Narendra Modi : ಬಂಜಾರ ಸಮುದಾಯಕ್ಕೆ ಹಕ್ಕು ಪತ್ರ ವಿತರಿಸಿದ ಪ್ರಧಾನಿ ಮೋದಿ…
ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯ ಮಳಖೇಡದಲ್ಲಿಂದು ಬಂಜಾರ ಸಮುದಾಯದವರಿಗೆ ಹೊಸ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಿಸಿದರು. ಬಂಜಾರ ನಗಾರಿ ಬಾರಿಸುವ ಮೂಲಕ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ, ಸಾಂಕೇತಿಕವಾಗಿ ಐವರಿಗೆ ಹಕ್ಕುಪತ್ರ ನೀಡಿದರು. ಗಾಣಗಾಪುರದ ಗುರು ದತ್ತಾತ್ರೇಯರು , ಶರಣ ಬಸವೇಶ್ವರ ಹಾಗೂ ರಾಷ್ಟ್ರಕೂಟ ಸಾಮ್ರಾಟರನ್ನು ಸ್ಮರಿಸುತ್ತಾ ಮಾತು ಶುರು ಮಾಡಿದ ಪ್ರಧಾನಿಗಳು ಸಾಮಾಜಿಕ ನ್ಯಾಯಕ್ಕಾಗಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಈ ಐತಿಹಾಸಿಕ ದಿನದಂದು 52 ಸಾವಿರಕ್ಕೂ ಅಧಿಕ ತಾಂಡ ನಿವಾಸಿಗಳು ಹಕ್ಕುಪತ್ರ ಪಡೆದುಕೊಂಡಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಸವಣ್ಣನವರ ಅನುಭವ ಮಂಟಪದ ಸಾಮಾಜಿಕ ನ್ಯಾಯದ ಮಾದರಿಯನ್ನು ಅನುಸರಿಸುತ್ತಿದೆ. ಎಲ್ಲರ ವಿಕಾಸ, ವಿಶ್ವಾಸ ಹಾಗೂ ಸಹಯೋಗವು ಬಸವಣ್ಣನವರ ಆಶಯನ್ನು ಒಳಗೊಂಡಿದೆ. ಬಂಜಾರ ಸಮುದಾಯದ ಹಕ್ಕುಪತ್ರ ವಿತರಣೆಯು ಇದರ ವಿಸ್ತಾರ ರೂಪವಾಗಿದೆ ಎಂದು ತಿಳಿಸಿದರು. ಬಂಜಾರ ಸಮುದಾಯವು ದೇಶದ ಪ್ರಗತಿಯಲ್ಲಿ ತಮ್ಮದೇ ಆದ ಸಹಕಾರವನ್ನು ನೀಡಿದೆ. 1994ರ ವಿಧಾನಸಭಾ ಚುನಾವಣಾ ಸಮಯದಲ್ಲಿ ಲಕ್ಷಾಂತರ ಜನರ ಆಶೀರ್ವಾದ ದೊರಕಿದೆ. ಮುಂಬರುವ ವರ್ಷಗಳಲ್ಲಿ ಈ ಸಮುದಾಯದ ಅಭಿವೃದ್ಧಿಗೆ ಅಗತ್ಯ ಹಣವನ್ನು ಮೀಸಲಿಡಲಾಗುವುದು. ಬಿಜೆಪಿ ಸರ್ಕಾರದ ಯೋಜನೆಗಳಿಂದಾಗಿ ಸರಿಸುಮಾರು 50 ವರ್ಷದ ಬಳಿಕೆ ಬಂಜಾರ ಸಮುದಾಯದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಎಂದು ಹೇಳಿದರು.
ಇದಕ್ಕೂ ಮುನ್ನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ ಬಂಜಾರ ಶಾಲು ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
Narendra Modi: Prime Minister Modi distributed the right deed to the Banjara community…