ಅಯ್ಯಪ್ಪನ ಸನ್ನಿಧಿಯಲ್ಲೂ ಮುಂದಿನ ಸಿಎಂ ಸಿದ್ದು ಕೂಗು..
ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಅವರ ಅಭಿಮಾನಿಗಳು ಪದೇ ಪದೇ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಅದರಂತೆ ಇದೀಗ ಶಬರಿಮಲೆಯಲ್ಲೂ ಮುಂದಿನ ಸಿಎಂ ಸಿದ್ದರಾಮಯ್ಯ ಕೂಗು ಕೇಳಿಬಂದಿದೆ.
ಬದಾಮಿ ಪಟ್ಟಣದ ಸಿದ್ದರಾಮಯ್ಯ ಅಭಿಮಾನಿಗಳು ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿ ಯಾತ್ರೆ ಕೈಗೊಂಡಿದ್ದು, ಅಯ್ಯಪ್ಪನ ಸನ್ನಿಧದಲ್ಲೂ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬೇಡಿಕೊಂಡಿದ್ದಾರೆ.
ಬದಾಮಿ ಪಟ್ಟಣದ ನಿವಾಸಿ ಹನುಮಂತ ಖಾನಗೌಡ್ರ ಅಪ್ಪಟ ಸಿದ್ದರಾಮಯ್ಯ ಅಭಿಮಾನಿಯಾಗಿದ್ದು, ದಾರಿಯುದ್ದಕ್ಕೂ ಸ್ವಾಮಿ ಶರಣಂ ಎಂಬ ದ್ಘೋಷದೊಂದಿಗೆ ಮುಂದಿನ ಬಾರಿ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಪ್ರಾರ್ಥಿಸಿದ್ದಾರೆ.
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇನ್ನು ಕಳೆದ ದಿನಗಳ ಹಿಂದೆ ಮೈಸೂರು ಭಾಗದ ಹಳ್ಳಿಯಲ್ಲೂ ಕೂಡ ಸಿದ್ದರಾಮಯ್ಯ ಅಭಿಮಾನಿಯೊಬ್ಬರು ಹೋರಿಯ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದಿದ್ದರು.