K.S.Eshwarappa | ಮೋದಿ ಬಗ್ಗೆ ಏಕವಚನದಲ್ಲಿ ಮಾತಾಡಿದ್ರೆ ಬಾಯಿಗೆ ಹುಳ ಬೀಳುತ್ತೆ
ಹುಬ್ಬಳ್ಳಿ : ನರೇಂದ್ರ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದರೇ ಬಾಯಿಗೆ ಹುಳ ಬೀಳುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ನರೇಂದ್ರ ಮೋದಿ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದರ ಬಗ್ಗೆ ಮಾತನಾಡಿದ ಈಶ್ವರಪ್ಪ, ಅವನು ತಾನು ದೊಡ್ಡ ಮನುಷ್ಯ ಅಂದುಕೊಂಡಿದ್ದಾನೆ.
ಅವನ್ಯಾವೂರ ದಾಸ, ನರೇಂದ್ರ ಮೋದಿಯಂತ ವಿಶ್ವ ನಾಯಕನ ಬಗ್ಗೆ ಮಾತಾಡ್ತಾರೆ. ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ರೆ ಬಾಯಿಗೆ ಹುಳ ಬೀಳುತ್ತದೆ ಎಂದು ಕಿಡಿಕಾರಿದರು.

ಇದೇ ವೇಳೆ ಬಿಜೆಪಿ, ಆರ್ ಎಸ್ ಎಸ್ ನವರು ಬ್ರಿಷಟರ ಜೊತೆ ಶಾಮೀಲಾಗಿದ್ದರು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿರಲಿಲ್ಲ ಎಂಬ ರಾಮಲಿಂಗಾರೆಡ್ಡಿ ಹೇಳಿಕೆಗೆ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
17 ಜನ ಬಿಜೆಪಿ ಸೇರಿದರಲ್ಲ ಅವರ ಜೊತೆ ರಾಮಲಿಂಗಾರೆಡ್ಡಿನೂ ಬಂದಿದ್ದರು, ಆಗ ಅವರಿಗೆ ಗೊತ್ತಿರಲಿಲ್ವಾ ?
ಆರ್ ಎಸ್ ಎಸ್, ಬಿಜೆಪಿ ಏನು ಅಂತಾ ಅವರಿಗೆ ಆಗಲೂ ಗೊತ್ತು, ಈಗಲೂ ಗೊತ್ತು.
ಅವರ ಮನಸ್ಸಿನಲ್ಲಿ ಇವು ರಾಷ್ಟ್ರಭಕ್ತಿ ಸಂಘಟನೆಗಳು ಅಂತಾ ಗೊತ್ತಿದೆ ಎಂದು ಹೇಳಿದರು.