ಮಂಡ್ಯದಲ್ಲಿ ಪುಂಡರ ಅಟ್ಟಹಾಸ – ಸರಿಯಾಗಿ ಬೈಕ್ ಓಡಿಸು ಎಂದಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
ಸರಿಯಾಗಿ ಬೈಕ್ ಓಡಿಸಿ ಎಂದಿದ್ದಕ್ಕೆ ವ್ಯಕ್ತಿಯ ಮೇಲೆ ಪುಂಡರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯದ ಯಲಿಯೂರು ಬಳಿ ನಡೆದಿದೆ. ಸರಿಯಾಗಿ ಮೀಸೆ ಚಿಗುರದ ಯುವಕರು ಹಾಡುಹಗಲೇ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲೇ ಲಾಂಗ್ ಹಿಡಿದು ರೌಡಿಸಂ ನಡೆಸುತ್ತಿದ್ದಾರೆ.
ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ಪುಂಡರು ನೋಡಿ “ಬೈಕ್ ಸರಿಯಾಗಿ ಓಡಿಸಿ ನಿಮ್ಮಿಂದ ಎಲ್ಲರಿಗೂ ತೊಂದರೆಯಾಗುತ್ತೆ” ಎಂದು ವ್ಯಕ್ತಿ ಹೇಳಿದ್ದಾರೆ
ನಿನಗೇನೋ ಸುಮ್ಮನೆ ಹೋಗೋ ಎಂದು ಪುಂಡರು ಹೇಳಿದ್ದಾರೆ. ಹೀಗೆ ಓಡಿಸಿದ್ರೆ ಬೇರೆಯವರು ಸಾಯುತ್ತಾರೆ ಸರಿಯಾಗಿ ಓಡಿಸಿ ಎಂದ ವ್ಯಕ್ತಿ ತಿರುಗೇಟು ನೀಡಿದ್ದಾರೆ ಇಷ್ಟೇಕ್ಕೆ ತೂಬಿನಕೆರೆ ಗ್ರಾಮದ ವ್ಯಕ್ತಿಯನ್ನ ಅಡ್ಡಗಟ್ಟಿ ವ್ಯಕ್ತಿಯ ಮೇಲೆ ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ.
ಗಂಭೀರ ಗಾಯವಾಗಿರುವ ವ್ಯಕ್ತಿಯನ್ನ ಮಿಮ್ಸ್ನಲ್ಲಿ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಮಾಡಿ ಪರಾರಿಯಾಗಿರುವ ಪುಂಡರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.