ಮುಂದಿನ ಪಂದ್ಯದಲ್ಲಿ ಗೆಲ್ಲಬೇಕು ಅನ್ನೋ ಹಸಿವು ಹೆಚ್ಚಾಗಿದೆ : ಕೆ.ಎಲ್.ರಾಹುಲ್ kl rahul virat kohli test match saaksha tv
ಜೋಹಾನ್ಸ್ಬರ್ಗ್ : ಈ ಸೋಲಿನ ಬಳಿಕ ಮುಂದಿನ ಟೆಸ್ಟ್ ಗೆಲ್ಲಬೇಕೆಂಬ ಹಸಿವು ಇನ್ನೂ ಹೆಚ್ಚಾಗಿದೆ ಎಂದು ಟೀಂ ಇಂಡಿಯಾದ ಹಂಗಾಮಿ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.
ವಾಂಡರರ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಬಳಿಕ ಮಾತನಾಡಿದ ಕೆ.ಎಲ್.ರಾಹುಲ್, ನಾವು ಪ್ರತಿ ಪಂದ್ಯವನ್ನು ಗೆಲ್ಲಲ್ಲ ಬಯಸುತ್ತೇವೆ.
ಮೈದಾನದಲ್ಲಿ ಗೆಲುವಿಗಾಗಿ ಪೈಪೋಟಿ ನೀಡುತ್ತೇವೆ. ಆದ್ರೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನೀಡಿದ್ದು, ಗೆಲುವಿಗೆ ಅರ್ಹವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ ಕಠಿಣ ಪರಿಸ್ಥಿತಿಯಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಿದರು.
ಇದು ಆತ್ಮವಿಶ್ವಾಸ ನೀಡಲಿದ್ದು, ಮುಂದಿನ ಟೆಸ್ಟ್ನಲ್ಲಿ ನಮ್ಮನ್ನು ಮಾನಸಿಕವಾಗಿ ಇನ್ನಷ್ಟು ಬಲಿಷ್ಠರನ್ನಾಗಿಸುತ್ತದೆ ಎಂದು ಹೇಳಿದ್ದಾರೆ.
ನಾವು ಇಲ್ಲಿಗೆ ಬಂದಾಗ ನಿರೀಕ್ಷೆಯಂತೆ ಪ್ರತಿ ಟೆಸ್ಟ್ ಪಂದ್ಯವೂ ಸ್ಪರ್ಧಾತ್ಮಕ ಮತ್ತು ಸವಾಲಿನದಾಗಿರುತ್ತದೆ ಎಂಬುದನ್ನು ತಿಳಿದಿದ್ದೇವೆ.
ಕೇಪ್ಟೌನ್ನಲ್ಲಿ ನಡೆಯುವ ಮೂರನೇ ಟೆಸ್ಟ್ಗಾಗಿ ಎದುರು ನೋಡುತ್ತಿದ್ದೇವೆ ಎಂದು ಕೆಎಲ್ ವಿಶ್ವಾಸ ವ್ಯಕ್ತಪಡಿಸಿದರು.