T20 World Cup: ಈ ಆಟಗಾರನ ಅನುಪಸ್ಥಿತಿ ಭಾರತಕ್ಕೆ ದೊಡ್ಡ ನಷ್ಟ – ಮಹೇಲ ಜಯವರ್ಧನೆ..
ಏಷ್ಯಾ ಕಪ್ನಲ್ಲಿ ಭಾರತ ತಂಡ ತೋರಿದ ನಿರಾಶಾದಾಯಕ ಪ್ರದರ್ಶನ ನಂತರ T20 ವಿಶ್ವಕಪ್ ನ ದೃಷ್ಟಿಕೋನದಿಂದ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಿದೆ. ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತ ನಂತರ ಭಾರತ ಫೈನಲ್ನ ರೇಸ್ನಿಂದ ಹೊರಬಿದ್ದಿತ್ತು. ರವೀಂದ್ರ ಜಡೇಜಾ ಅವರಿಗಾದ ಗಾಯ ಭಾರತದ ಸೋಲಿಗೆ ಪ್ರಮುಖ ಕಾರಣವಾಗಿತ್ತು .
ಹಾಂಗ್ ಕಾಂಗ್ ವಿರುದ್ಧದ ಪಂದ್ಯದ ವೇಳೆ, ಜಡೇಜಾ ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿದರು, ಇದು ಪ್ಲೇಯಿಂಗ್ XI ಸಂಯೋಜನೆಯನ್ನು ಹಾಳುಮಾಡಿತು. ಶಸ್ತ್ರಚಿಕಿತ್ಸೆಯ ನಂತರ ಜಡೇಜಾ ಅವರು ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದಾರೆ.
ಟಿ 20 ವಿಶ್ವಕಪ್ ತಂಡದಲ್ಲಿ ಜಡೇಜಾ ಅನುಪಸ್ಥಿತಿಯು ಭಾರತಕ್ಕೆ ದೊಡ್ಡ ನಷ್ಟವಾಗಿದೆ ಎಂದು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ. ಈ ಸಮಯದಲ್ಲಿ ಜಡೇಜಾ ಉತ್ತಮ ಫಾರ್ಮ್ನಲ್ಲಿ ಕಾಣುತ್ತಿದ್ದರು, ಬಾಲ್ ಜೊತೆಗೆ ಅವರು ಬ್ಯಾಟ್ನಿಂದ ನಿಂದ ಸಹಿತ ಕೊಡುಗೆ ಕೊಡುತ್ತಿದ್ದರು. ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ನ ಮೊದಲ ಪಂದ್ಯದಲ್ಲಿ 35 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ಗೆಲುವಿನ ಹಾದಿ ತೋರಿಸಿದ್ದರು.
ಐಸಿಸಿ ರಿವ್ಯೂನಲ್ಲಿ ಮಹೇಲಾ ಜಯವರ್ಧನೆ ಮಾತನಾಡಿ ಎಡಗೈ ಬ್ಯಾಟ್ಸ್ಮನ್ ಅನುಪಸ್ಥಿತಿಯು ಕಳವಳದ ವಿಷಯವಾಗಿದೆ ಎಂದು ಹೇಳ್ಳಿದ್ದಾರೆ.