ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹಣ ಹಾಗೂ ಮನೆ ಉಡುಗೊರೆ ನೀಡುತ್ತಿದ್ದಾರೆ ಎಂದು ಹೇಳಿದ ದುಷ್ಕರ್ಮಿಗಳು ಕರೆದೊಯ್ದು ತಾಯಿ ಪ್ರಜ್ಞೆ ತಪ್ಪಿಸಿ, ಮಗುವನ್ನು ಅಪಹರಿಸಿರುವ ಘಟನೆ ನಡೆದಿದೆ.
ಈ ಕುರಿತು ಮಹಿಳೆಯು ಅರ್ಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಂಪತಿಯು ನಗರದ ಹಿನು ಪ್ರದೇಶದ ಹೊರವಲಯದ ಟೀ ಸ್ಟಾಲ್ ನಲ್ಲಿ ತಿಂಡಿ ತಿನ್ನುತ್ತಿದ್ದರು, ಆ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಆರೋಪಿಗಳು, ಧೋನಿ ಅವರು ದುರ್ಗಾ ಪೂಜೆ ಹಿನ್ನೆಲೆಯಲ್ಲಿ ಬಡವರಿಗೆ 5 ಸಾವಿರ ರೂ ನಗದು ಹಾಗೂ ಮನೆ ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನು ನಂಬಿಸಿ, ಮಹಿಳೆಯನ್ನು ಹರ್ಮುದಲ್ಲಿನ ವಿದ್ಯುತ್ ಸರಬರಾಜು ಕಚೇರಿಗೆ ಕರೆದೊಯ್ದಿದ್ದಾರೆ.
ಈ ಫ್ಲಾಟ್ಗಳು ಲಭ್ಯವಿದೆ ಎಂದು ಯಾವುದೋ ನಕ್ಷೆ ತೋರಿಸುತ್ತಾ ಬಿಸ್ಕತ್ತು ಹಾಗೂ ನೀರನ್ನು ಕೈಗಿತ್ತಿದ್ದಾರೆ. ಬಿಸ್ಕತ್ತು ತಿಂದ ಕೂಡಲೇ ದಂಪತಿಗೆ ಪ್ರಜ್ಞೆ ಹೋಗಿದೆ. ಆಗ ಮಗು ಅಪಹರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.