ಚಿಕ್ಕಮಂಗಳೂರು :ಕೆಲಸಕ್ಕೆ ಹೋಗುವಾಗ ಬರುವಾಗ ಕಾರ್ಮಿಕರು ಸಾವನ್ನಪ್ಪಿದರೆ, ಸಿಗಲಿದೆ ಪರಿಹಾರ ,ಹೈ ಕೋರ್ಟ ಆದೇಶ
Justice h p Sandesh: ಕೆಲಸಕ್ಕೆ ಹೋಗುವಾಗ ಬರುವಾಗ ಕಾರ್ಮಿಕರು ಸಾವನ್ನಪ್ಪಿದರೆ, ಅದನ್ನ ಕೆಲಸದ ಸಮಯದಲ್ಲಿ ಘಟಿಸಿದ ಸಾವು ಎಂದೆ ಪರಿಗಣಿಸಬೇಕು ಹಾಗೂ ಆತನ ವಾರಸುದಾರರಿಗೆ ಅವಘಢದ ಪರಿಹಾರ ಹಣ ನೀಡಬೇಕು ಎಂದು ಮಹತ್ವದ ತೀರ್ಪುನೀಡಿದ ಹೈಕೋರ್ಟ.
ಕಾರ್ಮಿಕನೋರ್ವ ಕಾಫಿ ತೋಟಕ್ಕೆ ಕೆಲಸಕ್ಕೆ ತೇರಳುವ ವೇಳೆ ಮೃತಪಟ್ಟ ಪ್ರರ್ಕಣದ ಹಿನ್ನಲೆ , ಆತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಚಿಕ್ಕಮಂಗಳೂರಿನ ಕಾರ್ಮಿಕ ಆಯುಕ್ತರು ಆದೇಶಹೋರಡಿಸಿದ್ದಾರೆ.
ಈ ಆದೇಶವನ್ನು ಪ್ರಶ್ನಿದ ಕಾಫಿ ಎಸ್ಟೇಟ್ ಮಾಲಿಕ ಎನ್ ಎಲ್ ಪುಣ್ಯಮೂರ್ತಿ ಮತ್ತು ನ್ಯಶನಲ್ ಇನ್ಸುರೆನ್ಸ್ ಕಂಪನಿ ಹೈಕೊರ್ಟಗೆ ಮೇಲ್ ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಚ್.ಪಿ. ಸಂದೇಶ ಅವರ ಪೀಠ ಈ ಅರ್ಜೀಯ ವಿಚಾರಣೆ ನಡೆಸಿ ,ಕೆಲಸಕ್ಕೆ ಹೋಗುವಾಗ ಕಾರ್ಮಿಕನ ಸಾವು ಸಂಭವಿಸಿದ್ದರಿಂದ ಮೃತ ವ್ಯಕ್ತಿಯ ವಾರಸುದಾರರು ಪರಿಹಾರ ಹಣಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶ ಹೋರಡಿಸಿದೆ.
ಪ್ರಕರ್ಣದ ವಿವರ:
ಚಿಕ್ಕಮಂಗಳೂರಿನ ಮೂಡಗೆರೆಯಲ್ಲಿ ಜುಲೈ ೧೨ ,೨೦೦೬ ರಂದು ಸುಭಾಸ ನಗರದ ನಿವಾಸಿ ಸ್ವಾಮಿಗೌಡ , ಕೊಳ್ಳಿಬೈಲು ಗ್ರಾಮದ ಪುಣ್ಯಮೂರ್ತಿ ಅವರ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗುವಾಗ ಕಾಲುಜಾರಿ ಬಿದ್ದು ಸಾವನ್ನಪ್ಪಿದರು.
ಈ ಪ್ರಕರ್ಣ ಹಿನ್ನಲೇ ಮೃತ ವ್ಯಕ್ತಿಯ ಕುಟುಂಬ ಪರಿಹಾರಕ್ಕಾಗಿ ಕಾರ್ಮಿಕ ಆಯುಕ್ತರಿಗೆ ಅರ್ಜಿಸಲ್ಲಿಸಿತ್ತು. ಎದರ ಬೆನ್ನಲ್ಲಿ ೨೦೧೦ ರಲ್ಲಿ ಅಕ್ಟೋಬರ್ ೨೮ ರಂದು ಸ್ವಾಮಿಗೌಡ ಕುಟುಬಂಕ್ಕೆ ಕಾಫಿ ತೋಟದ ಮಾಲಿಕ ೭೫,೦೩೨ ಮೋತ್ತ ಹಾಗೂವಿಮಾಸಂಸ್ಥೆ ೧,೦೧,೧೯೬ ಮೋತ್ತವನ್ನು ಸೇರಿಸಿ
ಒಟ್ಟು೧,೭೬,೨೨೮ ರೂ ಮೊತ್ತದ ಪರಿಹಾರವನ್ನು ಶೇ. ೭% ಬಡ್ಡಿಯೊಂದಿಗೆ ನೀಡುವಂತೆ ಆಯುಕ್ತರು ಆಧೇಶ ಹೋರಡಿಸಿದ್ದರು. ಇದಕ್ಕೆ ಸಮ್ಮತಿಸದ ತೋಟದ ಮಾಲಿಕ ಮತ್ತು ವಿಮಾ ಸಂಸ್ಥೆ ಹೈಕೋರ್ಟ್ ಮೋರೆಹೊಗಿದ್ದರು.
ವಿಮಾ ಸಂಸ್ಥೆಯವಾದ : ಕೂಲಿ ಕಾರ್ಮಿಕನ ಸಾವು ಅಪಘಾತದಿಂದ ಆಗಿರುವಂತದಲ್ಲ,ಮೃತ ಹೊಂದಿದ್ದ ವೇಳೆ ಆತ ಕೆಲಸ ಮಾಡುತ್ತಿರಲಿಲ್ಲ .ಘಟನೆಯ ದಿನ ಅವನು ಕೆಲಸದಲ್ಲಿ ಹಾಜರಾಗ್ಗಿದ್ದಿಲ್ಲ,ಮಳೆಯಿಂದ ಒದ್ದೆಯಾದ ನೆಲದ ಮೇಲೆ ಕಾಲು ಇಟ್ಟು ಜಾರಿಬಿದ್ದು ಹೃದಯಾಘಾತ ಸಂಭವಿಸಿ ಸತ್ತಿದ್ದಾನೆ. ಹಾಗಾಗಿ ಈ ಸಾವನ್ನು ಕೆಲಸದ ಅವಧಿಯಲ್ಲಿ ಸಂಭವಿಸಿದ ಸಾವು ಎಂದು ಪರಿಗಣಿಸಲು ಸಾಧ್ಯವಿಲ್ಲ .ಮೃತನ ಕುಟುಂಬಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ವಾದಮಾಡಿದ್ದರು.
ಎಸ್ಟೇಟ್ ಮಾಲಿಕನವಾದ :
ಎಸ್ಟೇಟ್ ನ ಕೆಲಸದ ಅವಧಿ ಬೆಳಿಗ್ಗೆ ೮ ರಿಂದ ಸಂಜೆ ೪.೩೦ ಆದರೆ ಕಾರ್ಮಿಕ ಬೆಳಗ್ಗೆ ೭ಕ್ಕೆ ಮೃತಪಟ್ಟಿರುವುದರಿಂದ ಕೆಲಸದ ವೇಳೆ ಸಾವು ಸಂಭವಿಸಿಲ್ಲ.ಹಾಗೂ ತೋಟದಲ್ಲಿ ಕೆಲಸ ಮಡುವ ಎಲ್ಲ ಕಾರ್ಮಿಕರಿಗೂ ನ್ಯಾಶನಲ್ ಇನ್ಸುರೆಂನ್ಸ ಕಂಪನಿಯಲ್ಲಿ ವಿಮೆ ಮಾಡಿಸಲಾಗಿದ್ದು.ಅತ ಮೃತ ಹೊಂದಿದಾಗ ವಿಮೆ ಚಾಲ್ತಯಲ್ಲಿತ್ತು ಹಾಗಾಗಿ ಪರಿಹಾರ ನೀಡುವ ಹೋಣೆ ನನ್ನದಲ್ಲ ಎಂದು ತೋಟದ ಮಾಲಿಕ ವಾದಿಸಿದ್ದರು.
ಇದಕ್ಕೆ ಪ್ರತ್ಯತ್ತರವಾಗಿ ಸುಪ್ರೀಂಕೊರ್ಟ್ ಕೆಲಸಕ್ಕೆ ಬರುವಾಗ ಮತ್ತು ಕೆಲಸದಿಂದ ಹಿಂತಿರುಗುವ ಸಮಯವೂ ಕೆಲಸದ ಅವಧೀಯೆ ಎಂದು ತೀರ್ಪು ನೀಡಿತು.
ಸ್ವಾಮಿಗೌಡ ಕೆಲಸದ ವೇಳೆ ಸಾವನ್ನಪ್ಪಿಲ್ಲ ಎಂದು ವಾದಿಸುತ್ತಿರುವ ವಿಮಾ ಸಂಸ್ಥೆ ಮತ್ತು ತೋಟದ ಮಾಲೀಕನಿಗೆ, ವಾಸ್ತವದಲ್ಲಿ ಕೂಲಿಕಾರ್ಮಿಕ ಸ್ವಾಮಿಗೌಡ ಕೆಲಸಕ್ಕೆ ಎಂದು ಮನೆಯಿಂದ ತೆರಳಿದ್ದ ಹೀಗಾಗಿ ಆತನ ಸಾವು ಕೆಲಸದ ಸಮಯದಲ್ಲಿ ಸಂಭವಿಸಿಲ್ಲ ಎಂಬ ಇಬ್ಬರ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ , ಸರ್ಕಾರ ವರ್ಸಸ್ ಮೊಬೀಷ್ ಮಿಯಾ ನಡುವಿನ ಪ್ರಕರ್ಣದಲ್ಲಿ ಕೆಲಸಕ್ಕೆ ಬರುವಾಗ ಮತ್ತು ಕೆಲಸ ಮುಗಿಸಿ ಹೋಗುವ ಸಮಯವು ಕೆಲಸದ ಸಮಯವಾಗಿರುತ್ತದೆ ಎಂದು ಹೇಳಿದೆ.
ಈ ಪ್ರಕರ್ಣದಲ್ಲಿ ಬೆಳ್ಳಿಗೆ ೮ ಗಂಟೆಯಿಂದ ಕೆಲಸದ ಸಮಯ ಆರಂಭವಾದರೂ ಕೆಲಸಕ್ಕೆ ಎಂದೇ ಮನೆಯಿಂದ ಹೋರಟು ಬರುವ ವೇಳೆ ೭.೩೦ ಕ್ಕೆ ಸಾವನ್ನಪ್ಪಿದಾನೆ .ಅಂದು ವೇಳೆ ಆತ ಮನೆಯಲ್ಲಿ ಇದ್ದಾಗ ಸಾವನ್ನಪ್ಪಿದ್ದರೆ.ಮಾಲಿಕ ಹಾಗೂ ವಿಮಾ ಸಂಸ್ಥೆಯ ವಾದವನ್ನು ಒಪ್ಪಬಹುದಿತ್ತು ಆದರೆ ಕೆಲಸಕ್ಕೆ ಎಂದು ಹೋಗುವಾಗ ಮಾಲಿಕನಿಗರ ಸಂಭಂದ ಪಟ್ಟ ಜಾಗದಲ್ಲಿ ಕಾಲುಜಾರಿ ಬಿದ್ದು ಸತ್ತಿರುವುದರಿಂದ ಮಾಲಿಕ ಮಾಗೂ ವಿಮಾ ಕಂಪನಿ ಪರಿಹಾರ ಪಾವತಿಸಬೇಕು . ಈ ಪ್ರಕಾರ ಕಾರ್ಮಿಕ ಆಯುಕ್ತರು ಹೊರಡಿಸಿದ ಆದೇಶ ನ್ಯಾಯಸಮ್ಮತವಾಗಿದ್ದು , ಮೃತನ ಕುಟುಂಬಕ್ಕೆ ವಿಮಾ ಸಂಸ್ಥೆ ಮತ್ತು ಎಸ್ಟೇಟ ಮಾಲೀಕ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ ಆದೇಶಿಸಿದೆ.