ಕ್ಕೋಡಿ: ಬಿಜೆಪಿ ತೊರೆದು ಕಾಂಗ್ರೆಸ್ ಗೆ ಬಂದಿದ್ದ ಜಗದೀಶ್ ಶೆಟ್ಟರ್ ಮರಳಿ ಗೂಡು ಸೇರಿದ್ದಾರೆ. ಅವರ ಜೊತೆಯಾಗಿಯೇ ಕೈ ಪಡೆ ಸೇರಿದ್ದ ಲಕ್ಷ್ಮಣ್ ಸವದಿ (Laxman Savadi) ಕೂಡ ಮರಳಿ ಹೋಗಬಹುದು ಎಂಬ ಮಾತು ಕೇಳಿ ಬರುತ್ತಿದ್ದು, ಅದಕ್ಕೆ ಪುಷ್ಠಿ ನೀಡುವಂತಹ ಘಟನೆ ಈಗ ಬೆಳಕಿಗೆ ಬಂದಿದೆ.
ಸಕ ಲಕ್ಷ್ಮಣ ಸವದಿ ಅವರ ಹುಟ್ಟುಹಬ್ಬದ ಬ್ಯಾನರ್ ಗಳಲ್ಲಿ ಕಾಂಗ್ರೆಸ್ ಚಿಹ್ನೆ ಕಾಣದಿರುವುದೇ ಈ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಪೆ.16 ರಂದು ಲಕ್ಷ್ಮಣ್ ಸವದಿ ಅವರ ಹುಟ್ಟು ಹಬ್ಬವಿದ್ದು, ಅಥಣಿಯಲ್ಲಿ ಅವರ ಆಪ್ತರು, ಮುಖಂಡರು ಹಾಗೂ ಸ್ಥಳೀಯ ಸಂಸ್ಥೆಯ ಸದಸ್ಯರಿಂದ ಪಟ್ಟಣದಲ್ಲಿ ಶುಭಾಶಯ ಕೋರಿ ನೂರಾರು ಫ್ಲೆಕ್ಸ್ಗಳನ್ನು ಹಾಕಿದ್ದಾರೆ. ಆದರೆ, ಈ ಬ್ಯಾನರ್ ಗಳಲ್ಲಿ ಕಾಂಗ್ರೆಸ್ ಚಿಹ್ನೆ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಆದರೆ, ನಾನು ಬಿಜೆಪಿ ಮರಳಿ ಸೇರುವುದಿಲ್ಲ ಎಂದು ಸವದಿ ಹೇಳಿದ್ದರೂ ಬಿಜೆಪಿಯಲ್ಲಿ ಅವರನ್ನು ಕರೆ ತರುವ ಕಾರ್ಯ ನಡೆಯುತ್ತಿದೆ ಎನ್ನಲಾಗುತ್ತಿದೆ.