ಲಕ್ನೋ: ಪ್ರೀತಿಸಿದ್ದಾಳೆಂಬ ಕಾರಣಕ್ಕೆ ಸೋಹದರನೊಬ್ಬ ಸಹೋದರಿಯ (Sister) ರುಂಡ ಕತ್ತರಿಸಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ತೆರಳುತ್ತಿದ್ದ ವ್ಯಕ್ತಿಯನ್ನು ಪೊಲೀಸರು ರಸ್ತೆಯಲ್ಲಿ ಬಂಧಿಸಿರುವ ಘಟನೆ ಉತ್ತರಪ್ರದೇಶದ (Uttar Pradesh) ಬಾರಾಬಂಕಿಯಲ್ಲಿ (Barabanki) ನಡೆದಿದೆ.
ರಿಯಾಜ್ (22) ಬಂಧಿತ ಆರೋಪಿ. ಸಹೋದರಿ ಆಶಿಫಾ (18) ಸಹೋದರನಿಂದಲೇ ಕೊಲೆಯಾದ ಯುವತಿಯಾಗಿದ್ದು, ಈ ಘಟನೆ ಉತ್ತರಪ್ರದೇಶದ ಬಾರಾಬಂಕಿಯ ಫತೇಪುರ್ ಪ್ರದೇಶದ ಮಿಥ್ವಾರ ಗ್ರಾಮದಲ್ಲಿ ನಡೆದಿದೆ. ಆಶಿಫಾ ಇತ್ತೀಚಿಗೆ ಅದೇ ಗ್ರಾಮದ ಚಂದ್ ಬಾಬು ಎಂಬು ಯುವಕನನ್ನು ಪ್ರೀತಿಸಿ, ಆತನೊಂದಿಗೆ ಓಡಿ ಹೋಗಿದ್ದಳು. ಈ ಕುರಿತು ಪೊಲೀಸರು ದೂರು ಕೂಡ ಯುವತಿಯನ್ನು ರಕ್ಷಿಸಿ, ಯುವಕನನ್ನು ಜೈಲಿಗೆ ಕಳುಹಿಸಿದ್ದರು.
ತಂಗಿಯ ಪ್ರೇಮ ಸಂಬಂಧವನ್ನು ರಿಯಾಜ್ ವಿರೋಧಿಸುತ್ತಿದ್ದ. ಈ ವಿಷಯವಾಗಿ ಅಣ್ಣ-ತಂಗಿಯ ನಡುವೆ ಜಗಳ ನಡೆದಿದ್ದು, ಸಿಟ್ಟಿನ ಭರದಲ್ಲಿ ರಿಯಾಜ್ ಹರಿತವಾದ ಆಯುಧದಿಂದ ತನ್ನ ತಂಗಿ ಆಶಿಫಾಳ ಶಿರಚ್ಛೇದ ಮಾಡಿ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ.