ಬೆಂಗಳೂರು -ಮೈಸೂರು ಹೈವೇಯಲ್ಲಿ ರಾಮನಗರ ಜಿಲ್ಲಾ ಪೊಲೀಸರು ಅತೀ ಹೆಚ್ಚು ದಂಡ ವಸೂಲಿಸಿ ಮಾಡಿದ್ದಾರೆ.
ದಶಪಥದಲ್ಲಿ 100 ಕಿ.ಮೀ ಸ್ಪೀಡ್ ಲಿಮಿಟ್ ಮಾಡಿರುವುದರಿಂದಾಗಿ ಸ್ಪೀಡ್ ಲಿಮಿಟ್, ಲೇನ್ ಡಿಸಿಪ್ಲೀನ್, ಸೀಟ್ ಬೆಲ್ಟ್, ಹೆಲ್ಮೆಟ್ಗೆ ಫೈನ್ ಹಾಕಲು ಪ್ರಾರಂಭಿಸಿದ್ದು 15 ದಿನಗಳಲ್ಲಿ 16 ಲಕ್ಷ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.
ಕಳೆದ ನಾಲ್ಕೈದು ತಿಂಗಳಲ್ಲಿ ಬರೋಬ್ಬರಿ 200ಕ್ಕೂ ಅಧಿಕ ಜನರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಎಕ್ಸ್ ಪ್ರೆಸ್ ಹೈವೆಯಲ್ಲಿ ರಸ್ತೆ ಗ್ರಿಪ್ ಜೊತೆಗೆ ಸೇಫ್ಟಿ ಇಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ನಡೆಸಿದರು.
ಹೀಗಾಗಿ ಸ್ಪೀಡ್ ಲಿಮಿಟ್, ಲೇನ್ ಡಿಸಿಪ್ಲೀನ್, ಸೀಟ್ ಬೆಲ್ಟ್, ಹೆಲ್ಮೆಟ್ ಗೆ ಫೈನ್ ಹಾಕಲು ಕಳೆದ 15 ದಿನಗಳಿಂದ ಕಾರ್ಯಾಚರಣೆ ಪ್ರಾರಂಭ ಮಾಡಲಾಗಿತ್ತು. ಇಲ್ಲಿ ಕಳೆದ 15 ದಿನಗಳಲ್ಲಿ 2.340 ಕೇಸ್ ದಾಖಲಾಗಿವೆ. ಓವರ್ ಸ್ಪೀಡ್ ಗೆ 877 ಕೇಸ್, ಲೇನ್ ಡಿಸಿಪ್ಲೀನ್ ಗೆ 580 ಕೇಸ್, ಸೀಟ್ ಬೆಲ್ಟ್ ಗೆ 189 ಕೇಸ್, ಹೆಲ್ಮೆಟ್ ಇಲ್ಲದಕ್ಕೆ 274 ಕೇಸ್ ದಾಖಲಾಗಿದೆ. ಇದರ ಪೈಕಿ ಒಟ್ಟು 16,24,000 ರೂ. ದಂಡ ವಸೂಲಿಯಾಗಿದೆ.