MP S. Muniswamy | ನೆಹರು ಕುಟುಂಬದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ
ಕೋಲಾರ : ಶಿವಮೊಗ್ಗದಲ್ಲಿ ನಡೆದಿರುವ ಬೆಳವಣಿಗೆಗಳನ್ನು ಕೋಲಾರ ಸಂಸದ ಎಸ್.ಮುನಿಸ್ವಾಮಿ ಖಂಡಿಸಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಎಸ್.ಮುನಿಸ್ವಾಮಿ, ದೇಶ ವಿರೋಧಿ ಚಟುವಟಿಕೆಯಲ್ಲಿ ಯಾವುದೇ ಸಮುದಾಯ ಭಾಗಿಯಾಗಿದರೂ ಸಹಿಸಲ್ಲ.
ಈ ಕೃತ್ಯವೆಸಗಿದವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಕೃತ್ಯ ಮಾಡಲು ಎದುರುವಂತಹ ಕ್ರಮ ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕೇವಲ ನೆಹರು ಕುಟುಂಬ ಮಾತ್ರ ಕೆಲಸ ಮಾಡಿಲ್ಲ, ಲಕ್ಷಾಂತರ ಕುಟುಂಬಗಳ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ.
ಈ ದೇಶ ವಿಭಜನೆಯಾಗಲು ಯಾರು ಕಾರಣ ? ಪ್ರಧಾನಿ ಮಂತ್ರಿಯಾಗಲು ಯಾರಿಗೆ ಬಹುಮಾತವಿತ್ತು ?
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಯಾವ ರೀತಿ ನಿರ್ಲಕ್ಷ್ಯ ಮಾಡಿದರೂ ಏನುವ ಕುರಿತು ಜನರಿಗೆ ಗೊತ್ತಿದೆ.
ನೆಹರು ಅವರನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿಲ್ಲ ಎಂದು ಎಸ್ ಮುನಿಸ್ವಾಮಿ ಹೇಳಿದ್ದಾರೆ.