ಜನತಾ ಕರ್ಫ್ಯೂ ಬದಲಿಗೆ ಲಾಕ್ ಡೌನ್ Lockdown ಉತ್ತಮ : ಮುನಿಸ್ವಾಮಿ
ಚಿಂತಾಮಣಿ : ಕೊರೊನಾ ಕಂಟ್ರೋಲ್ ಗೆ ಜನತಾ ಕಫ್ರ್ಯೂ ಬದಲಿಗೆ ಲಾಕ್ ಡೌನ್ ಮಾಡುವುದೇ ಉತ್ತಮ ಎಂದು ಸಂಸದ ಎಸ್ ಮುನಿಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸಂಸದರು ಇಂದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಕಪ್ರ್ಯೂ ಬದಲಾಗಿ ಲಾಕ್ ಡೌನ್ ಮಾಡುವುದೇ ಉತ್ತಮ.
ಜನ ಎಚ್ವೆತ್ತುಕೊಳ್ಳದಿದ್ದರೆ ಲಾಕ್ ಡೌನ್ ಮಾಡುವುದರಲ್ಲಿ ಯಾವುದೆ ಸಂಶಯವೇ ಇಲ್ಲ. ನಾನು ಲಾಕ್ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಸಮಸ್ಯೆಗೆ ಸ್ಪಂದಿಸಿದ ಮುನಿಸ್ವಾಮಿ ಸ್ಥಳದಲ್ಲೇ ಎಂಬತ್ತು ಸಾವಿರ ಕೊಟ್ಟರು. ಬಳಿಕ ಕೊರೊನಾ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆ ಅತೀ ಮುಖ್ಯವಾಗಿದೆ.
ಆದಷ್ಟು ಬೇಗ ಆಂಬ್ಯುಲೆನ್ಸ್ ರಿಪೇರಿ ಮಾಡಿ ನನಗೆ ವಾಟ್ಸಾಪ್ ಮಾಡಿ ವೈದ್ಯರಿಗೆ ಸಂಸದ ಎಸ್ ಮುನಿಸ್ವಾಮಿ ಸೂಚನೆ ನೀಡಿದರು.