BJP – ಉಡುಗೊರೆಯ ರೂಪದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ಮೈಲುಗಲ್ಲು
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚೆಕ್ ಮೂಲಕ 1.30 ಕೋಟಿ ರೂಪಾಯಿ ಲಂಚ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದೆ.
ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ… ಶಿಕ್ಷಕರ ನೇಮಕದಲ್ಲಿ ಕಿಕ್ ಬ್ಯಾಕ್, ಕೈಗೆ ದುಬಾರಿ ವಾಚ್ ಕಟ್ಟಲು ಕಿಕ್ ಬ್ಯಾಕ್, ಮನೆಕಟ್ಟಲು ಕಿಕ್ ಬ್ಯಾಕ್, ಉಡುಗೊರೆಯ ರೂಪದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ಮೈಲುಗಲ್ಲು ನೆಟ್ಟಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಡಳಿತ ನಡೆಸಿದ್ದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ ನಡೆಸಿದ್ದೇ ಜಾಸ್ತಿ ಎನ್ನುವುದು ಮತ್ತೆ ಮತ್ತೆ ರುಜುವಾತಾಗುತ್ತಿದೆ.
ಮಾನ್ಯ ಸಿದ್ದರಾಮಯ್ಯ ರವರು ಕೈಗೆ ಕಟ್ಟುವ ವಾಚಿನಿಂದ ಹಿಡಿದು ಓಡಾಡುವ ಕಾರಿನವರೆಗೆ ಎಲ್ಲವನ್ನೂ “ಪ್ರತಿಫಲಾರ್ಥ” ವಾಗಿ ಪಡೆದಿದ್ದಾರೆ.