ಪರೀಕ್ಷೆಯಲ್ಲಿ ಕಾಪಿ ಮಾಡೋಕೆ ಬಿಟ್ಟಿಲ್ಲ ಅಂತ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು..!
ಶಿವಮೊಗ್ಗ : ವಿದ್ಯಾರ್ಥಿಗಳು ಏನೇನೋ ಕಾರಣಗಳಿಗೆ ಪ್ರತಿಭಟನೆ ಮಾಡ್ತಾರೆ.. ಪರೀಕ್ಷೆ ಹಾಲ್ ಟಿಕೆಟ್ ಸಿಕ್ಕಿಲ್ಲ, ಪರೀಕ್ಷೆ ತಡವಾಗಿ ಶುರುವಾಯ್ತು, ಪ್ರಶ್ನೆ ಪತ್ರಿಕೆ , ಮುಂದೂಡಿಕೆ ಇನ್ನೂ ಅನೇಕ ಕಾರಣಗಳಿಗೆ ಪ್ರತಿಭಟನೆಗಳನ್ನ ಮಾಡಿದ್ದಾರೆ. ಆದ್ರೆ ಕೋಲ್ಕತಾ ಮೂಲದ ಈ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದೇ ಪ್ರತಿಭಟನೆ ನಡೆಸಿದ್ದಾರೆ. ಅದಕ್ಕೆ ಕಾರಣ ಅವರಿಗೆ ಕಾಪಿ ಮಾಡೋದಕ್ಕೆ ಅವಕಾಶ ನೀಡದೇ ಇರೋದು.
ಹೌದು… ಮಧ್ಯವರ್ತಿಯೊಬ್ಬರ ಮೂಲಕ ನರ್ಸಿಂಗ್ ಪರೀಕ್ಷೆ ಬರೆಯಲು ಶಿವಮೊಗ್ಗಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪೆರೀಕ್ಷೆಯಲ್ಲಿ ಕಾಪಿ ಮಾಡಿಸುವ ಭರವಸೆಯನ್ನ ನೀಡಲಾಗಿತ್ತಂತೆ.. ಮಧ್ಯವರ್ತಿಯೊಬ್ಬ ಲಕ್ಷ ಲಕ್ಷ ಹಣ ಪಡೆದು ಪಾಸ್ ಮಾಡಿಸುವ ಭರವಸೆ ನಿಡಿದ್ದನಂತೆ.
ಆದ್ರೆ ಪರೀಕ್ಷೆಯಲ್ಲಿ ಪುಸ್ತಕ ನೋಡಲು ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಠಾಣಾ ಮೆಟ್ಟಿಲೇರಿ ತಮಗೆ ತಮ್ಮ ಹಣವನ್ನ ವಾಪಸ್ ಕೊಡಿಸುವಂತೆ ಪಟ್ಟುಹಿಡಿದಿದ್ದಾರೆ.
ಅಮಿತ್ ಶಾ , ಯೋಗಿ ಆದಿತ್ಯನಾಥ್ ಗೆ ಕೊಲೆ ಬೆದರಿಕೆ..! ಪ್ರಮುಖ ಸ್ಥಳಗಳ ಮೇಲೆ ದಾಳಿ ಮಾಡುವ ಧಮ್ಕಿ..!
ದೇಶದಲ್ಲಿ ಕೊರೊನಾ 2ನೇ ಅಲೆ – ಒಂದೇ ದಿನ 1.15 ಲಕ್ಷ ಕೇಸ್ ಗಳು ಪತ್ತೆ – ಬಲಿಯಾದವರೆಷ್ಟು..?