Saturday, August 13, 2022
  • Home
  • About Us
  • Contact Us
  • Privacy Policy
  • Home
  • Newsbeat
  • Samagra karnataka
    • State
    • Hale Mysore
    • Coastal Karnataka
    • Malenadu Karnataka
    • Kalyana karnataka
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • More
    • IPL 2020
    • IPL 2021
    • Health
    • Saaksha Special
    • Marjala Manthana
    • Life Style
    • Cooking
    • Bigg Boss 8
    • Viral News
    • GALLERY
    • TECHNOLOGY
No Result
View All Result
Home Newsbeat

Bangalore | ಸಿದ್ದು ಸ್ಮೃತಿಗೆ ಗರ ಬಡಿದಿದೆಯೇ? ಬಿಜೆಪಿ ಪ್ರಶ್ನೆ

Mahesh M Dhandu by Mahesh M Dhandu
July 9, 2022
in Newsbeat, Politics, ರಾಜಕೀಯ
0
CM Bommai Siddaramaiah Saaksha Tv
0
SHARES
0
VIEWS
Share on FacebookShare on TwitterShare on WhatsappShare on Telegram

Bangalore | ಸಿದ್ದು ಸ್ಮೃತಿಗೆ ಗರ ಬಡಿದಿದೆಯೇ? ಬಿಜೆಪಿ ಪ್ರಶ್ನೆ

ಬೆಂಗಳೂರು :  ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರ್ ನಲ್ಲಿ ರಾಜ್ಯ ಬಿಜೆಪಿ ಸಮರ ಮುಂದುವರೆದಿದೆ. ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಅವರ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿತ್ತು. ಅರ್ಕಾವತಿ, ಕೆಪಿಎಸ್‌ಸಿ, ವಕ್ಫ್ ಆಸ್ತಿ ಕಬಳಿಕೆ, ಭೂ ಒತ್ತುವರಿ, ಸಿವಿಲ್ ಪೊಲೀಸ್ ನೇಮಕಾತಿ ಹಗರಣಗಳು ರಾರಾಜಿಸಿದ್ದವು. ‘ಕೈ’ ವಿರುದ್ಧ ಅಂದೇ ಬಿಜೆಪಿ ಧ್ವನಿ ಎತ್ತಿತ್ತು. ಸಿದ್ದು ಸ್ಮೃತಿಗೆ ಗರ ಬಡಿದಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

Related posts

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

August 13, 2022
K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

August 13, 2022

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಬಿಜೆಪಿ, 2014ರ ಮಾರ್ಚ್ 22 ರಂದು ಕೆಪಿಎಸ್ಸಿ ನೇಮಕಾತಿ ಪಟ್ಟಿ ಬಿಡುಗಡೆಯಾಯಿತಷ್ಟೆ. ಅಂದು ಸಂಜೆಯೇ ಈ ನೇಮಕಾತಿ ಹಿಂದಿನ ಕರ್ಮಕಾಂಡದ ಬಂಡವಾಳ ಹೊರಬಿತ್ತು. ಆ ಅಕ್ರಮದಲ್ಲಿ ಏಳು ಮಂದಿಯಷ್ಟೇ ಭಾಗಿ ಎಂದು ತೇಪೆ ಹಚ್ಚಿದ ಸಿದ್ದರಾಮಯ್ಯ, ಅದರ ಬೆನ್ನಲ್ಲೇ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕವನ್ನು ರದ್ದುಗೊಳಿಸಲಿಲ್ಲವೇ?

ಸಿದ್ದರಾಮಯ್ಯ ಅಧಿಕಾರಕ್ಕೆ ಬರುತ್ತಿದ್ದಂತೆ ಜಗದೀಶ್ ಶೆಟ್ಟರ್ ತಿರಸ್ಕರಿಸಿದ್ದ ಕಡತಕ್ಕೆ ತರಾತುರಿಯಲ್ಲಿ ಸಹಿ ಹಾಕುವ ಮೂಲಕ 541.25 ಎಕರೆ ಅರ್ಕಾವತಿ ಜಮೀನು ಡಿನೋಟಿಫಿಕೇಶನ್ ಮಾಡಿರಲಿಲ್ಲವೇ? ಆಗ ಇದನ್ನು ಬಯಲಿಗೆ ಎಳೆದು, ದನಿ ಎತ್ತಿದ್ದು ಇದೇ ಬಿಜೆಪಿ. ಸಿದ್ದರಾಮಯ್ಯ ಇದನ್ನು ನೆನಪಿಸಿಕೊಂಡರೆ ಕ್ಷೇಮ.

ಸಿದ್ದರಾಮಯ್ಯನವರ ಆಪ್ತ ಮಹದೇವ ಪ್ರಸಾದ್ ಸಹಕಾರ ಸಚಿವರಾಗಿದ್ದಾಗ, ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಿಟ್ಟಿದ್ದ ನಿವೇಶನಗಳ ಪೈಕಿ ಮೂರ್‍ಮೂರು ನಿವೇಶನಗಳನ್ನು ಅಕ್ರಮವಾಗಿ ಖರೀದಿ ಮಾಡಿರಲಿಲ್ಲವೆ? ಈ ಸಂಬಂಧ ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿರಲಿಲ್ಲವೇ? ಸಿದ್ದು ಸ್ಮೃತಿ ಮಂಕಾಗಿದೆಯೇ?#CorruptCONgress
6/7

— BJP Karnataka (@BJP4Karnataka) July 9, 2022

ಸಿದ್ದರಾಮಯ್ಯ ಆಪ್ತ ದಿನೇಶ್ ಗುಂಡೂರಾವ್ ಸಚಿವರಾಗಿದ್ದಾಗ ಅವರ ಕುಟುಂಬಸ್ಥರು ಬೆಂಗಳೂರಿನ ಹೊರವಲಯದಲ್ಲಿ 10.9 ಎಕರೆ ಸರಕಾರಿ ಜಮೀನು ಕಬಳಿಸಿರಲಿಲ್ಲವೇ? ಅಂದಿನ ಲೋಕಾಯುಕ್ತರು ಈ ಬಗ್ಗೆ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರಲಿಲ್ಲವೇ? ಮಾಜಿ ಸಿ.ಎಂ.ಗೆ ಕವಿದಿರುವ ಮರೆವಾದರೂ ಎಂಥದ್ದು?

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಖಮರುಲ್ ಇಸ್ಲಾಂ ಕೊರಳಿಗೆ ವಕ್ಫ್ ಆಸ್ತಿ ಕಬಳಿಕೆ ಹಗರಣ ಸುತ್ತಿಕೊಂಡಿರಲಿಲ್ಲವೇ? ಕಲಬುರಗಿಯ ಖಾಜಾ ಬಂದೇನವಾಜ್ ದರ್ಗಾಕ್ಕೆ ಸೇರಿದ 8.34 ಎಕರೆ ಜಮೀನು ಅಕ್ರಮವಾಗಿ ಕಬಳಿಸಿದ ಆರೋಪ ಬಂದಿತ್ತು. ಆಗ ಲೋಕಾಯುಕ್ತ ವಿಶೇಷ ನ್ಯಾಯಲಯ ತನಿಖೆ ನಡೆಸಲು ಆದೇಶ ನೀಡಿತ್ತು.

ಸಿದ್ದರಾಮಯ್ಯ ಆಪ್ತ ದಿನೇಶ್ ಗುಂಡೂರಾವ್ ಸಚಿವರಾಗಿದ್ದಾಗ ಅವರ ಕುಟುಂಬಸ್ಥರು ಬೆಂಗಳೂರಿನ ಹೊರವಲಯದಲ್ಲಿ 10.9 ಎಕರೆ ಸರಕಾರಿ ಜಮೀನು ಕಬಳಿಸಿರಲಿಲ್ಲವೇ? ಅಂದಿನ ಲೋಕಾಯುಕ್ತರು ಈ ಬಗ್ಗೆ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರಲಿಲ್ಲವೇ? ಮಾಜಿ ಸಿ.ಎಂ.ಗೆ ಕವಿದಿರುವ ಮರೆವಾದರೂ ಎಂಥದ್ದು?#CorruptCONgress
4/7

— BJP Karnataka (@BJP4Karnataka) July 9, 2022

ಸಿದ್ದರಾಮಯ್ಯನವರ ಆಪ್ತ ಮಹದೇವ ಪ್ರಸಾದ್ ಸಹಕಾರ ಸಚಿವರಾಗಿದ್ದಾಗ, ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಿಟ್ಟಿದ್ದ ನಿವೇಶನಗಳ ಪೈಕಿ ಮೂರ್‍ಮೂರು ನಿವೇಶನಗಳನ್ನು ಅಕ್ರಮವಾಗಿ ಖರೀದಿ ಮಾಡಿರಲಿಲ್ಲವೆ? ಈ ಸಂಬಂಧ ಚಾಮರಾಜನಗರ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಾಗಿರಲಿಲ್ಲವೇ? ಸಿದ್ದು ಸ್ಮೃತಿ ಮಂಕಾಗಿದೆಯೇ?

ಮಾನ್ಯ ಸಿದ್ದರಾಮಯ್ಯ ನವರು ಕರ್ನಾಟಕ ಲೋಕಾಯುಕ್ತವನ್ನು ಸಮಾಧಿ ಮಾಡಿದ್ದಕ್ಕೆ ಬೆಟ್ಟದಷ್ಟು ಪುರಾವೆಗಳಿವೆ. ರಾಜ್ಯ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರ ಎಲ್ಲವನ್ನೂ ಬಯಲಿಗೆ ಎಳೆಯಲಿದೆ. ಏರುಧ್ವನಿಯಲ್ಲಿ ಮಾತನಾಡಿದ ಮಾತ್ರಕ್ಕೆ ಎಲ್ಲವೂ ಸತ್ಯವಾಗುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದ್ದಾರೆ.

Tags: bangaloreBJPCongressSiddaramaiah
ShareTweetSendShare

Related Posts

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

by Mahesh M Dhandu
August 13, 2022
0

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹು ನಿರೀಕ್ಷಿತ ಸಿನಿಮಾ...

K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

by Mahesh M Dhandu
August 13, 2022
0

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ ಶಿವಮೊಗ್ಗ  : ರಾಜ್ಯದ ೧.೨೦ ಕೋಟಿ ಮನೆಗಳಲ್ಲಿ ತಿರಂಗ ಧ್ವಜ ಹಾರಿಸಲಾಗುತ್ತಿದೆ. ಅಮೃತ...

Har Ghar Tiranga

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ

by Mahesh M Dhandu
August 13, 2022
0

Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ ಹರ್ ಘರ್ ತಿರಂಗಾ ಅಭಿಯಾನ ಶುರು ಮನೆ ಮನೆಯಲ್ಲೂ ತಿರಂಗಾ ಹಾರಾಟ ದೇಶದ ಎಲ್ಲೆಡೆ ರಾಷ್ಟ್ರಪ್ರೇಮದ ಕೂಗು...

National Herald case:  3ನೇ ಸುತ್ತಿನ ವಿಚಾರಣೆ ED  ಮುಂದೆ ಹಾಜರಾದ ಸೋನಿಯಾ ಗಾಂಧಿ…

Sonia Gandhi – 2 ತಿಂಗಳಲ್ಲಿ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದ ಸೋನಿಯಾ ಗಾಂಧಿ

by Naveen Kumar B C
August 13, 2022
0

2 ತಿಂಗಳಲ್ಲಿ ಎರಡನೇ ಬಾರಿ ಕೊರೊನಾ ಸೋಂಕಿಗೆ ತುತ್ತಾದ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಅವರಿಗೆ ಮತ್ತೊಮ್ಮೆ ಕೊರೊನಾ ಸೋಂಕು ದೃಢಪಟ್ಟಿದೆ. ಪಕ್ಷದ ಪ್ರಧಾನ...

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ…

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ…

by Naveen Kumar B C
August 13, 2022
0

Har Ghar Tiranga: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಯೋಗಿ… ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ತಮ್ಮ ಅಧಿಕೃತ ನಿವಾಸದಲ್ಲಿ ತ್ರಿವರ್ಣ...

Load More

POPULAR NEWS

  • ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Honey Trap | ನವ್ಯ ಶ್ರೀ ಹನಿಟ್ರ್ಯಾಪ್ ಕೇಸ್ : ರಾಜ್ಯ ಕಾಂಗ್ರೆಸ್ ಗೆ ಮುಜುಗರ

    0 shares
    Share 0 Tweet 0
  • Astrology: ಮಹಾಲಕ್ಷ್ಮಿಯ ಈ ಮಂತ್ರವನ್ನು 108 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

the-first-look-of-vamana-will-be-released-on-august-15 saaksha tv

Vamana | ಇದೇ 15ಕ್ಕೆ ವಾಮನ ಮೊದಲ‌ ನೋಟ ಅನಾವರಣ

August 13, 2022
K S Eshwarappa Nehru's culture is like Jinnah's culture saaksha tv

K S Eshwarappa | ನೆಹರೂ ಸಂಸ್ಕೃತಿ ಎಂದರೆ ಜಿನ್ನಾ ಸಂಸ್ಕೃತಿ ಇದ್ದಂತೆ

August 13, 2022
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Politics
  • News
  • Business
  • Culture
  • National
  • Sports
  • Lifestyle
  • Travel
  • Opinion

© 2022 SaakshaTV - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram