Kaikala Satyanarayana: ಟಾಲಿವುಡ್ ಹಿರಿಯ ನಟ ಕೈಕಲಾ ಸತ್ಯನಾರಾಯಣ ವಿಧಿವಶ…
ಟಾಲಿವುಡ್ ಹಿರಿಯ ನಟ ಕೈಕಲಾ ಸತ್ಯನಾರಾಯಣ (87) ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ 4 ಗಂಟೆಗೆ ಫಿಲಂನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ತೆಲುಗು ಚಿತ್ರರಂಗವನ್ನ ಶ್ರೀಮಂತಗೊಳಿಸಿದ ವಿಶಿಷ್ಟ ನಟರಲ್ಲಿ ಕೈಕಲ ಸತ್ಯನಾರಾಯಣ ಕೂಡ ಒಬ್ಬರು. ಅಜ್ಜ, ತಂದೆ, ಚಿಕ್ಕಪ್ಪ, ಅಜ್ಜ, ಮಗ ಹೀರೋ ವಿಲನ್ ಕಾಮಿಡಿ ಸೇರಿದಂತೆ ಇವರು ನಟಿಸದಾ ಪ್ರಕಾರಗಳೇ ಇಲ್ಲ. ಕೈಕಳ ಸತ್ಯನಾರಾಯಣ ಅವರನ್ನ ನಟಸಾರ್ವಭೌಮ ಎಂದು ಕರೆಯಲಾಗುತ್ತದೆ.
ಎನ್ ಟಿಆರ್, ಅಯ್ನಾರ್, ಕೃಷ್ಣ, ಶೋಭನಬಾಬು, ಕೃಷ್ಣಂರಾಜು, ಚಿರಂಜೀವಿ, ಬಾಲಕೃಷ್ಣ, ಮೋಹನಬಾಬು ಸೇರಿದಂತೆ ಆಗಿನ ಕಾಲದ ದೊಡ್ಡ ಹೀರೋಗಳ ಎದುರಿಗೆ ವಿಲನ್ ಪಾತ್ರ ಮಾಡಿದ ಖ್ಯಾತಿ ಇವರಿಗೆದೆ.
ಇಂದು ಟಾಲಿವುಡ್ ಅದ್ಭತ ಪ್ರತಿಭೆಯನ್ನ ಕಳೆದುಕೊಂಡಿದೆ. ಕೈಕಲ ಸತ್ಯನಾರಾಯಣ ಅವರು ಜುಲೈ 25, 1935 ರಂದು ಕೃಷ್ಣಾ ಜಿಲ್ಲೆಯ ಗುಡ್ವಲ್ಲೇರು ಮಂಡಲದ ಕೌತಾವರಂನಲ್ಲಿ ಜನಿಸಿದರು.
ಅಂದಿನ ಕಾಲದ ಟಾಪ್ ಹೀರೋ ಆಗಿದ್ದ ಎನ್ ಟಿಆರ್ ಅವರಂತೆ ಸತ್ಯನಾರಾಯಣ ಅವರು ಹೋಲಿಕೆ ಕಂಡು ಬರುತ್ತಿದ್ದರಿಂದ ಎನ್ಟಿಆರ್ ಅಭಿನಯದ ಮೊದಲ ದ್ವಿಪಾತ್ರ ಚಿತ್ರ ‘ರಾಮುಡು-ಭೀಮುಡು’ ಸೇರಿದಂತೆ ಇನ್ನೂ ಆರು ಚಿತ್ರಗಳಲ್ಲಿ ಸತ್ಯನಾರಾಯಣ ಅವರು ಎನ್ಟಿಆರ್ಗೆ ಡ್ಯೂಪ್ ಆಗಿ ನಟಿಸಿದ್ದಾರೆ.
13 ಚಿತ್ರಗಳಲ್ಲಿ ನಾಯಕ ನಟ
‘ಸಿಪಾಯಿ ಕೂತೂರು’ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಸತ್ಯನಾರಾಯಣ ಅವರು 13 ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ‘ನಾ ಪೇರೆ’. ಭಗವಾನ್’, ‘ಜೀವಿತಮೆ ಒಕ ನಾಟಕಂ’, ‘ಸೂರ್ಯಚಂದ್ರಲು’, ‘ಮೊರತೋಡು’, ‘ತಾಯಾರಮ್ಮ ಬಂಗಾರಯ್ಯ’, ಕನ್ನವರಿಲ್ಲು’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.
ಕೈಕಲ ಸತ್ಯನಾರಾಣ ಅವರ ನಿಧನಕ್ಕೆ ತೆಲುಗು ನಟ ಚಿರಂಜೀವಿ ಬಾಲಕೃಷ್ಣ ಸೇರಿದಂತೆ ಹಲವು ಕಲಾವಿದರು ಕಂಬನಿ ಮಿಡಿದಿದ್ದಾರೆ. Kaikala Satyanarayana: Tollywood veteran actor Kaikala Satyanarayana passed away…