ಲಾಕ್ ಡೌನ್ ಅನಿವಾರ್ಯ, ನಿಮ್ಮನ್ನ ನೀವು ರಕ್ಷಿಸಿಕೊಳ್ಳಿ : ಸುಧಾಕರ್
ಬೆಂಗಳೂರು : ಸೈಕಲ್ ಮುರಿಯಬೇಕು ಅಂದ್ರೆ ಲಾಕ್ ಡೌನ್ ಅನಿವಾರ್ಯ. ಎಲ್ಲಿ ಉದಾಸೀನ ಮಾಡ್ತಾರೆ ಅಲ್ಲಿ ಲಾಕ್ ಡೌನ್ ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಕಲ್ ಮುರಿಯಬೇಕು ಅಂದ್ರೆ ಲಾಕ್ ಡೌನ್ ಅನಿವಾರ್ಯ. ಆದ್ರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ಬರೋದು ಬೇಡ.
ಜನರಲ್ಲಿ ಮನವಿ ಮಾಡ್ತೀನಿ, ನಿಮ್ಮನ್ನ ನೀವು ರಕ್ಷಿಸಿಕೊಳ್ಳಿ. ಎರಡು ಕೋಟಿಗಿಂತ ಹೆಚ್ಚು ಟೆಸ್ಟಿಂಗ್ ಮಾಡಿಸಲಾಗ್ತಿದೆ.
ಐವತ್ತರಿಂದ ಎಪ್ಪತ್ತು ಸಾವಿರ ಟೆಸ್ಟಿಂಗ್ ಮಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಲಸಿಕಾ ಉತ್ಸವದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಕೋವಿಡ್ ಲಸಿಕೆ ಯೋಜನೆ ಆರಂಭ ಮಾಡಲಾಗಿದೆ.
ಪ್ರಧಾನಿ ಮೋದಿ ಅವರ ಕರೆಯಂತೆ, ರಾಜ್ಯದಲ್ಲಿ ಸಿಎಂ ಲಸಿಕಾ ಕಾರ್ಯಕ್ರಮಕ್ಕೆ ಸೂಚನೆ ನೀಡಿದ್ರು. ಎಲ್ಲಾ ಧರ್ಮದ ಮಹಿಳೆಯರು ಲಸಿಕೆ ಪಡೆದಿದ್ದಾರೆ. ಜ್ಯೋತಿ ಬಾಪುಲೆ ಜನ್ಮದಿನದಂದು ಮಹಿಳೆಯರಿಗೆ ಪ್ರಾಶಸ್ತ್ಯ ನೀಡಲಾಗಿದೆ.
ಎಲ್ಲಾ ಧರ್ಮದ ಮಹಿಳೆಯರನ್ನ ಆಯ್ಕೆ ಮಾಡಿ ಸಾಂಕೇತಿಕವಾಗಿ ಲಸಿಕೆ ಹಾಕಿ ಚಾಲನೆ ನೀಡಲಾಗಿದೆ. ನಮ್ಮ ಎಲ್ಲಾ ಕ್ರಮದ ಬಗ್ಗೆ ರಾತ್ರಿ ಪ್ರಧಾನಿ ಕರೆ ಮಾಡಿ ನಮ್ಮ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.