ಬೆಂಗಳೂರು: ರೇಗಿಸಿದ್ದ ಯುವಕನಿಗೆ ಚಾಕುವನಿಂದ ಇರಿದ ಘಟನೆಯೊಂದು ನಡೆದಿದೆ.
ಈ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲವ್ವ ನಿಮ್ಮವ್ವ ಎಲ್ಲವ್ವ ಎಂದು ರೇಗಿಸಿದ್ದ ಕೋಳಿ ಅಂಗಡಿ ಯುವಕನಿಗೆ ವಾರ್ನ್ ಮಾಡುವುದಕ್ಕೆ ಹೋಗಿದ್ದ ಸ್ನೇಹಿತ ಚಾಕುವಿನಿಂದ (stabbed) ಇರಿದಿದ್ದಾನೆ ಎನ್ನಲಾಗಿದೆ.
ಆಟೋ ಚಾಲಕ ಸುದೀಪ್ ಎಂಬ ವ್ಯಕ್ತಿ ವಿವೇಕ್ ರಾವ್ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಈ ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದವರು. ಸುದೀಪ್ಗೆ ಮದುವೆ ನಿಶ್ಚಯ ಆಗಿತ್ತು. ಅದೇ ಹುಡುಗಿ ಜೊತೆಗೆ ಆಟೋದಲ್ಲಿ ಸುದೀಪ್ ತೆರಳುತ್ತಿದ್ದ. ಸುದೀಪ್ ಮದುವೆ ಆಗುವ ಹುಡುಗಿ ಜೊತೆಗೆ ಆಕೆಯ ಸ್ನೇಹಿತೆ ಮಲ್ಲವ್ವ ಕೂಡ ಇದ್ದಳು. ಆಟೋದಲ್ಲಿ ಹೋಗುವಾಗ ಇಬ್ಬರು ಹುಡುಗಿಯರನ್ನ ವಿವೇಕ್ ರಾವ್ ರೇಗಿಸಿದ್ದಾನೆ. ಆಗ ರೊಚ್ಚಿಗೆದ್ದ ಸುದೀಪ್ ಪ್ರಶ್ನಿಸಿದ್ದಾನೆ. ಮಾತಿಗೆ ಮಾತು ಬೆಳೆದು ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.