ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕುಡಿಯುವ ನೀರಿನ ಕ್ಷಾಮ ಎದುರಾಗಿದೆ. ಹೀಗಾಗಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಸೂಚನೆ ಹೊರಡಿಸಿದೆ.
ನಗರದಲ್ಲಿ ನೀರಿನ ಸಮಸ್ಯೆಯ ನಡುವೆ ನಗರ ವಾಸಿಗಳಿಗೆ ಮತ್ತೊಂದು ಆತಂಕ ಎದುರಾಗಿದೆ. ಕುಡಿಯುವ ನೀರನ್ನು ಅನವಶ್ಯಕ ಉದ್ದೇಶಗಳಿಗೆ ಬಳಸಿದವರಿಗೆ ಮಂಡಳಿಯಿಂದ 5 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಕುಡಿಯುವ ನೀರು ಬಿಟ್ಟು ಇತರೆ ಬಳಕೆಗೆ ನೀರು ಸಿಗುತ್ತಿಲ್ಲ. ನೀರಿನ ಪರ್ಯಾಯ ಮೂಲಗಳಿಲ್ಲದ ಕಾರಣ ನಿವಾಸಿಗಳು ಚಿಂತಿಸುವಂತಾಗಿದೆ. ಹೀಗಾಗಿ ಈ ನಿಯಮ ಉಲ್ಲಂಘಿಸುವಂತಿಲ್ಲ ಎಂದು ಮಂಡಳಿ ಸೂಚಿಸಿದೆ.
ಡಿಯುವ ನೀರನ್ನು ಕಾರುಗಳನ್ನು ತೊಳೆಯುವುದು ಅಥವಾ ಸಸ್ಯಗಳಿಗೆ ಬಳಸುವುದು ಸೇರಿದಂತೆ ಅನಾವಶ್ಯಕ ಉದ್ಧೇಶಕ್ಕೆ ಬಳಸುವಂತಿಲ್ಲ. ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಜನರು ಕೊಳಚೆ ನೀರಿನ ಸಂಸ್ಕರಣಾ ಘಟಕದಿಂದ ಇನ್ನಿತರ ಬಳಕೆಗೆ ನೀರನ್ನು ಪಡೆಯುತ್ತಾರೆ. ಆದರೆ ಅಂತಹ ಆಯ್ಕೆಗಳಿಲ್ಲ. ಯಾವುದೇ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ವರದಿ ಮಾಡುವ ಮೂಲಕ ಸಾರ್ವಜನಿಕರು ಸಹಾಯ ಮಾಡಬೇಕೆಂದು ಮಂಡಳಿ ತಿಳಿಸಿದೆ.