕಿ ಬಿಜೆಪಿಯನ್ನು ಬೆತ್ತಲೆ ಮಾಡಿದ ಖರ್ಗೆ!

ಬ್ರಿಟಿಷರ ಸೇವೆ ಮಾಡಿದವರಿಂದ ನಾವು ದೇಶಭಕ್ತಿ ಕಲಿಯಬೇಕಿಲ್ಲ,ನೇತಾಜಿ ಸೈನ್ಯ ಕಟ್ಟುತ್ತಿದ್ದರೆ ಇವರು ಬ್ರಿಟಿಷರಿಗೆ ಸಾಥ್ ನೀಡುತ್ತಿದ್ದರು:ಇತಿಹಾಸ ಕೆದಕಿ ಬಿಜೆಪಿಯನ್ನು ಬೆತ್ತಲೆ ಮಾಡಿದ ಖರ್ಗೆ!

by Shwetha
September 13, 2026
0

ಬೆಂಗಳೂರು: ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದ ಈಗ ತಾರಕಕ್ಕೇರಿದೆ. ವಂದೇ ಮಾತರಂ ಗೀತೆಯ ಗಾಯನ ಮತ್ತು ದೇಶಭಕ್ತಿಯ ನೈಜ ಇತಿಹಾಸದ...

ಹಸಿರು ಪರದೆ ಹಿಂದೆ ಬಡತನ ಬಚ್ಚಿಟ್ಟ ಕೇಂದ್ರ, ದಿಲ್ಲಿ ಶೃಂಗಸಭೆ ವೈಭವದ ಹಿಂದೆ ಕೊಳೆಗೇರಿಗಳ ಸಂಕಷ್ಟ: ವಾಸ್ತವ ಮರೆಮಾಚಿದ್ರೆ ಸತ್ಯ ಬದಲಾಗಲ್ಲ, ದಿಲ್ಲಿ ಕೊಳೆಗೇರಿಗಳಿಗೆ ಪರದೆ ಹಾಕಿದ್ದಕ್ಕೆ ಮೋದಿ ಸರ್ಕಾರದ ವಿರುದ್ಧ ಎಎಪಿ ಆಕ್ರೋಶ

ಹಸಿರು ಪರದೆ ಹಿಂದೆ ಬಡತನ ಬಚ್ಚಿಟ್ಟ ಕೇಂದ್ರ, ದಿಲ್ಲಿ ಶೃಂಗಸಭೆ ವೈಭವದ ಹಿಂದೆ ಕೊಳೆಗೇರಿಗಳ ಸಂಕಷ್ಟ: ವಾಸ್ತವ ಮರೆಮಾಚಿದ್ರೆ ಸತ್ಯ ಬದಲಾಗಲ್ಲ, ದಿಲ್ಲಿ ಕೊಳೆಗೇರಿಗಳಿಗೆ ಪರದೆ ಹಾಕಿದ್ದಕ್ಕೆ ಮೋದಿ ಸರ್ಕಾರದ ವಿರುದ್ಧ ಎಎಪಿ ಆಕ್ರೋಶ

by Shwetha
September 13, 2026
0

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ (BRICS) ಶೃಂಗಸಭೆಯ ಸಿದ್ಧತೆಗಳ ನಡುವೆಯೇ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ಗಂಭೀರ ಆರೋಪ ಮಾಡಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram