ADVERTISEMENT
Tuesday, May 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರವಿಶಾಸ್ತ್ರಿ – ವಿರಾಟ್ ಜೊತೆ ವಾಗ್ವಾದ – ಮುಖ ನೋಡಿ ಮಾತನಾಡುತ್ತಿರಲಿಲ್ಲ -ಎಮ್.ಎಸ್. ಪ್ರಸಾದ್..!

admin by admin
June 9, 2021
in Newsbeat, Sports, ಕ್ರೀಡೆ
virat kohli ravi shastri saakshatv msk prasad
Share on FacebookShare on TwitterShare on WhatsappShare on Telegram

ರವಿಶಾಸ್ತ್ರಿ – ವಿರಾಟ್ ಜೊತೆ ವಾಗ್ವಾದ – ಮುಖ ನೋಡಿ ಮಾತನಾಡುತ್ತಿರಲಿಲ್ಲ -ಎಮ್.ಎಸ್. ಪ್ರಸಾದ್..!

virat kohli ravi shastri saakshatvರವಿಶಾಸ್ತ್ರಿ.. ಟೀಮ್ ಇಂಡಿಯಾದ ಹೆಡ್ ಕೋಚ್. ಅದಕ್ಕಿಂತ ಮುನ್ನ ಅದ್ಭುತ ಕ್ರಿಕೆಟ್ ವಿಕ್ಷಣೆ ವಿವರಣೆಕಾರ. ಅದಕ್ಕೂ ಮುಂಚೆ ಭಾರತ ಕ್ರಿಕೆಟ್ ತಂಡದ ಪರ ಹಲವು ವರ್ಷಗಳ ಕಾಲ ಆಡಿದ ಅನುಭವಿ ಕ್ರಿಕೆಟಿಗ. ಜೊತೆಗೆ ಚಾಣಕ್ಷ.. ಟೀಮ್ ಮ್ಯಾನೇಜ್ ಮೆಂಟ್ ಹೇಗೆ ನಿರ್ವಹಿಸಬೇಕು ಎಂಬುದನ್ನು ರವಿಶಾಸ್ತ್ರಿಯವರ ಬಳಿ ಕಲಿಯಬೇಕಿದೆ. ಆಟಗಾರರ ವೀಕ್ ನೆಸ್, ಸ್ಟ್ರೇಂತ್ ಏನು ಎಂಬುದು ಗೊತ್ತು..

Related posts

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

May 5, 2026
ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

May 5, 2026

ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ನಾಯಕ. ಪಕ್ಕಾ ಮುಂಗೋಪಿ.. ಅಷ್ಟೇ ಒರಟ… ಆಕ್ರಮಣಕಾರಿ ಪ್ರವೃತ್ತಿ, ಹೋರಾಟದ ಛಲ-ಹಠ. ಕ್ರಿಕೆಟ್ ಮೇಲಿನ ಬದ್ಧತೆಯನ್ನು ಯಾರು ಕೂಡ ಪ್ರಶ್ನೆ ಮಾಡುವ ಹಾಗಿಲ್ಲ.
ಹೀಗೆ ಟೀಮ್ ಇಂಡಿಯಾದ ಗುರು -ಶಿಷ್ಯರ ಸಂಬಂಧ ಕೂಡ ಅಷ್ಟೇ ಚೆನ್ನಾಗಿತ್ತು. ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಒಂದೇ ನಾಣ್ಯದ ಎರಡು ಮುಖ ಎಂಬಂತೆ ಹೇಳಲಾಗುತ್ತಿದೆ. ಆದ್ರೂ ಕೊಹ್ಲಿಗಿಂತ ರವಿಶಾಸ್ತ್ರಿ ಮೇಲೆ ಕೆಲವೊಂದು ಟೀಕೆಗಳು, ಆರೋಪಗಳು ಇವೆ. ಆದ್ರೆ ತಂಡದ ಗೆಲುವು, ಯಶಸ್ಸು ಎಲ್ಲವನ್ನೂ ಮರೆಮಾಚುವಂತೆ ಮಾಡುತ್ತಿದೆ.
virat kohli ravi shastri saakshatvಅದೆಲ್ಲಾ ಸರಿ.. ಇಬ್ಬರು ಘಟಾನುಘಟಿಗಳು. ಟೀಮ್ ಇಂಡಿಯಾದಲ್ಲಿ ಇವರಿಬ್ಬರನ್ನು ಯಾರು ಕೂಡ ಪ್ರಶ್ನೆ ಮಾಡುವ ಧೈರ್ಯ ಮಾಡುತ್ತಿಲ್ಲ. ಆದ್ರೆ ಬಿಸಿಸಿಐ ಅಧಿಕಾರಕ್ಕೆ ಇವರಿಬ್ಬರು ತಲೆಬಾಗಲೇಬೇಕಾಗುತ್ತಿತ್ತು. ಬಿಸಿಸಿಐ ಬಿಗ್ ಬಾಸ್ ಗಳ ಅಣತಿಯನ್ನು ಪ್ರಶ್ನೆ ಮಾಡುವ ಮಟ್ಟಿಗೆ ಹೋಗಿಲ್ಲ.
ಇನ್ನು ಆಯ್ಕೆ ಸಮಿತಿ.. ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿಯವರನ್ನು ಸಂಭಾಳಿಸುವುದು ಅಷ್ಟೊಂದು ಸುಲಭವಿಲ್ಲ. ಆಯ್ಕೆ ಸಮಿತಿ ಪ್ರಬಲವಾಗಿದ್ರೂ ಇವರಿಬ್ಬರ ಅನುಭವ ಮತ್ತು ಆಟದ ಖದರಿಗೆ ಹೆಚ್ಚು ಪ್ರಶ್ನೆ ಕೂಡ ಮಾಡುವಂಗಿಲ್ಲ.

ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರೆ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿಯವರನ್ನು ಯಾವ ರೀತಿ ಸಂಭಾಳಿಸುತ್ತಿದೆ ಎಂಬುದರ ಬಗ್ಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಎಮ್.ಎಸ್. ಕೆ. ಪ್ರಸಾದ್ ಹೇಳಿಕೊಂಡಿದ್ದಾರೆ.

virat kohli ravi shastri saakshatv msk prasadಅನುಭವ ಮತ್ತು ಯಶಸ್ಸಿನ ಬಗ್ಗೆ ಮಾತನಾಡುವುದಾದ್ರೆ ಶಾಸ್ತ್ರಿ ಮತ್ತು ಕೋಹ್ಲಿಗಿಂತ ಎಮ್.ಎಸ್.ಕೆ. ಪ್ರಸಾದ್ ಸಾಕಷ್ಟು ಹಿಂದೆ ಇದ್ದಾರೆ. ಆದ್ರೂ ಎಮ್. ಎಸ್. ಕೆ. ಪ್ರಸಾದ್ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ಬಲಿಷ್ಠ ತಂಡವನ್ನು ಕಟ್ಟಲು ಸಾಕಷ್ಟು ಶ್ರಮಪಟ್ಟಿದ್ದಾರೆ.
ಮುಲಾಜಿಗೆ ಬಗ್ಗದೆ, ಬೆದರಿಕೆಗೆ ಜಗ್ಗದೇ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಲು ಎಮ್. ಎಸ್. ಕೆ. ಪ್ರಸಾದ್ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಆಯ್ಕೆ ವಿಚಾರದಲ್ಲಿ ಯಾವ ರಾಜಿನೂ ಮಾಡಿಕೊಂಡಿಲ್ಲ. ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ನಂತಹ ಮ್ಯಾಚ್ ವಿನ್ನರ್ ಗಳನ್ನು ಆಯ್ಕೆ ಮಾಡಿರೋದು ಎಮ್.ಎಸ್. ಕೆ. ಪ್ರಸಾದ್.

ಅಂದ ಹಾಗೇ ಎಮ್. ಎಸ್. ಕೆ. ಪ್ರಸಾದ್ ಸೌಮ್ಯ ಹಾಗೂ ಮೃದು ಸ್ವಭಾವದ ವ್ಯಕ್ತಿ. ಹಾಗಿದ್ದುಕೊಂಡು ಶಾಸ್ತ್ರಿ, ವಿರಾಟ್ ನಂತರ ಆಕ್ರಮಣಕಾರಿ ಪ್ರವೃತ್ತಿಯವರನ್ನು ಹೇಗೆ ಸಂಭಾಳಿಸಿದ್ರು ಎಂಬುದು ಪ್ರಶ್ನೆಯಾಗೇ ಉಳಿದಿದೆ.
team india saakshatv ಇದೀಗ ಅದಕ್ಕೆಲ್ಲಾ ಉತ್ತರವನ್ನು ಪ್ರಸಾದ್ ನೀಡಿದ್ದಾರೆ. ಟೀಮ್ ಆಯ್ಕೆಯ ವೇಳೆ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಜೊತೆ ಸಾಕಷ್ಟು ಭಾರಿ ಸಹಜವಾಗಿಯೇ ಚರ್ಚೆ ಮಾಡಿದ್ದೇವೆ. ಕೆಲವೊಂದು ಬಾರಿ ವಿಕೋಪಕ್ಕೂ ಹೋಗಿದ್ದು ಉಂಟು. ಸಭೆಯಿಂದ ಹೊರನಡೆದಾಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿರಲಿಲ್ಲ. ಅಷ್ಟೊಂದು ಗಂಭೀರವಾದ ವಾದ ವಿವಾದಗಳು ನಡೆಯುತ್ತಿದ್ದವು ಎಂಬ ವಿಚಾರವನ್ನು ಎಮ್. ಎಸ್. ಕೆ. ಪ್ರಸಾದ್ ಬಹಿರಂಗಪಡಿಸಿದ್ದಾರೆ.
ಆದ್ರೆ ಇದೆಲ್ಲಾ ಆ ಕ್ಷಣಕ್ಕೆ.. ಆ ದಿನಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಮರುದಿನ ಮುಂಜಾನೆ ನಿನ್ನೆ ಏನು ನಡೆದಿಲ್ಲ ಎಂಬಂತೆ ಅದನ್ನು ಮರೆತು ಮಾತನಾಡುತ್ತಿದ್ದೇವೆ. ಯಾಕಂದ್ರೆ ನಾವು ಏನು ವಾದ ಮಾಡುತ್ತಿದ್ದೇವು ಎಂಬುದು ತಂಡದ ಹಿತಕ್ಕಾಗಿ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಿದ್ದರು. ಅವರು ವೃತ್ತಿಪರರಾಗಿದ್ದರು. ಹೀಗಾಗಿ ಅವರ ಜೊತೆ ಉತ್ತಮ ಸಂಬಂಧವನ್ನು ಹೊಂದಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ಎಮ್. ಎಸ್. ಕೆ. ಪ್ರಸಾದ್ ಹೇಳಿದ್ದಾರೆ.
ಒಟ್ಟಿನಲ್ಲಿ ಎಮ್.ಎಸ್. ಕೆ. ಪ್ರಸಾದ್ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ತನ್ನ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ಜೊತೆಗೆ ಟೀಮ್ ಇಂಡಿಯಾದ ಯಶಸ್ಸಿನ ಹಿಂದೆ, ಯುವ ಆಟಗಾರರಿಗೆ ಅವಕಾಶವನ್ನು ಕಲ್ಪಿಸಿದ್ದಾರೆ.

Tags: #rishab pant#saakshatvbcciCrickethardhik pandyaICCindiaMSK PrasadrainewzravishatriSportsteam indiavirat kohli
ShareTweetSendShare
Join us on:

Related Posts

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

by Shwetha
May 5, 2026
0

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ಭಾರೀ ಸಂಚಲನ ಸೃಷ್ಟಿಸಿದ್ದಾರೆ. ಅವರು ಸ್ಪರ್ಧಿಸಿದ ಎರಡು ಕ್ಷೇತ್ರಗಳಾದ ಪೆರಂಬೂರು ಮತ್ತು ತಿರುಚಿ ಈಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪೆರಂಬೂರಿನಲ್ಲಿ...

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

ಮೋದಿ ಆಗಮನಕ್ಕೆ ಮಮತಾ ಸಾಮ್ರಾಜ್ಯ ಪತನ: ಬಿಜೆಪಿ ಟೀಕೆ

by Shwetha
May 5, 2026
0

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಗೆಲುವಿನ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ (BJP) ಪ್ರತಿಕ್ರಿಯೆ ನೀಡಿದೆ. ತೆಲಂಗಾಣ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ನರೇಂದ್ರ...

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

ಸಂಪುಟ ಸರ್ಕಸ್ : ಹಳಬರಿಗೆ ಕೊಕ್ ಹೊಸಬರಿಗೆ ಚಾನ್ಸ್ ಕಾಂಗ್ರೆಸ್ ನಾಯಕರ ಎದೆಯಲ್ಲಿ ಢವಢವ ಶುರು ಯಾರು IN ಯಾರು OUT !?

by Shwetha
May 5, 2026
0

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಈಗ ಭಾರಿ ಸಂಚಲನ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿರುವ ಬೆನ್ನಲ್ಲೇ ಅಧಿಕಾರ ಹಂಚಿಕೆಯ ಸೂತ್ರ ಮತ್ತೆ ಮುನ್ನೆಲೆಗೆ...

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

ಬಂಗಾಳದಲ್ಲಿ ಕೇಸರಿ ಸುನಾಮಿ: ಮೋದಿಯ ಝಲ್ಮುರಿ ರುಚಿಗೆ ದೀದಿ ಪಡೆ ಕಂಗಾಲು, ಜಾರ್ಗ್ರಾಮ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ

by Shwetha
May 5, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ದಶಕಗಳ ಕಾಲ ತನ್ನದೇ ಆದ ಭದ್ರಕೋಟೆ ಹೊಂದಿದ್ದ ತೃಣಮೂಲ ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೆಟ್ಟು ನೀಡಿದ್ದು,...

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

ನಿಜವಾಯ್ತು PK ಭವಿಷ್ಯ.. ವಿಜಯ್ ಗೆಲುವು ವಿಡಿಯೋ ವೈರಲ್!

by Shwetha
May 5, 2026
0

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (PK) ನೀಡಿದ್ದ ಭವಿಷ್ಯವಾಣಿ ಇದೀಗ ನಿಜವಾಗಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ನೇತೃತ್ವದ ಟಿವಿಕೆ (TVK) ಭರ್ಜರಿ ಗೆಲುವು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram