ನಿಜಾಮರ ಕಾಲದ ಪೆಟ್ರೋಲ್ ಪಂಪ್ ಪತ್ತೆಯಾಗಿದ್ದು, ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಹೈದರಾಬಾದ್ ಮಹಾನಗರದ ಕೆಬಿಆರ್ ಪಾರ್ಕ್ನಲ್ಲಿ ನಿಜಾಮರ ಕಾಲದ ಈ ಪೆಟ್ರೋಲ್ ಪಂಪ್ ಪತ್ತೆಯಾಗಿದೆ. ಉದ್ಯಾನದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅದನ್ನು ಗಮನಿಸಿದ್ದಾರೆ. ಬಂಕ್ನ ಫೋಟೋಗಳನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.
ಇಷ್ಟು ವರ್ಷ ಗಿಡ ಮರಗಳ ಮಧ್ಯೆ ಮರೆಯಾಗಿದ್ದ ಈ ಪೆಟ್ರೋಲ್ ಪಂಪ್ ಬೇಸಿಗೆ ಬಂದಿದ್ದಕ್ಕೆ ಕಾಣಿಸುತ್ತಿದೆ.
ನಿಜಾಮ ತನ್ನ ಕಾರುಗಳು, ಮೋಟಾರು ಯಂತ್ರಗಳು ಮತ್ತು ಇತರ ವಾಹನಗಳಿಗೆ ಇಂಧನ ತುಂಬಲು ಇದನ್ನು ಬಳಸುತ್ತಿದ್ದ ಎನ್ನಲಾಗುತ್ತಿದೆ. ಮೀರ್ ಉಸ್ಮಾನ್ ಅಲಿ ಖಾನ್ ಎಂಬಾತ ಹೈದರಾಬಾದ್ ರಾಜ್ಯ ಆಳಿದ ಕೊನೆಯ ನವಾಬ. ಆ ವೇಳೆ ಅವರು ವಿಶ್ವದ ಶ್ರೀಮಂತ ವ್ಯಕ್ತಿ ಎಂದು ಕೂಡ ಹೇಳಲಾಗುತ್ತಿತ್ತು. ಹೈದರಾಬಾದ್ ನಿಜಾಮ್ ಒಡೆತನದಲ್ಲಿದ್ದ ಈ ಉದ್ಯಾನವನವನ್ನು ನಗರ ಭೂ ಸೀಲಿಂಗ್ ಕಾಯ್ದೆಯಡಿ ಸರ್ಕಾರ ಸ್ವಾಧೀನ ಮಾಡಿಕೊಂಡಿದೆ. ಸದ್ಯ ಜನರು ಈ ಕುರಿತು ಆಸಕ್ತಿ ತೋರುತ್ತಿದ್ದಾರೆ.