ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ : ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಟ್ಟಹಾಸ ಮುಂದುವರೆದಿದ್ದು, ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನಾನಾ ಸರ್ಕಸ್ ನಡೆಸುತ್ತಿದೆ.
ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಮಾಡಿದ್ದ ವೀಕೆಂಡ್ ಲಾಕ್ ಡೌನ್ ಇಂದು ಬೆಳಗ್ಗೆ 6 ಗಂಟೆಗೆ ಅಂತ್ಯವಾಗಿದೆ.
ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಸಂಚಾರ, ಮೆಟ್ರೋ ಸಂಚಾರ ಎಂದಿನಂತೆ ಆರಂಭಗೊಂಡಿದೆ.
ಈ ಮಧ್ಯೆ ಕೊರೊನಾಗೆ ಕಡಿವಾಣ ಹಾಕಲು ವೀಕೆಂಡ್ ಕಫ್ರ್ಯೂ ಅಲ್ಲ, ವಾರ ಪೂರ್ತಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂಬ ಸುದ್ದಿ ರಾಜ್ಯದಲ್ಲಿ ಹರಿದಾಡುತ್ತಿದೆ.
ಇದಕ್ಕೆ ಪೂರಕವಾಗಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆಯಲಿದೆ.
ಈ ಸಭೆಯಲ್ಲಿ ಹಾಫ್ ಲಾಕ್ ಡೌನ್ ನಿಂದ ಆಗಿರುವ ಲಾಭ ನಷ್ಟಗಳ ಜೊತೆ ಜೊತೆಗೆ ಲಾಕ್ ಡೌನ್ ಬಗ್ಗೆ ಚರ್ಚೆಗಳು ನಡೆಯಲಿವೆ.
ಒಂದು ವೇಳೆ ಲಾಕ್ ಡೌನ್ ಅನಿವಾರ್ಯ ಎಂದಾದರೇ ಮಂಗಳವಾರದಿಂದ 10ರಿಂದ 12 ದಿನಗಳ ಕಾಲ ಬಿಗಿ ಕ್ರಮಕ್ಕೆ ಮುಂದಾಗಬಹುದು.
ಲಾಕ್ ಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕರೆ ವೀಕೆಂಡ್ ಕಫ್ರ್ಯೂ ಮಾದರಿ ರೂಲ್ಸ್ ಮುಂದುವರಿಯಬಹುದು. ರಾಜಧಾನಿಯಿಂದ ಬೇರೆ ಜಿಲ್ಲೆಗಳಿಗೆ ಓಡಾಟಕ್ಕೂ ನಿಬರ್ಂಧ ಹಾಕಬಹುದು.