Mandya | ಕಾವೇರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ರಾಜವಂಶಸ್ಥರನ್ನ ಆಹ್ವಾನಿಸಿ
ಮಂಡ್ಯ : ನಾಳೆ ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ.
ಹೀಗಾಗಿ ಬಾಗಿನ ಕಾರ್ಯಕ್ರಮಕ್ಕೆ ಮೈಸೂರು ರಾಜವಂಶಸ್ಥರನ್ನ ಆಹ್ವಾನಿಸುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಸಿಎಂ ಜೊತೆಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯಅವರಿಗೆ ಗೂಳಿಗೌಡ ಪತ್ರ ಬರೆದಿದ್ದಾರೆ.
ಪಾತ್ರದಲ್ಲಿ ಗೂಳಿಗೌಡ, KRS ಡ್ಯಾಂ ಕೇವಲ ಒಂದು ಡ್ಯಾಂ ಅಲ್ಲ, ಜನರ ಭಾವನಾತ್ಮಕ ವಿಚಾರ.
![Mandya Dinesh Gooligowda appeal to cm saaksha tv](http://saakshatv.com/wp-content/uploads/2022/07/mandya-KRS-300x232.jpg)
ಜಲಾಶಯ ಭರ್ತಿಯಾದರೇ ಬಾಗಿನ ಅರ್ಪಿಸುವುದು, ಪೂಜಿಸುವುದು ಪದ್ದತಿ.
KRS ಡ್ಯಾಂ 2.65 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಿದೆ.
ಮೈಸೂರು ಮಹಾರಾಜರ ದೂರದೃಷ್ಟಿಯ ಫಲ KRS ಜಲಾಶಯವಾಗಿದೆ.
ಆ ಹಿನ್ನಲೆ ಕಾವೇರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆ ರಾಜವಂಶಸ್ಥರು ಹಾಜರಿರಲಿ.
ಅದು ಕಾವೇರಿ ಕೊಳ್ಳದ ಜನರ ಬಹುದಿನಗಳ ಆಶಯವಾಗಿದೆ ಎಂದು ಬರೆದಿದ್ದಾರೆ.