ಪಾಕಿಸ್ತಾನದ ಪರ ಘೋಷಣೆ ಕೂಗಿ ಸದ್ಯ ಪೊಲೀಸರ ವಶದಲ್ಲಿರುವ ಅಮೂಲ್ಯ ಲಿಯೋನ್ ವಿರುದ್ಧ ಕೋಲಾರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಕಿಡಿಕಾರಿದ್ದಾರೆ. ಭಾರತದಲ್ಲಿದ್ದುಕೊಂಡು ಪಾಕಿಸ್ಥಾನ ಪರ ಘೋಷಣೆ ಕೂಗಿದ್ದು ಅಕ್ಷ್ಯಮ್ಯ ಅಪರಾಧ. ಈ ರೀತಿಯ ಘೋಷಣೆ ಕೂಗಿದ್ದರ ಹಿಂದೆ ಪಾಕಿಸ್ತಾನದ ಕೈವಾಡ ಇರಬಹುದು. ಹಣ ಆಸೆಗೆ ಈ ಯುವತಿ ಹೀಗೆ ಮಾಡಿದ್ದಾಳೆ ಅನಿಸುತ್ತಿದೆ ಎಂದು ಆರೋಪಿಸಿದರು. ಅಮೂಲ್ಯ ಲಿಯೋನ್ ಳ ತಂದೆಯೇ ಮಗಳಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ. ಇಂತಹ ದೇಶದ್ರೋಹ ಘೋಷಣೆ ಕೂಗುವವರನ್ನು ಗಡಿಪಾರು ಮಾಡಿದಾಗ ಮಾತ್ರ ಬುದ್ಧಿ ಬರುತ್ತದೆ ಎಂದರು. ವಿರೋಧ ಪಕ್ಷಗಳು ಪ್ರಧಾನಿ ಮೋಧಿಯನ್ನು ವಿರೋಧಿಸುವ ನಿಟ್ಟಿನಲ್ಲಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ದೇಶದ್ರೋಹದ ಕಾನೂನಿನಲ್ಲಿ ತಿದ್ದುಪಡಿ ತಂದು ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹವರಿಗೆ ಬುದ್ಧಿ ಬರುತ್ತದೆ ಎಂದರು.
cwg-2026: ಒಂದೇ ಒಂದು ಕೆಜಿ.. ಕೈ ತಪ್ಪಿ ಹೋದ ಬಂಗಾರ.. ಲವ್ ಪ್ರೀತ್ಗೆ ಬೆಳ್ಳಿ, ಸೀಮಾಗೆ ಕಂಚು..!
ಭಾರತದ ಹೇವಿ ವೇಯ್ಟ್ ವೇಟ್ ಲಿಫ್ಟರ್ ಲವ್ ಪ್ರೀತ್ ಸಿಂಗ್ ಅವರು 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ದಾಖಲೆಯ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದಾನೆ. ವೃತ್ತಿ ಜೀವನದಲ್ಲಿ...








