ಅಥಣಿ ಪಟ್ಟಣಕ್ಕೆ ಬಂದ ಆಕ್ಸಿಜನ್ ಸಿಲಿಂಡರ್ ಗಳು
ಜಗತ್ತಿನ ಹಲವೆಡೆ ಕೋವಿಡ್ ಎರಡನೆಯ ಅಲೆ ಸಾವಿನ ಅಲೆಯನ್ನೆ ಏಬ್ಬಿಸಿದ್ದು ಯುದ್ದೋಪಾದಿಯಲ್ಲಿ ಕೋವಿಡ್ ವಾರಿಯರ್ ಗಳು ಕೆಲಸ ಮಾಡುತ್ತಿದ್ದಾರೆ. ಆಳಾಗಿ ದುಡಿ ಅರಸನಾಗಿ ಉಣ್ಣು ಅನ್ನುವಂತೆ ಸದ್ಯ ಅಧಿಕಾರಿಗಳು ಸ್ವತಃ ಶ್ರಮದಾನ ಮಾಡುವ ಸ್ಥಿತಿ ಅಥಣಿ ಪಟ್ಟಣದಲ್ಲಿ ಎದುರಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಆಸ್ಪತ್ರೆ ಸದ್ಯ ಐವತ್ತು ಹಾಸಿಗೆಗಳ ವ್ಯವಸ್ಥೆ ಇದ್ದು ಎಂಭತ್ತಕ್ಕೂ ಅಧಿಕ ಕೋವಿಡ್ ಪೇಷಂಟ್ಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ತಾಲ್ಲೂಕಿನಲ್ಲಿ ತಹಶಿಲ್ದಾರ ಕಚೇರಿಯಿಂದಲೂ ಕೋವಿಡ್ ವಾರ್ ರೂಮ್ ರಚನೆ ಮಾಡಲಾಗಿದ್ದು ಸಂಪೂರ್ಣ ಜವಾಬ್ದಾರಿಯನ್ನು ಸದ್ಯ ತಾಲ್ಲೂಕು ಆಡಳಿತಕ್ಕೆ ವಹಿಸಿಕೊಡಲಾಗಿದೆ.
ಈಗಾಗಲೇ ಮೃತ ಪಟ್ಟ ಕೋವಿಡ್ ರೋಗಿಗಳ ಹೆಸರಿನಲ್ಲಿ ರೆಮೆಡಿಸಿವರ್ ಇಂಜೆಕ್ಷನ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೆ ಸದ್ಯ ಎಲ್ಲ ಜವಾಬ್ದಾರಿ ಯನ್ನು ತಾಲ್ಲೂಕು ಟಾಸ್ಕ್ ಪೆÇೀರ್ಸ ಕಮಿಟಿಗೆ ವಹಿಸಲಾಗಿದೆ. ಇಂದು ಆಸ್ಪತ್ರೆಗೆ ಬಂದ ಇಪ್ಪತ್ತಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳನ್ನು ಇಳಿಸಿಕೊಳ್ಳಲು ಕೂಡ ಅಧಿಕಾರಿಗಳೇ ಮುಂದಾಗಿ ಕೆಲಸಮಾಡಿದ್ದು ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.