ಕೊರೊನಾ ತೊಲಗಲಿ ಎಂದು ಮೇಕೆ, ಕುರಿ & ಕೋಳಿಗಳ ಬಲಿ corona virus
ಮಂಡ್ಯ : ಜಗತ್ತನ್ನೇ ತಲ್ಲಣಗೊಳಿಸಿರುವ ಹೆಮ್ಮಾರಿ ಕೊರೊನಾ ವೈರಸ್ ತೊಲಗಲಿ ಎಂದು ಮಳವಳ್ಳಿ ತಾಲೂಕಿನ ಚನ್ನಪಿಳ್ಳೆಕೊಪ್ಪಲು ಗ್ರಾಮದ ಗ್ರಾಮಸ್ಥರು 20ಕ್ಕೂ ಹೆಚ್ಚು ಮೇಕೆ,ಕುರಿ ಮತ್ತು ಕೋಳಿಗಳನ್ನು ಬಲಿ ನೀಡಿದ್ದಾರೆ.
ಚೆನ್ನಪಿಳ್ಳೆಕೊಪ್ಪಲು ಗ್ರಾಮಸ್ಥರು ಕೊರೊನಾ ತೊಲಗಲು ಸುಜ್ಜಲೂರು ಮಾರಮ್ಮ ದೇವಿಗೆ ಮೇಕೆ, ಕುರಿ, ಕೋಳಿಗಳನ್ನು ಬಲಿ ಕೊಟ್ಟು ಕೊರೊನಾ ಮಹಾಮಾರಿ ತೊಲಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.
ಅಂದಹಾಗೆ ಗ್ರಾಮಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡು ಈ ಆಚರಣೆ ಮಾಡಿದ್ದಾರೆ.
ಈ ಹಿಂದೆ ಗ್ರಾಮಗಳಿಗೆ ಸಾಂಕ್ರಾಮಿಕ ರೋಗಗಳು ಬಂದಾಗ ಇದೇ ರೀತಿ ಹಬ್ಬಗಳನ್ನು ಮಾಡಿದ್ದೇವೆ, ಈ ಸಂದರ್ಭ ರೋಗಗಳು ವಾಸಿಯಾಗಿವೆ.
ಅದೇ ರೀತಿ ಈಗಲೂ ಸಹ ಆಚರಣೆ ಮಾಡಿದ್ದೇವೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.