ಹಲವು ದಿನಗಳಿಂದ ಕಳಪೆ ಕೃಷಿ ಕೀಟನಾಶಕ ವಿರುದ್ಧ ಹೋರಾಟ ಮಾಡುತ್ತಿರುವ ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಮಾರಾಟಗಾರರು ಇಲ್ಲವೆ ಕೀಟನಾಶಕ ಕಂಪನಿಗಳು ಕಳಪೆ ಗುಣಮಟ್ಟದ ಕೃಷಿ-ರಾಸಾಯನಿಕಗಳ ಮಾರಾಟ ಮಾಡಿದ್ದು ಕಂಡು ಬಂದರೆ ಜೈಲು ಗ್ಯಾರಂಟಿ ಎಂಬ ಆದೇಶ ಹೊರಡಿಸಲು ಸಿದ್ಧತೆ ನಡೆಸಿದೆ. ನಷ್ಟ ಉಂಟಾದರೆ ರೈತರಿಗೆ ಪರಿಹಾರ ನೀಡುವ ಮಸೂದೆಯನ್ನು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ. ಇದಲ್ಲದೆ ಕೀಟನಾಶಕ ಜಾಹೀರಾತುಗಳ ಮೇಲೆ ಕಣ್ಣಿಟ್ಟಿರುವ ಇಲಾಖೆ, ರೈತರ ದಿಕ್ಕು ತಪ್ಪಿಸಿ ಔಷಧಿ ಮಾರಾಟ ಮಾಡಿದ್ರೂ ಸಹ ಕಾನೂನಿನ ಏಟು ಬೀಳೋದು ಗ್ಯಾರಂಟಿ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಜಾವಡೇಕರ್, ರೈತರ ಕೃಷಿಯ ಹಿತಾಸಕ್ತಿ ಕಾಪಾಡುವ ಸಲುವಾಗಿ ಈ ಮಸೂದೆ ಜಾರಿಗೆ ತರುತ್ತಿದ್ದು, ಷರತ್ತು, ನಿಯಮಗಳನ್ನು ಉಲ್ಲಂಘಿಸಿದರೆ ಕನಿಷ್ಠ 25 ಸಾವಿರದಿಂದ ಗರಿಷ್ಠ 50 ಲಕ್ಷ ರೂಪಾಯಿ ತನಕ ದಂಡವನ್ನೂ ಮತ್ತು ಗರಿಷ್ಠ 5 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸುವ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.
ಕೇಜ್ರಿವಾಲ್ ಜೈಲಿನಿಂದ ಆಡಳಿ ನಡೆಸುವಂತಿಲ್ಲ; ಗವರ್ನರ್ ಸಕ್ಸೇನಾ
ಮದ್ಯನೀತಿ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಲ್ಲಿಂದಲೇ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಹೇಳಿದ್ದಾರೆ. ಈಗ ಅರವಿಂದ್...