Minister-BC-Nagesh | ಟಿಪ್ಪು ಪಠ್ಯ ತೆಗೆದಿದ್ದು ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಆಗ್ತಿಲ್ಲ
ಹಾಸನ : ಟಿಪ್ಪು ಸುಲ್ತಾನ್ ಪಠ್ಯ ತೆಗೆದಿದ್ದು ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಆದಕ್ಕೆ ಈ ರೀತಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಸಚಿವ ಸಚಿವ ಬಿ.ಸಿ.ನಾಗೇಶ್ ಕಿಡಿಕಾರಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬರಗೂರು ರಾಮಚಂದ್ರಪ್ಪ ಪಠ್ಯಪುಸ್ತಕ ಪರಿಷ್ಕರಣೆ ಸಮಯದಲ್ಲಿ ಉನ್ನೀಕೃಷ್ಣನ್, ಮೈಸೂರು ಮಹಾರಾಜರು, ಕೆಂಪೇಗೌಡರು ಸೇರಿದಂತೆ ಕುವೆಂಪು ಅಧ್ಯಾಯ ತೆಗೆದಿದ್ದಾರೆ.
ಇದಕ್ಕೆ ಕಾಂಗ್ರೆಸ್ನಲ್ಲಿ ಉತ್ತರವಿಲ್ಲ. ಆದ್ರೆ ಟಿಪ್ಪು ಸುಲ್ತಾನ್ ಪಠ್ಯ ತೆಗೆದಿದ್ದು ಕಾಂಗ್ರೆಸ್ ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಗರಂ ಆದರು.
ಮುಂದುವರಿದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಚಿವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಕ್ಕಳಿಗೆ ಅಲ್ಲಾ, ಜೀಸಸ್ ಬಗ್ಗೆ ಮಾತ್ರ ಹೇಳಿಕೊಟ್ಟರು.
ಪಠ್ಯದಲ್ಲಿ ಇಲ್ಲದ ಸಾಹಿತಿಗಳು ತಮ್ಮ ಪಠ್ಯ ತೆಗೆಯಲು ಪತ್ರ ಬರೆದು ದೊಡ್ಡ ಸುದ್ದಿ ಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾದಾಗ ಪ್ರಶಸ್ತಿ ವಾಪಸ್ ಪಡೆಯುವುದಾಗಿ ಹೇಳಿದರು.
ಆದರೆ ಯಾರೂ ವಾಪಸ್ ಪಡೆಯಲಿಲ್ಲವಲ್ಲ ಎಂದು ಕುಟುಕಿದರು.