ಯೋಗರಾಜ್ ಭಟ್ ನಿರ್ದೇಶನದ ಶಿವರಾಜಕುಮಾರ್ ಮತ್ತು ಪ್ರಭುದೇವ ನಾಯಕರಾಗಿ ನಟಿಸಿರುವ ‘ಕರಟಕ ದಮನಕ’ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ವಿಚಾರವಾಗಿ ಶಿವಣ್ಣ ಉತ್ತರ ಕರ್ನಾಟಕದದ್ಯಾಂತ ಪ್ರಚಾರ ಕಾರ್ಯ ನಡೆಸಲು ಮುಂದಾಗಿದ್ದಾರೆ.
ಶಿವರಾಜ್ ಕುಮಾರ್, ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಪ್ರವಾಸ ಕೈಗೊಂಡಿದ್ದಾರೆ. ಸ್ಥಳೀಯ ಜನರ ಸಂದರ್ಶನ, ಚಿತ್ರಮಂದಿರಗಳಿಗೆ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಈ ಯಾತ್ರೆ ಉತ್ತರ ಕರ್ನಾಟಕದ ಹಲವೆಡೆ ಸಂಚರಿಸಲಿದೆ. ಇಂದು ಬೆಳಗ್ಗೆ ಬೆ.9.30 ರಿಂದ10.30 ಚಿತ್ರದುರ್ಗದ ಬಸವೇಶ್ವರ ಚಿತ್ರಮಂದಿರ, ಮಧ್ಯಾಹ್ನ 12.30 ರಿಂದ 2 ರವರೆಗೆ ದಾವಣಗೆರೆಯ ತ್ರಿನೇತ್ರ ಚಿತ್ರಮಂದಿರ, ಸಂಜೆ 4 ರಿಂದ 5.30ರ ವರೆಗೂ ಹೊಸಪೇಟೆಯ ಸರಸ್ವತಿ ಚಿತ್ರಮಂದಿರ, ಸಂಜೆ 6 ರಿಂದ 7 ಬಳ್ಳಾರಿಯ ಗಂಗಾ ಚಿತ್ರಮಂದಿರಕ್ಕೆ ಚಿತ್ರ ತಂಡ ಭೇಟಿ ನೀಡಲಿದೆ.