ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೊದಲೇ ದಿನದಿಂದಲೇ ಪಾಕಿಸ್ತಾನದಲ್ಲಿ ಭಯ ಮತ್ತು ಆತಂಕ ಸೃಷ್ಟಿಸಿದೆ. ಈ ಕಾರ್ಯಾಚರಣೆಯ ಪ್ರಭಾವ ಎರಡನೇ ದಿನ ಪಾಕಿಸ್ತಾನದ ಜನಜೀವನದ ಮೇಲೆ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ರಾಷ್ಟ್ರದ ಭವಿಷ್ಯದ ಬಗ್ಗೆ ಪಾಕಿಸ್ತಾನದ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಕೆಲವರು ತಮ್ಮ ಭಾವನೆಗಳನ್ನು ನಿಗ್ರಹಿಸಿಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಖಾಸಗಿ ಟಿವಿ ಚಾನೆಲ್ಗಳಲ್ಲಿ ಪ್ರಸಾರವಾದ ವಿಡಿಯೋಗಳಲ್ಲಿ ಪಾಕಿಸ್ತಾನದ ಸಂಸದ ತಾಹಿರ್ ಇಕ್ಬಾಲ್ ಅಶ್ರುಪೂರ್ಣವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ.
ಭಾರತದ ಸೇನೆಗೆ ನಾವೇನು ಉತ್ತರ ಕೊಡೋದು? ಎಂದು ಕಣ್ಣೀರಿಟ್ಟ ತಾಹಿರ್
ಸಂಸದ ತಾಹಿರ್ ಮಾತನಾಡುತ್ತಾ, ನಮ್ಮ ನಾಡು ಭವಿಷ್ಯವಿಲ್ಲದ ಸ್ಥಿತಿಯಲ್ಲಿ ಸಿಲುಕಿದೆ. ಜನರು ಭಯಭೀತರಾಗಿದ್ದಾರೆ. ಭಾರತದಿಂದ ನಮ್ಮನ್ನು ಉಳಿಸೋಕೆ ಅಲ್ಲಾಹನ ಮೊರೆ ಹೋಗ್ತೀನಿ ಎಂದು ಕಣ್ಣೀರು ಹಾಕಿದ್ದಾರೆ. ಈ ಘಟನೆಯ ವಿಡಿಯೋ ಪಾಕಿಸ್ತಾನದ ಜನತೆ ಮತ್ತು ಭದ್ರತಾ ವ್ಯವಸ್ಥೆಯ ಮೇಲೆ ಈ ಕಾರ್ಯಾಚರಣೆಯ ಮಾನಸಿಕ ಪರಿಣಾಮವನ್ನು ಸ್ಪಷ್ಟಪಡಿಸುತ್ತದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆ
ಈ ವಿಡಿಯೋಗಳು ಟ್ವಿಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಭಾರತದಲ್ಲಿ ಜನರು ಇದನ್ನು ಭಾರತೀಯ ಸೇನೆಯ ಶಕ್ತಿ ಪ್ರದರ್ಶನ ಎಂಬಂತೆ ಪ್ರಶಂಸಿಸುತ್ತಿದ್ದಾರೆ. ಹಲವರು ಆಪರೇಷನ್ ಸಿಂಧೂರ್ ಹೆಸರೇ ಸಾಕು, ಪಾಕಿಸ್ತಾನ ನಡುಗುತ್ತಾ ಇದೆ ಎಂಬ ರೀತಿಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.